Crime News: ತೆಲುಗು ಸಿನಿಮಾದಂತೆ ಇನ್ಶೂರೆನ್ಸ್ ದುಡ್ಡಿಗಾಗಿ ಅಳಿಯನನ್ನು ಹತ್ಯೆ!

ನವೆಂಬರ್ 6, 2024 - 20:07
 0  14
Crime News: ತೆಲುಗು ಸಿನಿಮಾದಂತೆ ಇನ್ಶೂರೆನ್ಸ್ ದುಡ್ಡಿಗಾಗಿ ಅಳಿಯನನ್ನು ಹತ್ಯೆ!

ದಾವಣಗೆರೆ :- ಇನ್ಶೂರೆನ್ಸ್ ದುಡ್ಡಿಗಾಗಿ ಅಳಿಯನ ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಆರೋಪಿಗಳಿಗೆ ತೆಲುಗು ಸಿನೆಮಾ ಪ್ರೇರಣೆ ಆಗಿದೆ. ಇಮಾಮ್ ನಗರದಲ್ಲಿ ಜರುಗಿದೆ.  ಸೋದರ ಅಳಿಯ ಗಣೇಶ ಮತ್ತು ಸ್ನೇಹಿತರಿಂದ 32 ವರ್ಷದ ದುಗ್ಗೇಶ್ ಎಂಬಾತನನ್ನು ಕೊಲೆ ಮಾಡಲಾಗಿದೆ. 

ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಣೇಶ, ಅನಿಲ, ಶಿವಕುಮಾರ್ ಮತ್ತು ಮಾರುತಿ ಬಂಧಿಸಲಾಗಿದೆ. ಮೃತ ದುರ್ಗೇಶ್​ ಖಾಸಗಿ ಬಸ್ ನಿಲ್ದಾಣ ಬಳಿ ಹಣ್ಣು ಮಾರಾಟ ಮಾಡಿಕೊಂಡಿದ್ದ. ಜೊತೆಗೆ ಸಾಕಷ್ಟು ಮಧ್ಯವ್ಯಸನಿ ಕೂಡ ಆಗಿದ್ದು, ಕುಡಿದು ಕುಡಿದು ತಿವ್ರ ಅಶಕ್ತನಾಗಿದ್ದ. ಹೀಗಾಗಿ ಒಂದು ವರ್ಷದಲ್ಲಿ ಆತ ಸಾಯುತ್ತಾನೆ ಎಂದು ದುರ್ಗೇಶ್ ಹೆಸರಲ್ಲಿ ಗಣೇಶ್ 2 ಲಕ್ಷ ರೂ. ಇನ್ಶೂರೆನ್ಸ್ ಮಾಡಿಸಿದ್ದ. ದುಗ್ಗೇಶ್ ಸತ್ತರೆ 40 ಲಕ್ಷ ರೂ. ಇನ್ಶೂರೆನ್ಸ್ ಸಿಗಬೇಕಿತ್ತು. ಆದರೆ ಇನ್ಶೂರೆನ್ಸ್ ಮಾಡಿಸಿ ಒಂದು ವರ್ಷವಾದರೂ ದುಗ್ಗೇಶ್ ಸಾಯದಿದ್ದಾಗ ಗಣೇಶ್​ ಕಂಗಾಲಾಗಿದ್ದಾನೆ.

ಜನವರಿಗೆ ಮತ್ತೆ ಇನ್ಶೂರೆನ್ಸ್ ರಿನಿವಲ್ ಮಾಡಬೇಕಿತ್ತು. ಸುಮ್ಮನೆ ಇನ್ಶೂರೆನ್ಸ್ ಕಟ್ಟಿದ ಎರಡು ಲಕ್ಷ ರೂ. ಹಾಳಾಗುತ್ತದೆ ಎಂದು ಕಂಗಾಲಾಗಿದ್ದ ಗಣೇಶ್​, ಸ್ನೇಹಿತರ ಜೊತೆ ನಗರದ ಹೊರವಲಯದಲ್ಲಿ ದುಗ್ಗೇಶ್ ನನ್ನು ಟವೆಲ್​ನಿಂದ ಉಸಿರು ಬಿಗಿದು ಹತ್ಯೆ ಮಾಡಿದ್ದಾರೆ. ಮುಖ ಮತ್ತು ದೇಹದ ಇತರೆಡೆ ಪಂಚ್ ಕೂಡ ಮಾಡಿದ್ದಾರೆ.

ಹತ್ಯೆ ನಂತರ ಲಿಂಗೇಶ್ವರ ದೇವಸ್ಥಾನ ಬಳಿ ಆರೋಪಿಗಳು ಎಸೆದು ಹೋಗಿದ್ದರು. ಮತ್ತೆ ಅನುಮಾನಗೊಂಡು ಅಪರಿಚಿತರಂತೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ದುಗ್ಗೇಶ್ ಮೃತದೇಹವನ್ನು ಆಸ್ಪತ್ರೆಯಿಂದ ಮನೆಗೆ ತಂದು ಹೊಸ ಕತೆ ಕಟ್ಟಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow