Bigg Boss Kannada 11: ಕಿಚ್ಚನ ಮುಂದೆ ಬಯಲಾಯ್ತು ಭವ್ಯ ತ್ರಿವಿಕ್ರಮ ಲವ್ ವಿಚಾರ.! ಸುದೀಪ್ ಹೇಳಿದ್ದೇನು..?

ಜನವರಿ 19, 2025 - 14:02
 0  9
Bigg Boss Kannada 11: ಕಿಚ್ಚನ ಮುಂದೆ ಬಯಲಾಯ್ತು ಭವ್ಯ ತ್ರಿವಿಕ್ರಮ ಲವ್ ವಿಚಾರ.! ಸುದೀಪ್ ಹೇಳಿದ್ದೇನು..?

 

 

ವಾರದ ಬಿಗ್ ಬಾಸ್ ಕನ್ನಡದಲ್ಲಿ ಅನಿರೀಕ್ಷಿತ ತಿರುವುಗಳು ಕಂಡುಬಂದಿವೆ. ಟಾಸ್ಕ್ನಲ್ಲಿ ಸೋತ ತ್ರಿವಿಕ್ರಂ ಅವರು ನಾಮಿನೇಷನ್ನಿಂದ ಪಾರಾಗಿದ್ದಾರೆ. ವಾರ ಫಿನಾಲೆ ಹಂತ ತಲುಪಲು ಟಾಸ್ಕ್ಗಳಲ್ಲಿ ಸಾಕಷ್ಟು ಟ್ವಿಸ್ಟ್ ಮತ್ತು ಭಿನ್ನವಾಗಿರೋ ಆಟವನ್ನೇ ಬಿಗ್ ಬಾಸ್ ನೀಡಿದ್ದರು. ಅದರಲ್ಲಿ ಕನ್ನಡಿ ನೋಡಿ ಧನರಾಜ್ ಆಟ ಪೂರ್ಣಗೊಳಿಸಿದರು ಎಂಬ ಕಾರಣಕ್ಕೆ ಅವರಿಗೆ ನೀಡಿದ್ದ ಇಮ್ಯೂನಿಟಿಯನ್ನು ಬಿಗ್ ಬಾಸ್ ಹಿಂಪಡೆದರು. ಹಾಗಾಗಿ ಮಿಡ್ ವೀಕ್ ಎಲಿಮಿನೇಷನ್ ಪ್ಲ್ಯಾನ್ ಅನ್ನು ರದ್ದು ಮಾಡಲಾಯ್ತು.

 ಇದೀಗ ಬಿಗ್ ಬಾಸ್ನಲ್ಲಿ ತ್ರಿವಿಕ್ರಂ ಹಾಗೂ ಭವ್ಯಾ ಕ್ಲೋಸ್ ಆಗಿದ್ದಾರೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ತ್ರಿವಿಕ್ರಂ ಅವರು ಭವ್ಯಾಗೆ ನೇರವಾಗಿ ಲವ್ ಪ್ರಪೋಸ್ ಇಟ್ಟಿದ್ದರು. ಪ್ರಪೋಸ್ ಭವ್ಯಾ ಒಪ್ಪಿಕೊಂಡೂ ಇಲ್ಲ, ತಿರಸ್ಕರಿಸಲೂ ಇಲ್ಲ. ಬಗ್ಗೆ ಮನೆಗೆ ಅತಿಥಿಯಾಗಿ ಬಂದ ಗೋಲ್ಡ್ ಸುರೇಶ್ ಪ್ರಶ್ನೆ ಮಾಡಿದ್ದಾರೆ

ಇಂದು ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ ಎಪಿಸೋಡ್ನಲ್ಲಿ ಮತ್ತೆ ಪ್ರೇಮ ಕಹಾನಿ ಸದ್ದು ಮಾಡಿದಂತೆ ಕಾಣುತ್ತಿದೆ. ತ್ರಿವಿಕ್ರಮ್ ಅವರು ಪ್ರಪೋಸ್ ಮಾಡಿದ್ದಾರೆ ಎಂದು ಮನೆಯ ಮಂದಿಯೆಲ್ಲ ಭಾವಿಸಿದ್ದರು. ಆದರೆ ಈಗ ಅದೆಲ್ಲಾ ಏನೂ ಇಲ್ಲ ಎಂದು ನಾಚುತ್ತಲೇ ಕಿಚ್ಚನ ಮುಂದೆ ಭವ್ಯ ಹಾಗೂ ತ್ರಿವಿಕ್ರಮ್ ಹೇಳಿದ್ದಾರೆ. ಆದರೆ ಅವರ ಮಧ್ಯೆ ನಿಜವಾಗಲೂ ಏನಿದೆ ಎನ್ನುವುದನ್ನೂ ಇಬ್ಬರೂ ಬಿಟ್ಟುಕೊಟ್ಟಿಲ್ಲ.

ಕಿಚ್ಚನ ಸುದೀಪ ಅವರ ಮಾತಿಗೆ ಉತ್ತರಿಸುವಾಗ ಭವ್ಯ ಅವರು, ಥರ ಏನೂ ಕನೆಕ್ಷನ್ ಇಲ್ಲ ಸರ್ ಎಂದು ತ್ರಿವಿಕ್ರಮ್ ಪಕ್ಕ ಕುಳಿತೇ ಮಾತು ಹೇಳಿದ್ದಾರೆ. ಆದರೆ ಮಾತಿನ ಅರ್ಥ ಏನು ಎಂಬುದು ಅರ್ಥ ಆಗಿಲ್ಲ. ಏಕೆಂದರೆ ಬಿಗ್ಬಾಸ್ ಮುಗಿಯುತ್ತ ಬರುತ್ತಿದ್ದಂತೆ, ಹೊರ ಬಂದ ಮೇಲೆ ಇಬ್ಬರು ದೂರ ದೂರ ಆಗ್ತಾರಾ ಎನ್ನುವ ಪ್ರಶ್ನೆಗಳು ಪ್ರೇಕ್ಷಕರನ್ನ ಕಾಡುತ್ತಿವೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow