IPL 2025: ಹರಾಜಿನಲ್ಲಿ ರಾಹುಲ್, ಸಿರಾಜ್ ಕೈಬಿಟ್ಟ RCB: ಪ್ರಾಂಚೈಸಿ ವಿರುದ್ಧ ವಿರಾಟ್ ಗರಂ!

ನವೆಂಬರ್ 27, 2024 - 09:37
 0  7
IPL 2025: ಹರಾಜಿನಲ್ಲಿ ರಾಹುಲ್, ಸಿರಾಜ್ ಕೈಬಿಟ್ಟ RCB: ಪ್ರಾಂಚೈಸಿ ವಿರುದ್ಧ ವಿರಾಟ್ ಗರಂ!

ಈ ಬಾರಿಯ ಮೆಗಾ ಹರಾಜಿನಲ್ಲಿ RCB ಪ್ರಾಂಚೈಸಿಯು, ಕೆಲವು ಅಚ್ಚರಿ ಆಟಗಾರರನ್ನು ಖರೀದಿ ಮಾಡಿದ್ದು, ಫ್ಯಾನ್ಸ್ ಗಳಲ್ಲಿ ಬೇಸರ ಮೂಡಿಸಿದೆ. ಮೆಗಾ ಹರಾಜಿಗೂ ಮುನ್ನ ಆರ್​​ಸಿಬಿ ವಿರಾಟ್ ಕೊಹ್ಲಿ, ಯಶ್ ದಯಾಳ್ ಹಾಗೂ ರಜತ್ ಪಾಟಿದಾರ್ ರೀಟೈನ್​ ಮಾಡಿಕೊಂಡಿತ್ತು. ಈಗ ನಡೆದ ಮೆಗಾ ಹರಾಜಿನಲ್ಲೂ 19 ಆಟಗಾರರನ್ನು ಖರೀದಿ ಮಾಡಿತು. ಅಚ್ಚರಿ ಎಂದರೆ ಆರ್​​ಸಿಬಿ ಯಾವುದೇ ಕ್ಯಾಪ್ಟನ್​​ ಆಗೋ ಸಾಮರ್ಥ್ಯ ಇರೋ ಆಟಗಾರನನ್ನು ಬಿಡ್​ ಮಾಡದಿರುವುದು. ಹಾಗಾಗಿ ಕೊಹ್ಲಿಯೇ ಮುಂದಿನ ಕ್ಯಾಪ್ಟನ್​ ಎಂದು ಹೇಳಲಾಗುತ್ತಿದೆ.

80ಕ್ಕೂ ಹೆಚ್ಚು ಕೋಟಿಯೊಂದಿಗೆ ಹರಾಜಿಗೆ ಬಂದ ಆರ್​​​ಸಿಬಿ ಮೊದಲ ದಿನವೇ ಬರೋಬ್ಬರಿ 50 ಕೋಟಿ ಖರ್ಚು ಮಾಡಿತ್ತು. 2ನೇ ದಿನ ಉಳಿದ 30 ಕೋಟಿಯನ್ನು ಆಟಗಾರರ ಮೇಲೆ ಸುರಿಯಿತು. ಈ ಪೈಕಿ ಆರ್​​ಸಿಬಿ ಜೋಶ್‌ ಹೇಜಲ್​ವುಡ್‌ಗೆ 12.50 ಕೋಟಿ, ಫಿಲ್ ಸಾಲ್ಟ್​​ಗೆ 11.50 ಕೋಟಿ ರೂ., ಜಿತೇಶ್ ಶರ್ಮಾಗೆ 11.00 ಕೋಟಿ ರೂ., ಭುವನೇಶ್ವರ್ ಕುಮಾರ್​ಗೆ 10.75 ಕೋಟಿ ರೂ., ಲಿಯಾಮ್ ಲಿವಿಂಗ್‌ಸ್ಟೋನ್​ಗೆ ಸುಮಾರು 8.75 ಕೋಟಿ ರೂ. ನೀಡಿ ಖರೀದಿ ಮಾಡಿದೆ. ಈ ಬಗ್ಗೆ ಕೊಹ್ಲಿ ಅಸಮಾಧಾನ ಹೊರಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು, ಈ ಕುರಿತು ಮಾತಾಡಿರೋ ಆರ್​​ಸಿಬಿ ಡೈರೆಕ್ಟರ್​ ಬೊಬಾಟ್​​ ಅವರು, ಮೊದಲ ದಿನದ ಆಕ್ಷನ್​ ಬಳಿ ಕೊಹ್ಲಿ ಕೆಲವು ಮೆಸೇಜ್​ಗಳನ್ನು ಕಳಿಸಿದ್ರು. ನಮ್ಮ ಆಕ್ಷನ್​​ ಸ್ಟಾಟರ್ಜಿ ಬಗ್ಗೆ ಖುಷಿ ಇರಲಿಲ್ಲ. ಕೊಹ್ಲಿ ಫೀಡ್​ ಬ್ಯಾಕ್​ ನಂತರ ನಮ್ಮ ಪ್ಲಾನ್​​ ಬದಲಿಸಿದೆವು ಎಂದರು. ಮೂಲಗಳ ಪ್ರಕಾರ ಕೆ.ಎಲ್​ ರಾಹುಲ್, ಮೊಹಮ್ಮದ್​ ಸಿರಾಜ್​ ಅವರನ್ನು ಬಿಟ್ಟಿದ್ದಕ್ಕೆ ವಿರಾಟ್​ ಕೊಹ್ಲಿ ಅಸಮಾಧಾನ ಹೊರಹಾಕಿದ್ರು ಎಂದು ತಿಳಿದು ಬಂದಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow