Pavithra Gowda: ಸುಪ್ರೀಂ ಕೋರ್ಟ್ ನೋಟಿಸ್ ಕೊಟ್ಟ ಬೆನ್ನಲ್ಲೇ ಶಿರಡಿಯಲ್ಲಿ ಕಾಣಿಸಿಕೊಂಡ ಪವಿತ್ರಾ ಗೌಡ!

ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀ ಮೊರೆ ಹೋಗಿದ್ರು. ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ 7 ಮಂದಿಗೆ ನೋಟಿಸ್ ನೀಡಿದೆ. ಮೇಲ್ಮನವಿ ವಿಚಾರಣೆಯನ್ನು ಮುಂದೂಡಿದೆ.
ಇದರ ನಡುವೆ ಪವಿತ್ರಾ ಗೌಡ ಕೋರ್ಟ್ ಅನುಮತಿ ಪಡೆದು ಹೊರ ರಾಜ್ಯಗಳಿಗೂ ಪ್ರಯಾಣಿಸುತ್ತಿದ್ದಾರೆ. ಖ್ಯಾತ ದೇವಸ್ಥಾನಗಳಿಗೂ ತನ್ನ ರೆಡ್ ಕಾರ್ಪೆಟ್ ಡಿಸೈನರ್ ಸ್ಟುಡಿಯೋಗೆ ಬೇಕಾದ ಮೆಟಿರೀಯಲ್ ತರಬೇಕಾಗಿದೆ ಎಂದೂ ಅವರು ಕೋರ್ಟ್ಗೆ ತಿಳಿಸಿ ಅನುಪತಿ ಪಡೆದಿದ್ದಾರೆ. ಸದ್ಯ ಅವರು ಶಿರಡಿ ಸಾಯಿಬಾಬಾನ ದರ್ಶನ ಪಡೆದಿದ್ದಾರೆ.
ಜೈಲಿನಿಂದ ಹೊರ ಬಂದ ನಂತರ ಪವಿತ್ರಾ ಗೌಡ ಅವರು ಮೊದಲ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ನಟಿ ಇದರಲ್ಲಿ ಸಾಯಿ ಬಾಬಾ ಅವರ ಫೊಟೋಗಳ ಮುಂದೆ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ನಟಿ ಈ ಫೊಟೋದಲ್ಲಿ ಕೆಂಬಣ್ಣದ ಸಲ್ವಾರ್ ಧರಿಸಿ ಗೋಲ್ಡನ್ ಕಲರ್ ದುಪಟ್ಟಾ ಧರಿಸಿದ್ದರು.
ನಿಮ್ಮ ಜೀವನ ನೀವು ನೋಡಿಕೊಂಡು ಚೆನ್ನಾಗಿರಿ ಎಂದಿದ್ದಾರೆ ಇನ್ನೊಬ್ಬರು. ದೇವರು ಒಳ್ಳೇದು ಮಾಡಲಿ ನಿಮಗೆ ಎಂದಿದ್ದಾರೆ ಮೊತ್ತೊಬ್ಬರು. ಎಲ್ಲಾ ಒಳ್ಳೇದಾಗುತ್ತೆ ಯೋಚನೆ ಮಾಡಬೇಡಿ. ಆ ಭಗವಂತ ಆಶೀರ್ವಾದ ನಿಮ್ಮ ಮೇಲೆ ನಿಮ್ಮ ಮಗಳ ಮೇಲೆ ಸದಾ ಇರಲಿ ಎಂದು ಹಾರೈಸಿದ್ದಾರೆ ಇನ್ನೊಬ್ಬರು.
ನಿಮ್ಮ ಪ್ರತಿಕ್ರಿಯೆ ಏನು?






