ಅಪ್ಪಿತಪ್ಪಿಯೂ ಭಾನುವಾರ ಈ ತಪ್ಪು ಮಾಡ್ಬೇಡಿ!

ಹಿಂದೂ ಧರ್ಮದಲ್ಲಿ, ಭಗವಾನ್ ಸೂರ್ಯ ದೇವನಿಗೆ ಆದಿ ಪಂಚ ದೇವರ ಸ್ಥಾನವನ್ನು ನೀಡಲಾಗಿದೆ. ಆದರೆ ಜ್ಯೋತಿಷ್ಯದಲ್ಲಿ ಅವನನ್ನು ಗ್ರಹಗಳ ರಾಜನೆಂದು ಪರಿಗಣಿಸಲಾಗುತ್ತದೆ. ಸೂರ್ಯನನ್ನು ಬ್ರಹ್ಮಾಂಡದ ಆತ್ಮ ಎಂದು ಪರಿಗಣಿಸಲಾಗುತ್ತದೆ. ಪ್ರತಿನಿತ್ಯ ಸೂರ್ಯ ದೇವನನ್ನು ಪೂಜಿಸಿ ಆತನಿಗೆ ಅರ್ಘ್ಯವನ್ನು ಅರ್ಪಿಸಲಾಗುತ್ತದೆ. ಆದರೆ ಭಾನುವಾರದಂದು ವಿಶೇಷವಾಗಿ ಸೂರ್ಯ ದೇವನಿಗೆ ಅರ್ಪಿತವಾದ ದಿನವಾಗಿದೆ.
ಸೂರ್ಯ ನಾರಾಯಣನನ್ನು ಈ ದಿನ ಪೂಜಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಸೂರ್ಯ ದೇವನನ್ನು ಪ್ರಗತಿ, ಗೌರವ, ಖ್ಯಾತಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಪದೇ ಪದೇ ಅನಾರೋಗ್ಯ, ಸಮಾಜದಲ್ಲಿ ಅಗೌರವ, ಎಷ್ಟೇ ದುಡಿದರೂ ಯಶಸ್ವಿ ಜೀವನ ನಡೆಸಲು ಸಾಧ್ಯವಾಗದೇ ಇರುವುದು ಸೂರ್ಯ ದೇವನಿಗೆ ನೀವು ಮಾಡಿದ ಅವಮಾನದ ಫಲವಾಗಿರುತ್ತದೆ. ಆದ್ದರಿಂದ ನಾವು ಈ ಕೆಲಸಗಳನ್ನು ವಿಶೇಷವಾಗಿ ಭಾನುವಾರ ಮಾಡಬಾರದು. ನಾವು ಭಾನುವಾರ ಈ ಕೆಲಸಗಳನ್ನು ಮಾಡುವುದರಿಂದ ಸೂರ್ಯ ದೇವನು ನಮ್ಮ ಮೇಲೆ ಕೋಪಿಸಿಕೊಳ್ಳುತ್ತಾನೆ. ಮತ್ತು ಕುಂಡಲಿಯಲ್ಲಿ ಸೂರ್ಯನ ಸ್ಥಾನವು ದುರ್ಬಲವಾಗುತ್ತದೆ.
ಹಿಂದೂ ಧರ್ಮದಲ್ಲಿ, ಭಾನುವಾರವನ್ನು ಸೂರ್ಯನ ದಿನವೆಂದು ಪರಿಗಣಿಸಲಾಗುತ್ತದೆ. ಭಗವಾನ್ ವಿಷ್ಣುವಿನ ನೆಚ್ಚಿನ ದಿನ ಇದು. ಈ ದಿನ ಸೂರ್ಯ ಆರಾಧನೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸೂರ್ಯನ ಅನುಗ್ರಹವು ಜೀವನದಲ್ಲಿ ಸಂತೋಷವನ್ನು ತರುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾನುವಾರದಂದು ಉಪ್ಪನ್ನು ತಿನ್ನಬಾರದು. ಈ ದಿನದ ಆಹಾರವನ್ನು ಸೂರ್ಯಾಸ್ತದ ಮೊದಲು ತಿನ್ನಬೇಕು. ಭಾನುವಾರದಂದು ಉಪ್ಪನ್ನು ತಿನ್ನುವುದು ಆರೋಗ್ಯದ ಮೇಲೆ ಕೆಲವು ಕೆಟ್ಟ ಪರಿಣಾಮಗಳನ್ನು ಬೀರುತ್ತದೆ ಮತ್ತು ಪ್ರತಿ ಕೆಲಸದಿಂದ ಮನುಷ್ಯನಿಗೆ ಅಡ್ಡಿಯಾಗುತ್ತದೆ ಎಂದು ಹೇಳಲಾಗುತ್ತ
ಹಾಗೆಯೇ, ಭಾನುವಾರ ಪಶ್ಚಿಮ ಮತ್ತು ವಾಯುವ್ಯ ದಿಕ್ಕಿಗೆ ಪ್ರಯಾಣ ಮಾಡಬಾರದು. ತುರ್ತು ಕಾರಣಗಳಿಂದ ನೀವು ಭಾನುವಾರ ಈ ದಿಕ್ಕುಗಳಲ್ಲಿ ಪ್ರಯಾಣಿಸಬೇಕಾದರೆ ಓಟ್ಸ್, ತುಪ್ಪ ಅಥವಾ ವೀಳ್ಯದೆಲೆಗಳನ್ನು ಸೇವಿಸಿದ ನಂತರವೇ ಮನೆಯಿಂದ ಹೊರಡಿ
ತಾಮ್ರದಿಂದ ತಯಾರಿಸಿದ ವಸ್ತುಗಳು ಮತ್ತು ಸೂರ್ಯನಿಗೆ ಸಂಬಂಧಿಸಿದ ವಸ್ತುಗಳನ್ನು ಭಾನುವಾರದಂದು ಮಾರಾಟ ಮಾಡಬಾರದು. ಇದರಿಂದ ಜಾತಕದಲ್ಲಿ ಸೂರ್ಯನ ಸ್ಥಾನ ದುರ್ಬಲವಾಗುತ್ತದೆ. ಇದರಿಂದ ಅನೇಕ ಸಮಸ್ಯೆಗಳು ಬರುತ್ತದೆ ಎನ್ನಲಾಗುತ್ತದೆ.
ಭಾನುವಾರ ನಿಮ್ಮ ಬಟ್ಟೆಯ ಬಣ್ಣ ಬಹಳ ಮುಖ್ಯವಾಗುತ್ತದೆ. ಭಾನುವಾರದಂದು ನೀಲಿ, ಕಪ್ಪು, ಕಂದು, ಕಪ್ಪು ಬಣ್ಣಗಳನ್ನು ಧರಿಸಬಾರದು. ಇವೆಲ್ಲವೂ ಶನಿಗೆ ಸಂಬಂಧಿಸಿವೆ. ಶನಿಯು ಸೂರ್ಯನ ಮಗನಾಗಿದ್ದರೂ, ಸೂರ್ಯನೊಂದಿಗೆ ಸಂಬಂಧ ಚೆನ್ನಾಗಿಲ್ಲ. ಹಾಗಾಗಿ ಭಾನುವಾರದಂದು ಈ ಬಣ್ಣಗಳ ಬಟ್ಟೆ ಧರಿಸಬೇಡಿ.
ಹಾಗೆಯೇ ಭಾನುವಾರ ಶನಿಗೆ ಸಂಬಂಧಿಸಿದ ಆಹಾರ, ಮಾಂಸ ಮತ್ತು ಮದ್ಯವನ್ನು ಸೇವಿಸಬಾರದು. ಇವುಗಳನ್ನು ಸೇವಿಸಿದರೆ ಜಾತಕದಲ್ಲಿ ಸೂರ್ಯ ಮತ್ತು ಶನಿಯ ಸ್ಥಿತಿಯೂ ಹದಗೆಡುತ್ತದೆ ಎನ್ನಲಾಗುತ್ತದೆ. ಅಲ್ಲದೇ, ಈ ದಿನ ನಿಮ್ಮ ಕೂದಲು ಸಹ ಕಟ್ ಮಾಡಿಸಬಾರದು
ನಿಮ್ಮ ಪ್ರತಿಕ್ರಿಯೆ ಏನು?






