ಕಲಬುರ್ಗಿ ಜೈಲಿನ ಬಿಂದಾಸ್ ಲೈಫ್: ಮೊಬೈಲ್, ಗಾಂಜಾ ಬಳಸುತ್ತಾ ಕೈದಿಗಳು ಎಂಜಾಯ್!

ಕಲಬುರ್ಗಿ:- ಕಲಬುರ್ಗಿ ಜೈಲಿನ ಕರ್ಮಕಾಂಡ ಒಂದಾ, ಎರಡಾ ಸ್ವಾಮಿ. ಬೇಕಾದಾಗ ಮೊಬೈಲ್, ನಶೆಯಲ್ಲಿ ತೇಲಲು ಗಾಂಜಾ, ಅಬ್ಬಬ್ಬಾ ಖೈದಿಗಳ ಬಿಂದಾಸ್ ಲೈಫ್. ಖುದ್ದು ವಿಚಾರಣಾಧೀನ ಖೈದಿಗಳು ಈ ವಿಚಾರ ಬಟಾ ಬಯಲು ಮಾಡಿದ್ದಾರೆ.
ಹಣ ಕೊಟ್ಟರೆ ಜೈಲಿನಲ್ಲಿ ಬಿಂದಾಸ್ ಆಗಿ ಇರಬಹುದು ಎಂಬುದಕ್ಕೆ ವಿಡಿಯೋ ಸಮೇತ ಸಾಕ್ಷಿ ನೀಡಿದ್ದಾರೆ ವಿಚಾರಣಾಧೀನ ಖೈದಿಗಳು. ಯಾಕೆಂದರೆ, ಜೈಲಿನ ಸೆಲ್ನಲ್ಲಿ ಮದ್ಯದ ಬಾಟಲ್ಗಳು, ಖೈದಿಗಳೆಲ್ಲಾ ಗುಂಪಾಗಿ ಕುಳಿತು ಗಾಂಜಾ ಹೊಡೆಯುತ್ತಿರುವ ವಿಡಿಯೋ ಒಂದಡೆಯಾದರೆ, ಮತ್ತೊಂದಡೆ ಸ್ಮಾರ್ಟ್ ಪೋನ್ ಮೂಲಕ ವಿಡಿಯೋ ಕಾಲ್ ಮೂಲಕ ತಮ್ಮ ಸ್ನೇಹಿತ ಜೊತೆ ಬಿಂದಾಸ್ ಆಗಿ ಮಾತನಾಡುತ್ತಿರುವ ವಿಡಿಯೋಗಳನ್ನ ಖುದ್ದು ಜೈಲು ಹಕ್ಕಿಗಳೇ ವೈರಲ್ ಮಾಡಿದ್ದಾರೆ.
ಸದ್ಯ ಕಲಬುರಗಿ ಜೈಲಿನಲ್ಲಿರುವ ವಿಶಾಲ್, ಸಾಗರ್, ಸೋನು ಎಂಬ ವಿಚಾರಣಾಧೀನ ಖೈದಿಗಳ ವಿಡಿಯೋ ವೈರಲ್ ಆಗಿದೆ. ಇವರೆಲ್ಲ ಕಳೆದ ಹಲವಾರು ದಿನಗಳಿಂದ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿಯೇ ಇದ್ದಾರೆ. ಇವರೇ ಇದೀಗ ವಿಡಿಯೋ ಕಾಲ್ ಮೂಲಕ ಜೈಲಿನ ಕರ್ಮಕಾಂಡವನ್ನ ಬಯಲು ಮಾಡಿದ್ದಾರೆ.
ಇದಿಷ್ಟೇ ಯಾಕೆ, ರಾಜ್ಯವನ್ನೆ ಬೆಚ್ಚಿ ಬಿಳಿಸಿರುವ ರೇಣುಕಾಸ್ವಾಮಿ ಕೊಲೆ ಆರೋಪಿ, ಚಿತ್ರನಟ ದರ್ಶನ್ ಮ್ಯಾನೆಜರ್ ನಾಗರಾಜ್ ಕೂಡಾ ಇದೇ ಜೈಲಿನಲ್ಲಿದ್ದಾರೆ. ಹೀಗಾಗಿ ಈ ವಿಡಿಯೋ ಹಲವು ಅನುಮಾನಗಳಿಗೆ ಕಾರಣವಾಗಿದೆ. ಯಾಕೆಂದರೆ, ಸಾಮಾನ್ಯ ಖೈದಿಗಳೇ ಇಷ್ಟೊಂದು ಬಿಂದಾಸ್ ಆಗಿ ಇದ್ದಾರೆ ಎಂದರೆ, ವಿಐಪಿ ಖೈದಿ ಆಗಿರುವ ದರ್ಶನ್ ಮ್ಯಾನೆಜರ್ಗೆ ಯಾವ ರೀತಿ ರಾಜಾತಿಥ್ಯ ಸಿಗುತ್ತಿರಬಹುದು ಎಂಬ ಪ್ರಶ್ನೆ ಉಂಟಾಗಿದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






