Yash-Ramayana: ರಾಮಾಯಣ ಬಗ್ಗೆ ಬಿಗ್ ಅಪ್ಡೇಟ್: ರಾವಣ'ನಾಗಿ ರಾಕಿಬಾಯ್ ಎಂಟ್ರಿ ಯಾವಾಗ ಗೊತ್ತಾ..?

ಇತ್ತೀಚಿಗಷ್ಟೇ ನಟ ಪ್ರಭಾಸ್ ರಾಮಾಯಣ ಆಧರಿತ ಆದಿಪುರುಷ ಸಿನಿಮಾ ಮೂಲಕ ತೆರೆ ಮೇಲೆ ಬಂದಿದ್ರು. ಆದ್ರೆ ಸಿನಿಮಾ ಹಿಟ್ ಆಗಲಿಲ್ಲ. ಮತ್ತೊಂದು ಸೋಲು ಪ್ರಭಾಸ್ನನ್ನು ಕಂಗೆಡಿಸುವಂತೆ ಮಾಡಿತು. ಇದೀಗ ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ರಾಮಾಯಣ ಕಥೆ ಆಧರಿಸಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ರಾಮಾಯಣ ಸಿನಿಮಾ ಮಾಡಲು ಈಗಾಗಲೇ ಎಲ್ಲಾ ತಯಾರಿ ಕೂಡ ಮಾಡಲಾಗಿದೆ. ರಣ್ಬೀರ್ ಹಾಗೂ ಸಾಯಿ ಪಲ್ಲವಿ ರಾಮ-ಸೀತೆಯ ಪಾತ್ರದಲ್ಲಿರುವ ಕೆಲವು ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ಸಿನಿಮಾದ ರಾವಣನ ಪಾತ್ರದಲ್ಲಿ ಯಶ್ ನಟಿಸಲಿದ್ದಾರೆ.
ಯಶ್ ಅವರು ‘ರಾಮಾಯಣ’ ಸಿನಿಮಾದಲ್ಲಿ ರಾವಣದ ಪಾತ್ರ ಮಾಡಲಿದ್ದಾರೆ. ಇದು ನೆಗೆಟಿವ್ ಪಾತ್ರ ಆದ್ದರಿಂದ ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆ ಮೂಡಿದೆ. ಆರಂಭದಲ್ಲಿ ಈ ವಿಚಾರ ಗೌಪ್ಯವಾಗಿತ್ತು. ನಂತರ ಸ್ವತಃ ಯಶ್ ಅವರು ಒಂದು ಸಂದರ್ಶನದಲ್ಲಿ ಖಚಿತಪಡಿಸಿದರು. ರಾವಣನ ಪಾತ್ರ ಮಾಡಲು ತಾವು ಉತ್ಸುಕರಾಗಿರುವುದಾಗಿ ಹೇಳಿದರು. ಹಾಗಾದರೆ ಯಶ್ ಅವರು ಈ ಸಿನಿಮಾದ ಶೂಟಿಂಗ್ನಲ್ಲಿ ಪಾಲ್ಗೊಳ್ಳುವುದು ಯಾವಾಗ?
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿದೆ. ಫಿಲ್ಮ್ಫೇರ್ ವರದಿ ಪ್ರಕಾರ, ಯಶ್ ಅವರು ಮಾರ್ಚ್ ತಿಂಗಳಲ್ಲಿ ‘ರಾಮಾಯಣ’ ಸಿನಿಮಾದ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ. ಅವರ ಲುಕ್ ಹೇಗಿರಲಿದೆ ಎಂಬುದನ್ನು ತಿಳಿಯುವ ಕಾತರ ಅಭಿಮಾನಿಗಳಿಗೆ ಇದೆ. ಈ ಮೊದಲು ‘ರಾಮಾಯಣ’ ಶೂಟಿಂಗ್ ಸೆಟ್ನಿಂದ ಕೆಲವು ಫೋಟೋಗಳು ಲೀಕ್ ಆಗಿದ್ದವು. ಹಾಗಾಗಿ ಚಿತ್ರತಂಡದವರು ಈಗ ಹೆಚ್ಚಿನ ಜಾಗ್ರತೆ ವಹಿಸಬೇಕಿದೆ.
‘ರಾಮಾಯಣ’ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್ ಅವರು ನಟಿಸುತ್ತಿದ್ದಾರೆ. ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಅವರು ಕಾಣಿಸಿಕೊಳ್ಳಲಿದ್ದಾರೆ. ‘ದಂಗಲ್’ ಖ್ಯಾತಿಯ ನಿತೇಶ್ ತಿವಾರಿ ಅವರು ‘ರಾಮಾಯಣ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. 2 ಪಾರ್ಟ್ನಲ್ಲಿ ಈ ಸಿನಿಮಾ ಮೂಡಿಬರಲಿದೆ. ಮೊದಲ ಪಾರ್ಟ್ 2026ರ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ. 2ನೇ ಪಾರ್ಟ್ 2027ರ ದೀಪಾವಳಿ ಹಬ್ಬಕ್ಕೆ ತೆರೆ ಕಾಣಲಿದೆ. ಅದ್ದೂರಿ ಬಜೆಟ್ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






