Pavithra Gowda: ಎಷ್ಟೇ ಕುತಂತ್ರ ಮಾಡಿದ್ರು ಮೇಲೊಬ್ಬ ನೋಡ್ತಿದ್ದಾನೆ: ಪವಿತ್ರಾ ಗೌಡ ಈ ಪೋಸ್ಟ್ ಹಾಕಿದ್ದು ಯಾರಿಗೆ?

ಪವಿತ್ರಾ ಗೌಡ ಅವರು ರೇಣುಕಾಸ್ವಾಮಿ ಕೇಸ್ನಲ್ಲಿ ಜಾಮೀನು ಪಡೆದು ರಿಲೀಸ್ ಆಗಿದ್ದಾರೆ. ಇದೀಗ ರಿಲೀಸ್ ಆದ ನಂತರ ಅವರು ಕೋರ್ಟ್ ಅನುಮತಿ ಪಡೆದು ಹೊರ ರಾಜ್ಯಗಳಿಗೂ ಪ್ರಯಾಣಿಸುತ್ತಿದ್ದಾರೆ. ಖ್ಯಾತ ದೇವಸ್ಥಾನಗಳಿಗೂ ತನ್ನ ರೆಡ್ ಕಾರ್ಪೆಟ್ ಡಿಸೈನರ್ ಸ್ಟುಡಿಯೋಗೆ ಬೇಕಾದ ಮೆಟಿರೀಯಲ್ ತರಬೇಕಾಗಿದೆ ಎಂದೂ ಅವರು ಕೋರ್ಟ್ಗೆ ತಿಳಿಸಿ ಅನುಪತಿ ಪಡೆದಿದ್ದಾರೆ.
ಇದೀಗ ಪವಿತ್ರಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆದರೇನಂತೆ ಎಂದು ನಟಿ ಬರೆದುಕೊಂಡಿರುವ ಪೋಸ್ಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆದರೇನಂತೆ ಮೇಲೊಬ್ಬ ಎಲ್ಲವನ್ನು ವೀಕ್ಷಿಸುತ್ತಿರುವನು. ನಿಮ್ಮ ಕಣ್ಣೀರಿನ ಎಲ್ಲಾ ಹನಿಗಳಿಗೆ ನ್ಯಾಯ ನೀಡುವನು ಎನ್ನುವ ಕೋಟ್ ಅನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ನಟಿ ಪೋಸ್ಟ್ ಮಾಡಿದ್ದಾರೆ. ಯಾರಿಗೆ ನಟಿ ಟಾಂಗ್ ಕೊಟ್ಟಿದ್ದಾರೆ ಎಂದೆಲ್ಲಾ ಪವಿತ್ರಾ ಪರ ವಿರೋಧದ ಚರ್ಚೆ ನಡೆಯುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






