IPL 2025: ಲಕ್ನೋ ತಂಡ ಟ್ರೋಫಿ ಗೆಲ್ಲಲೆಂದು ತಿಮ್ಮಪ್ಪನಿಗೆ ಬಂಗಾರ, ವಜ್ರ ಅರ್ಪಿಸಿದ ಮಾಲೀಕ!

ಮೇ 17, 2025 - 21:21
 0  15
IPL 2025: ಲಕ್ನೋ ತಂಡ ಟ್ರೋಫಿ ಗೆಲ್ಲಲೆಂದು ತಿಮ್ಮಪ್ಪನಿಗೆ ಬಂಗಾರ, ವಜ್ರ ಅರ್ಪಿಸಿದ ಮಾಲೀಕ!

ಲಕ್ನೋ ಸೂಪರ್ ಜೈಂಟ್ಸ್‌ನ ಮಾಲೀಕ ಸಂಜೀವ್ ಗೋಯೆಂಕಾ ಅವರು ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿರುಮಲ ತಿರುಪತಿ ದೇವಸ್ಥಾನಕ್ಕೆ 3 ಕೋಟಿ 36 ಲಕ್ಷ ರೂಪಾಯಿ ಮೌಲ್ಯದ ಬಂಗಾರ, ವಜ್ರ ಖಚಿತ ಆಭರಣಗಳುಗಳನ್ನು  ದಾನ ಮಾಡಿದರು. ಇವರು ಆಧ್ಯಾತ್ಮಿಕತೆ ಹಾಗೂ ಸಂಪ್ರದಾಯಗಳ ಮೇಲೆ ಅಪಾರ ನಂಬಿಕೆ ಹೊಂದಿರುವ ಹಿನ್ನೆಲೆಯಲ್ಲಿ ಈ ಕಾರ್ಯ ಮಾಡಿದ್ದಾರೆ.

ಐಪಿಎಲ್​ನ ಎಲ್​ಎಸ್​ಜಿ ತಂಡದ ಓನರ್ ಸಂಜೀವ್ ಗೋಯೆಂಕಾ ದಾನ ಮಾಡಿರುವ ಚಿನ್ನಾಭರಣ ಒಟ್ಟು 5.267 ಕೆ.ಜಿ ಇದೆ. ಈ ಚಿನ್ನಾಭರಣಗಳಲ್ಲಿ ವಜ್ರಗಳದ ಹರಳುಗಳು ಕೂಡ ಸೇರಿವೆ. ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ವಿಶ್ವದ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ತಿರುಪತಿಯ ಶ್ರೀವೆಂಕಟೇಶ್ವರ ಸ್ವಾಮಿಗೆ ಅಮೂಲ್ಯ ಕಾಣಿಕೆಗಳನ್ನು ಸಂಜೀವ್ ಗೋಯೆಂಕಾ ಅವರು ಅರ್ಪಿಸಿದರು.

ಸಂಜೀವ್ ಗೋಯೆಂಕಾ ಅವರು ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಆಗಮಿಸಿದ್ದರು. ಈ ವೇಳೆ ಗೋವಿಂದನಿಗೆ ವಿಶೇಷ ಪೂಜೆ ಮಾಡಿ, ದರ್ಶನ ಪಡೆದುಕೊಂಡರು. ಇನ್ನು ಸಂಜೀವ್ ಗೋಯೆಂಕಾ ಬಂಗಾರದ ಆಭರಣಗಳನ್ನು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಚ. ವೆಂಕಯ್ಯ ಚೌಧರಿ ಅವರಿಗೆ ನೀಡಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow