ಐಸಿಸಿ ಚಾಂಪಿಯನ್ಸ್ ಟ್ರೋಫಿ: ಟೀಂ ಇಂಡಿಯಾಗೆ ಹೊಸ ಉಪನಾಯಕ, ಸ್ಟಾರ್ ಬೌಲರ್ ಗೆ ಜವಬ್ದಾರಿ!

ಐಸಿಸಿ ಚಾಂಪಿಯನ್ಸ್ ಟ್ರೋಫಿ - 2025, ಫೆಬ್ರವರಿ 19ರಂದು ಆರಂಭವಾಗಲಿದೆ. ಮೊದಲ ಪಂದ್ಯ ಅತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ತಂಡದ ನಡುವೆ ಕರಾಚಿಯಲ್ಲಿ ನಡೆಯಲಿದೆ. ಭಾರತದ ಮೊದಲ ಪಂದ್ಯ ಬಾಂಗ್ಲಾದೇಶದೊಂದಿಗೆ ಫೆ.20ರಂದು ದುಬೈಯಲ್ಲಿ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿಗೆ ತಂಡದ ಆಯ್ಕೆಗೆ ಜನವರಿ 12ರ ಗಡುವನ್ನು ಐಸಿಸಿ ನೀಡಿದೆ. 15 ಆಟಗಾರರ ಪಟ್ಟಿಯನ್ನು ಈ ದಿನದೊಳಗೆ ಕಳುಹಿಸಬೇಕಾಗಿದ್ದು, ಫೆ.13ರವರೆಗೆ ತಂಡದಲ್ಲಿ ಬದಲಾವಣೆಯನ್ನು ಮಾಡಲು ಅವಕಾಶವಿದೆ. ಅದರಂತೆ, ಎಲ್ಲಾ ತಂಡಗಳು ಅಂತಿಮ ಸಿದ್ದತೆ ನಡೆಸುತ್ತಿವೆ. ಇದೀಗ ಬಿಸಿಸಿಐ ಆಯ್ಕೆ ಸಮಿತಿ, ಬಲಿಷ್ಠ ಭಾರತ ತಂಡದ ಆಯ್ಕೆ ಕಸರತ್ತು ನಡೆಸುತ್ತಿದೆ. ರೋಹಿತ್ ಶರ್ಮಾ ನಾಯಕನಾಗಿ ತಂಡವನ್ನು ಮುನ್ನಡೆಸುವುದು ಖಚಿತ ಎಂದು ವರದಿಯಾಗಿದೆ.
ಇನ್ನೂ ತಂಡದ ಉಪನಾಯಕ ವಿಚಾರಕ್ಕೆ ಸಂಬಂಧಿಸಿ ಬಿಗ್ ಅಪ್ಡೇಟ್ಸ್ ಸಿಕ್ಕಿದೆ. ಶುಬ್ಮನ್ ಗಿಲ್ ಅಥವಾ ಹಾರ್ದಿಕ್ ಪಾಂಡ್ಯಗೆ ಉಪನಾಯಕನ ಪಟ್ಟ ಕಟ್ಟುವ ಬದಲು, ಜಸ್ಪ್ರೀತ್ ಬುಮ್ರಾಗೆ ಆ ಜವಾಬ್ದಾರಿ ನೀಡಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ.
2024ರಲ್ಲಿ ಟೀಂ ಇಂಡಿಯಾ ಕೇವಲ ಮೂರು ಏಕದಿನ ಪಂದ್ಯವನ್ನ ಮಾತ್ರ ಆಡಿದೆ. ಏಕದಿನ ಪಂದ್ಯದಲ್ಲಿ ಭಾರತ ಹೆಚ್ಚು ಬದಲಾವಣೆ ಅಥವಾ ಯಾವುದೇ ಪ್ರಯೋಗ ಕೂಡ ಮಾಡಿಲ್ಲ. 2023ರಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ಫೈನಲ್ ಪ್ರವೇಶ ಮಾಡಿತ್ತು. ಈ ಅವಧಿಯಲ್ಲಿ ಭಾರತ ತಂಡದ ಬ್ಯಾಟಿಂಗ್ ಶಕ್ತಿ ತುಂಬಾ ಅದ್ಭುತವಾಗಿತ್ತು
ರಾಹುಲ್ ದ್ರಾವಿಡ್ ಕೋಚಿಂಗ್ ಅವಧಿಯಲ್ಲಿ ಹಾರ್ದಿಕ್ ಪಾಂಡ್ಯಗೆ ಏಕದಿನ ಪಂದ್ಯಗಳ ಟೂರ್ನಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿತ್ತು. ಕೆಎಲ್ ರಾಹುಲ್, ಶುಬ್ಮನ್ ಗಿಲ್ ಕೂಡ ಉಪನಾಯಕರಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ. ಇದೀಗ ತಂಡದಲ್ಲಿ ಗಂಭೀರ್ ಹಿಡಿತ ಸಾಧಿಸಿದ್ದು, ಉಪನಾಯಕನ ಜವಾಬ್ದಾರಿ ಬುಮ್ರಾಗೆ ನೀಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






