Renukaswamy Case: ಇಂದು ಸುಪ್ರೀಂ ಅಂಗಳದಲ್ಲಿ ನಟ‌ ದರ್ಶನ್ ಜಾಮೀನು ಭವಿಷ್ಯ!

ಜನವರಿ 24, 2025 - 11:08
 0  10
Renukaswamy Case: ಇಂದು ಸುಪ್ರೀಂ ಅಂಗಳದಲ್ಲಿ ನಟ‌ ದರ್ಶನ್ ಜಾಮೀನು ಭವಿಷ್ಯ!

 

ನಟ ದರ್ಶನ್ ಜಾಮೀನು ರದ್ದು ಕೋರಿ ಪೊಲೀಸರ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ನಟ ದರ್ಶನ್, ಪವಿತ್ರಾಗೌಡ ಸೇರಿ ಏಳು ಆರೋಪಿಗಳ ಜಾಮೀನು‌ ರದ್ದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ವಕೀಲ ಅನಿಲ್‌ ನಿಶಾನಿ‌ ಮುಖಾಂತರ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದ ಸಂಪೂರ್ಣ ವಿವರ ಸಲ್ಲಿಕೆ ಜೊತೆಗೆ ಸುಪ್ರಿಂ ಕೋರ್ಟ್ ಗೆ 1492 ಪುಟಗಳ ಕೇಸ್ ಫೈಲ್ ಸಲ್ಲಿಕೆ ಆಗಿದೆ.

ಪೊಲೀಸರು ಸಲ್ಲಿಸಿದ ಕಡತದಲ್ಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವ ಅದೇಶ, ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಹಾಗೂ ದೂರಿನ ಪ್ರತಿ ಹಾಗೂ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯ ವರದ ಕೂಡ ಇದೆ.

ಜೊತೆಗೆ ಆರೋಪಿಗಳ ಗ್ರೌಂಡ್ಸ್ ಅಫ್ ಅರೆಸ್ಟ್ ಬಗ್ಗೆ ನೀಡಿರುವ ಪ್ರತಿ ಜೊತೆಗೆ ಪ್ರಕರಣ ಸಂಬಂಧ ಕೋರ್ಟ್ ಗೆ ಸಲ್ಲಿಸಿರುವ ಅಂತಿಮವರದಿಯ ತರ್ಜುಮೆ ಪ್ರತಿ ಕೂಡ ಇದೆ. ಪ್ರತ್ಯಕ್ಷದರ್ಶಿ ಸಾಕ್ಷಿ 76, ಸಾಕ್ಷಿ 91 ಹೇಳಿಕೆಯ ತರ್ಜುಮೆಮಾಡಿದಪ್ರತಿ, ಪೋಸ್ಟ್ ಮಾರ್ಟಂ ಸಂಬಂಧ ವೈದ್ಯರಿಂದಪಡೆದ ಅಭಿಪ್ರಾಯ ವರದಿ ಹಾಗೂ ಎಫ್ಎಸ್ಎಲ್ ವರದಿಗಳ ಮೂಲ ಪ್ರತಿಗಳು, ಸಿಡಿಆರ್ ವರದಿಯ ಮೂಲ ಪ್ರತಿಗಳು, ಕೃತ್ಯಕ್ಕೆ ಸಂಬಂಧಿಸಿದ ಪಂಚನಾಮ ವರದಿಗಳು ಇವೆ.

ಅನಿಲ್ ನಿಶಾನಿಯವ್ರನ್ನ ಭೇಟಿ ಮಾಡಿ ಎಸ್ ಪಿಪಿ ಪ್ರಸನ್ನ ಕುಮಾರ್ ಚರ್ಚೆ ನಡೆಸಿದ್ದಾರೆ. ದೆಹಲಿಯಲ್ಲಿ ಭೇಟಿ ಮಾಡಿ ಪ್ರಕರಣದ ಬಗ್ಗೆ ಸಂಪೂರ್ಣ ಚರ್ಚೆ ಮಾಡಿದ್ದಾರೆ. ಸುಪ್ರಿಂ ಕೋರ್ಟ್ಗೆ ಈಗಾಗಲೇ ತರ್ಜುಮೆ ಮಾಡಿರೋ ರಿಪೋರ್ಟ್ ಪೊಲೀಸರು ಸಲ್ಲಿಸಿದ್ದಾರೆ. ನಟ ದರ್ಶನ್ತೂಗದೀಪ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದರೆ ಕೂಡಲೇ ಬಂಧನವಾಗಿ ಮತ್ತೆ ಜೈಲು ಸೇರಬೇಕಾಗುತ್ತದೆ. ಹೀಗಾಗಿ, ನಟ ದರ್ಶನ್ಹಾಗೂ ಅಭಿಮಾನಿಗಳು ಸುಪ್ರೀಂ ಕೋರ್ಟ್ವಿಚಾರಣೆ ಮೇಲೆ ನಿಗಾ ಇಟ್ಟಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow