Renukaswamy Case: ದರ್ಶನ್ ಕೊಟ್ಟ ಭಗವದ್ಗೀತೆ ಕೈಯಲ್ಲೇ ಹಿಡಿದು ಜೈಲಿಂದ ಹೊರಬಂದ ಅನುಕುಮಾರ್!

ಡಿಸೆಂಬರ್ 19, 2024 - 12:43
 0  24
Renukaswamy Case: ದರ್ಶನ್ ಕೊಟ್ಟ ಭಗವದ್ಗೀತೆ ಕೈಯಲ್ಲೇ ಹಿಡಿದು ಜೈಲಿಂದ ಹೊರಬಂದ ಅನುಕುಮಾರ್!

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್​​ನಲ್ಲಿ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರಿಗೆ ಜಾಮೀನು ಸಿಕ್ಕಿದೆ. ಇದೇ ವೇಳೆ ಅನುಕುಮಾರ್, ಜಗದೀಶ್, ನಾಗರಾಜು, ಲಕ್ಷ್ಮಣ್ ಮತ್ತು ಪ್ರದೋಷ್ ಅವರಿಗೂ ಜಾಮೀನು ಸಿಕ್ಕಿತ್ತು. ಬೇಲ್ ಮೇಲೆ ದರ್ಶನ್ ಮತ್ತು ಪವಿತ್ರಾ ಗೌಡ ಹೊರಬಂದಿದ್ದಾರೆ. ಆದರೆ ಜಗದೀಶ್ ಮತ್ತು ಅನುಕುಮಾರ್ ಅವರಿಗೆ ಜಾಮೀನಿಗೆ ಶ್ಯೂರಿಟಿ ಒದಗಿಸುವುದೇ ಸಮಸ್ಯೆ ಆಗಿತ್ತು. ಇದೀಗ ಅನುಕುಮಾರ್ ರಿಲೀಸ್ ಆಗಿದ್ದಾನೆ.

ಕೈಯಲ್ಲಿ ಭಗವದ್ಗೀತೆ ಪುಸ್ತಕ ಹಿಡಿದು ಹೊರಗೆ ಬಂದಿದ್ದಾರೆ. ಜೈಲಿನಿಂದ ಹೊರಬಂದ ಅನುಕುಮಾರ್ ಕೈಯಲ್ಲಿ ಭಗವದ್ಗೀತೆ ಪುಸ್ತಕ ಇದ್ದು ಜೈಲಿನಲ್ಲಿ ಭಗವದ್ಗೀತೆ ಪುಸ್ತಕ ಓದುತ್ತಾ ಸಮಯ ಕಳೆದಿದ್ದ ಎನ್ನಲಾಗಿದೆ. ದರ್ಶನ್ ಸ್ನೇಹಿತರು ನೀಡಿದ್ದ ಭಗವದ್ಗೀತೆ ಪುಸ್ತಕ ಪರಪ್ಪನ ಅಗ್ರಹಾರ ಜೈಲಿನಿಂದ ವರ್ಗಾವಣೆ ವೇಳೆ ಅನುಕುಮಾರ್​​ಗೆ ನೀಡಿದ್ದರು ನಟ ದರ್ಶನ್. ದರ್ಶನ್ ನೀಡಿದ ಭಗವದ್ಗೀತೆ ಪುಸ್ತಕ ಜೋಪಾನವಾಗಿಟ್ಟುಕೊಂಡಿರೋ ಅನುಕುಮಾರ್ ಅದನ್ನು ಕೈಯಲ್ಲೇ ಹಿಡಿದಿದ್ದರು. ಬೇಲ್ ಶ್ಯೂರಿಟಿ ತಡವಾದ ಹಿನ್ನೆಲೆ ಇಂದು ಬಿಡುಗಡೆಯಾಗಿದೆ. ಬಿಡುಗಡೆ ಬಳಿಕ ಸಹೋದರನ ಜೊತೆ ತೆರಳಿದ ಅನುಕುಮಾರ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow