Hanumanth: ಹನುಮಂತಗೆ ತವರೂರಲ್ಲಿ ಅದ್ದೂರಿ ಸ್ವಾಗತ! ಹೂವಿನ ಹಾರ ಹಾಕಿ ವಾಹನದಲ್ಲಿ ಮೆರವಣಿಗೆ

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಆಗಿ ಅಂತ್ಯ ಹಾಡಿದೆ. ಈ ಬಾರಿಯ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರು ಆಗುತ್ತಾರೆ ವೀಕ್ಷಕರಲ್ಲಿ ಭಾರೀ ಕುತೂಹಲ ಮನೆ ಮಾಡಿತ್ತು. ಅದಕ್ಕೆ ಪೂರಕವಾಗಿ ಬಿಗ್ಬಾಸ್ ಸೀಸನ್-11ಕ್ಕೆ ಲೇಟಾಗಿ ಬಂದರೂ ಲೇಟೇಸ್ಟ್ ಆಗಿಯೇ ಟ್ರೋಫಿ ಗೆದ್ದುಕೊಂಡಿದ್ದಾರೆ ಹಳ್ಳಿ ಹೈದ ಹನುಮಂತ. ಒಬ್ಬ ಕುರಿಗಾಯಿ ಹನುಮಂತ ಕನ್ನಡಿಗರ ಹೃದಯ ಗೆದ್ದು, ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅದಲ್ಲದೆ ಬಿಗ್ ಬಾಸ್ ಸೀಸನ್ 11 ವಿನ್ನರ್ ಹನುಮಂತುಗೆ ತವರಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ನಮ್ಮೂರಿನ ಹುಡುಗ ಬಿಗ್ ಬಾಸ್ ಟ್ರೋಫಿ ಗೆದ್ದು ಬಂದಿರೋದಕ್ಕೆ ಇಡೀ ಸವಣೂರು ಪಟ್ಟಣ ಕುಣಿದು ಕುಪ್ಪಳಿಸಿದೆ. ಸವಣೂರು ಪಟ್ಟಣಕ್ಕೆ ಬಂದ ಹನುಮಂತುಗೆ ಡಿಜೆ ಹಾಕಿ ಅದ್ಧೂರಿ ಸ್ವಾಗತ ಕೋರಲಾಗಿದೆ. ಹನುಮಂತು ಬಿಗ್ ಬಾಸ್ ವಿನ್ನರ್ ಕಪ್ ಹಿಡಿದು ಮೆರವಣಿಗೆ ನಡೆಸಿದ್ದಾನೆ. ಸವಣೂರು ಪಟ್ಟಣದಲ್ಲಿ ಬಿಗ್ ಬಾಸ್ ವಿನ್ನರ್ ಹನುಮಂತನ ಅದ್ಧೂರಿ ಮೆರವಣಿಗೆ ಮಾಡಲಾಯಿತು. ತವರೂರಿನ ಜನ ಹನುಮಂತು ಹೋದಲ್ಲೆಲ್ಲಾ ಭರ್ಜರಿ ಸ್ವಾಗತ ಕೋರಿದರು.
ನಿಮ್ಮ ಪ್ರತಿಕ್ರಿಯೆ ಏನು?






