ಇದು "ಛಾವಾ" ಎಫೆಕ್ಟ್: ಸಿನಿಮಾ ನೋಡಿದ ಜನ ರಾತ್ರೋ ರಾತ್ರಿ ಮಾಡಿದ್ದೇನು?

ಮಾರ್ಚ್ 8, 2025 - 20:13
 0  9
ಇದು "ಛಾವಾ" ಎಫೆಕ್ಟ್: ಸಿನಿಮಾ ನೋಡಿದ ಜನ ರಾತ್ರೋ ರಾತ್ರಿ ಮಾಡಿದ್ದೇನು?

ದೇಶದಲ್ಲೇ ಛಾವಾ ಸಿನಿಮಾ  ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಐತಿಹಾಸಿಕ ಕಥೆ ಇರುವ ಈ ಸಿನಿಮಾವನ್ನು ಪ್ರೇಕ್ಷಕರು ಹಾಡಿ ಹೊಗಳಿದ್ದಾರೆ. ಆದ್ರೆ ಈ ಸಿನಿಮಾದಲ್ಲಿನ ಎಳೆಯನ್ನ ಆಧರಿಸಿದ ಜನರು ಚಿನ್ನದ ನಿಧಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. 

ಲಕ್ಷ್ಮಣ್ ಉಟೇಕರ್ ನಿರ್ದೇಶನ, ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಅಭಿನಯದ ಛಾವಾ ಸಿನಿಮಾದಲ್ಲಿ ಮಧ್ಯಪ್ರದೇಶದ ಬುರ್ಹಾನ್‌ಪುರ, ಅಸೀಘರ್ ಕೋಟೆ ಕುರಿತು ಉಲ್ಲೇಖವಿದೆ. ಈ ಸಿನಿಮಾ ಮೊಘಲರ ಕಾಲದ ಕಥೆಯನ್ನು ಹೇಳುತ್ತದೆ. ಮೊಘಲರು, ಮರಾಠರಿಂದ ಅಪಾರ ಚಿನ್ನ, ವಜ್ರ, ವೈಡ್ಯೂರ್ ಲೂಟಿ ಮಾಡಿ ಅಸೀಘಾರ್ ಕೋಟೆಯಲ್ಲಿ ಇಟ್ಟಿದ್ದರು ಎಂದು ಸಿನಿಮಾ ಹೇಳುತ್ತದೆ. ಸದ್ಯ ಈ ಸಿನಿಮಾದ ಕಥೆ ನಿಜ ಎಂಬುವಂತೆ ಘಟನೆಯು ನಡೆದಿದೆ. ಇದರ ಜೊತೆಗೆ ಜನರು ಚಿನ್ನದ ಶೋಧಕ್ಕೂ ಇಳಿದಿದ್ದಾರೆ ಎನ್ನಲಾಗಿದೆ.

ಇತ್ತೀಚಿಗೆ ಬುರ್ಹಾನ್‌ಪುರದಿಂದ 18 ಕಿ.ಮೀ ದೂರದಲ್ಲಿರುವ ಆಸಿರ್‌ಗಢ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುವಾಗ ದರ್ಗಾದ ಬಳಿ ಇರುವ ಮಣ್ಣನ್ನು ಅಗೆದಿತ್ತು. ಈ ಮಣ್ಣನ್ನು ಹಾರೂನ್ ಶೇಖ್ ಎಂಬವರ ಹೊಲದಲ್ಲಿ ಹೋಗಿ ಹಾಕಲಾಗಿತ್ತು. ಹೊಲಕ್ಕೆ ಕೆಲಸ ಮಾಡಲು ಬಂದ ಕೂಲಿ ಕಾರ್ಮಿಕರಿಗೆ, ಹಾಕಿದ್ದ ಮಣ್ಣಿನಲ್ಲಿ ಇತಿಹಾಸ ಕಾಲದ ಲೋಹದ ನಾಣ್ಯಗಳು ಸಿಕ್ಕಿವೆ. ಆದರೆ ಹೊಲದಲ್ಲಿ ಚಿನ್ನ, ಬೆಳ್ಳಿಯ ನಾಣ್ಯಗಳು ಸಿಗುತ್ತಿವೆ ಎಂದು ವದಂತಿ ಸುತ್ತಲಿನ ಹಳ್ಳಿಗಳಲ್ಲಿ, ಎಲ್ಲೆಡೆ ಹಬ್ಬಿದೆ ಎಂದು ಹೇಳಲಾಗಿದೆ

ಹೀಗಾಗಿ ಜನರು ರಾತ್ರೋರಾತ್ರಿ ಆ ಗ್ರಾಮದಲ್ಲಿ ಭೂಮಿ ಅಗೆಯುವ ಕೆಲಸ ಮಾಡುತ್ತಿದ್ದಾರೆ. ನೂರಾರು ಜನರು ಗುದ್ದಲಿ, ಹಾರೆ ಹಿಡಿದು ಭೂಮಿ ಅಗೆದು ಚಿನ್ನಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ. ಮೊಘಲರು ಅಸೀಘಾರ್ ಕೋಟೆ ಬಳಿ ಚಿನ್ನ, ಬೆಳ್ಳಿ, ವಜ್ರ ಹುದುಗಿಸಿಟ್ಟಿದ್ದಾರೆಂದು ಜನರು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಚಿನ್ನ ಸಿಗುತ್ತದೆಂದು ಹುಡುಕಲು ಆರಂಭಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow