ಅನಾರೋಗ್ಯದ ಮಧ್ಯೆಯೂ ಸರಿಗಮಪ ವೇದಿಕೆಗೆ ಬಂದ ಶಿವಣ್ಣ! ಇವರ ಎನರ್ಜಿ ನೆಕ್ಸ್ಟ್ ಲೆವಲ್ ಗುರು!

ಫೆಬ್ರವರಿ 3, 2025 - 21:07
 0  8
ಅನಾರೋಗ್ಯದ ಮಧ್ಯೆಯೂ ಸರಿಗಮಪ ವೇದಿಕೆಗೆ ಬಂದ ಶಿವಣ್ಣ! ಇವರ ಎನರ್ಜಿ ನೆಕ್ಸ್ಟ್ ಲೆವಲ್ ಗುರು!

ಸರಳತೆಯ ಕಿಂಗ್ ಅಂದ್ರೆ ಅದು ನಮ್ಮ ಶಿವಣ್ಣ ಕಂಡ್ರಿ. ಅಭಿಮಾನಿಗಳನ್ನು ಸ್ನೇಹಿತರಂತೆ ಕಾಣುವ ಏಕೈಕ ನಟ. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಶಿವಣ್ಣ ಇತ್ತೀಚಿಗಷ್ಟೇ ವಿದೇಶದಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಅವರ ಆರೋಗ್ಯಕ್ಕೆ ಸಹಸ್ರಾರು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ. ಎಲ್ಲರ ಹಾರೈಕೆಯಿಂದ ಶಿವಣ್ಣ ಚೇತರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ತಕ್ಷಣ ಸ್ನೇಹಿತರು, ಬಂಧು ಬಾಂಧವರನ್ನ ಭೇಟಿಯಾಗಿದ್ದಾರೆ. ರಾಜ್ಯದ ವಿವಿಧೆಡೆ ಪ್ರವಾಸ ಕೂಡ ಮಾಡುತ್ತಿದ್ದಾರೆ. ಅದಕ್ಕೆ ಹೇಳೋದು ಇವರ ಎನರ್ಜಿಗೆ ಇವರೇ ಸರಿಸಾಟಿ ಅಂತ.

ಇದರ ಮಧ್ಯೆ ಶಿವಣ್ಣ ಜೀ ಕನ್ನಡ ವಾಹಿನಿಯ ಸರಿಗಮಪ ವೇದಿಕೆಗೆ ಸರ್​ಪ್ರೈಸ್​ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇದ್ಯಾವುದೂ ಮೊದಲೇ ಪ್ಲ್ಯಾನ್​ ಮಾಡಿದಲ್ಲ. ಜನವರಿ 25ನೇ ತಾರೀಖು ನಿರೂಪಕಿ ಅನುಶ್ರೀ ಅವರ ಬರ್ತ್​ ಡೇ ಇತ್ತು.

ಪ್ರತಿ ವರ್ಷದ ವಾಡಿಕೆಯಂತೆ ಕಾರ್ಯಕ್ರಮದಲ್ಲಿ ಅನುಶ್ರೀ ಅವರಿಗೆ ಸ್ಪೆಷಲ್​ ಗಿಫ್ಟ್​, ಸರ್​​ಪ್ರೈಸ್​ಗಳನ್ನ ಚಾನೆಲ್ ನೀಡುತ್ತಾ ಬಂದಿದೆ. ಈ ವರ್ಷ ಕೂಡ ಶಿವಣ್ಣ ಅವರಿಗೆ ಬರ್ತ್​​ ಡೇ ವಿಶ್​ಗಾಗಿ ವಿಡಿಯೋ ಕಾಲ್​ ಮಾಡಲು ಚಾನೆಲ್​ ಕೇಳಿತ್ತಂತೆ. ಇದಕ್ಕೆ ಶಿವಣ್ಣ ವಿಡಿಯೋ ಕಾಲ್​ ಯಾಕೆ? ನಾನೇ ಬರ್ತಿನಿ ಅಂತ. ಕಾರ್ಯಕ್ರಮದ ಮಧ್ಯದಲ್ಲೇ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿರೋ ಯಾರಿಗೂ ಶಿವಣ್ಣ ಬರೋದು ಗೊತ್ತಿರಲಿಲ್ಲ ಎನ್ನಲಾಗಿದೆ. 

ಒಂದು ಕ್ಷಣ ಪ್ರೀತಿಯ ನಟನನ್ನು ಅಭಿಮಾನಿಗಳು ಟಿವಿಯಲ್ಲಿ ಕಣ್ತುಂಬಿಕೊಂಡರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow