Crime News: ಪಾನಮತ್ತನಾಗಿದ್ದ ಮಗನಿಂದಲೇ ತಂದೆಯ ಬರ್ಬರ ಕೊಲೆ!

ಸೆಪ್ಟೆಂಬರ್ 27, 2024 - 12:06
 0  11
Crime News: ಪಾನಮತ್ತನಾಗಿದ್ದ ಮಗನಿಂದಲೇ ತಂದೆಯ ಬರ್ಬರ ಕೊಲೆ!

ಗೋರಖ್ ಪುರ:- ಪಾನಮತ್ತನಾಗಿದ್ದ  ಮಗನಿಂದಲೇ ತಂದೆಯ ಬರ್ಬರ ಕೊಲೆ ನಡೆದಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಜರುಗಿದೆ. 

ಕುಡಿತದ ಚಟಕ್ಕೆ ಒಳಗಾಗಿದ್ದ  ಮಗನಿಗೆ ತಂದೆ ಬುದ್ದಿ ಹೇಳಿದ್ದೆ ತಪ್ಪಾಯ್ತು. ತಂದೆಯ ಬುದ್ದಿ ಮಾತಿನಿಂದ ಕೋಪಗೊಂಡ ಮಗ  ಈ ಕೃತ್ಯ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. 

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ತನ್ನ ಮಗ ಮದ್ಯಪಾನ ಮಾಡುವುದನ್ನು ತಡೆಯಲು ಹೋದ ತಂದೆಯ ತಲೆಗೆ ಮಗ ಇಟ್ಟಿಗೆಯಿಂದ ಹೊಡೆದು ಹಲ್ಲೆ ನಡೆಸಿದ್ದಾನೆ. 

ಕನ್ಹಯ್ಯಾ ತಿವಾರಿ ಎಂಬಾತ ತನ್ನ ತಂದೆ ಸತ್ಯ ಪ್ರಕಾಶ್ ತಿವಾರಿ ಮೇಲೆ 20ಕ್ಕೂ ಹೆಚ್ಚು ಬಾರಿ ಇಟ್ಟಿಗೆಯಿಂದ ಹಲ್ಲೆ ನಡೆಸಿ ನಂತರ ಅವರನ್ನು ಕೊಂದು, ಅದೊಂದು ಆತ್ಮಹತ್ಯೆ ಎಂದು ನಾಟಕವಾಡಿದ್ದಾನೆ. ಅಪ್ಪನ ಹೆಣವನ್ನು ಫ್ಯಾನ್​ಗೆ ನೇಣು ಹಾಕಿದ್ದಾನೆ. ಆದರೆ ತನಿಖೆಯಲ್ಲಿ ಅಸಲಿ ಸತ್ಯ ಬಯಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow