ಕಣಿವೆಯ ಕುರಿತು ಪ್ರಧಾನಿಗಿರುವ ವಿಶೇಷ ಕಾಳಜಿಯನ್ನು ನಾವು ಮೆಚ್ಚಲೇಬೇಕು: ವೇದಿಕೆಯಲ್ಲೇ ಮೋದಿ ಹೊಗಳಿದ ಒಮರ್ ಅಬ್ದುಲ್ಲಾ

ಶ್ರೀನಗರ: ಕಣಿವೆಯ ಕುರಿತು ಪ್ರಧಾನಿಗಿರುವ ವಿಶೇಷ ಕಾಳಜಿಯನ್ನು ನಾವು ಮೆಚ್ಚಲೇಬೇಕು ಎಂದು ಮೋದಿ ಅವರನ್ನು ಒಮರ್ ಅಬ್ದುಲ್ಲಾ ಹೊಗಲಿದ್ದಾರೆ. ಶ್ರೀನಗರ - ಲೆಹ್ ನಡುವಿನ 'ಝೆಡ್-ಮೋಡ್' ಸುರಂಗ ಮಾರ್ಗ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಕಣಿವೆಯ ಕುರಿತು ಪ್ರಧಾನಿ ಮೋದಿ ಅವರಿಗಿರುವ ವಿಶೇಷ ಕಾಳಜಿಯನ್ನು ನಾವು ಮೆಚ್ಚಲೇಬೇಕು ಎಂದು ಹೇಳಿದರು. ಅಲ್ಲದೇ ಕಣಿವೆಯ ಕುರಿತು ಪ್ರಧಾನಿ ಮೋದಿ ಹೇಳಿರುವ ಎಲ್ಲಾ ಸಂಗತಿಗಳೂ ಸತ್ಯವಾಗುತ್ತಿವೆ ಎಂದು ಹೇಳುವ ಮೂಲಕ ಒಮರ್ ಅಬ್ದುಲ್ಲಾ ಅಚ್ಚರಿ ಮೂಡಿಸಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನದಂದು ಶ್ರೀನಗರದಲ್ಲಿ ನಿಮ್ಮ ಕಾರ್ಯಕ್ರಮದಲ್ಲಿ ನೀವು 3 ಪ್ರಮುಖ ವಿಷಯಗಳನ್ನು ಹೇಳಿದ್ದೀರಿ. ನೀವು 'ದಿಲ್ ಕಿ ದೂರಿ' (ಹೃದಯಗಳ ನಡುವಿನ ಅಂತರ) ಮತ್ತು 'ದಿಲ್ಲಿ ಕಿ ದೂರಿ' (ಕಣಿವೆ ಮತ್ತು ದೆಹಲಿ ನಡುವನ ಅಂತರ) ಕಡಿಮೆ ಮಾಡಲು ಕೆಲಸ ಮಾಡುತ್ತೇನೆ ಎಂದು ಹೇಳಿದ್ದೀರಿ. ನಿಮ್ಮ ಕೆಲಸದಿಂದ ಇದು ಸತ್ಯ ಎಂದು ಸಾಬೀತಾಗಿದೆ..." ಎಂದು ಒಮರ್ ಅಬ್ದುಲ್ಲಾ ಅವರು ಪ್ರಧಾನಿ ಮೋದಿ ಅವರನ್ನು ಕೊಂಡಾಡಿದ್ದಾರೆ.
ಮುಂದುವರೆದು, "ಜಮ್ಮು ಕಾಶ್ಮೀರದ ಜನರಿಗೆ ನೀವು ಶೀಘ್ರದಲ್ಲೇ ಚುನಾವಣೆಯ ಭರವಸೆ ನೀಡಿದ್ದೀರಿ. ಅದರಂತೆ ಕೇವಲ ನಾಲ್ಕು ತಿಂಗಳ ಒಳಗೆ ಚುನಾವಣೆಗಳು ನಡೆದು ಜನರು ತಮ್ಮ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸುವ ಮೂಲಕ, ಹೊಸ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಅತ್ಯಂತ ಶಾಂತಿಯುತವಾಗಿ ನಡೆದ ಈ ಚುನಾವಣೆಯನ್ನು ಕಣಿವೆಯ ಜನರು ಬಹಳ ದಿನಗಳ ಕಾಲ ನೆನಪಿನಲ್ಲಿಟ್ಟುಕೊಳ್ಳಲಿದ್ದಾರೆ ಎಂದರು.
ನಿಮ್ಮ ಪ್ರತಿಕ್ರಿಯೆ ಏನು?






