ಮುಡಾ ದೂರುದಾರ ಸ್ನೇಹಮಯಿ ಕೃಷ್ಣರ ರಕ್ಷಣೆಗೆ ನಾವು ಸಿದ್ಧ: MB ಪಾಟೀಲ್!

ವಿಜಯಪುರ:- ಮುಡಾ ದೂರುದಾರ ಸ್ನೇಹಮಯಿ ಕೃಷ್ಣರ ರಕ್ಷಣೆಗೆ ನಾವು ಸಿದ್ಧ ಎಂದು MB ಪಾಟೀಲ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ದೂರುದಾರ ಸ್ನೇಹಮಯಿ ಕೃಷ್ಣಗೆ ರಕ್ಷಣೆ ಕೊಡಲು ನಾವು ಬದ್ಧ. ಸಿಎಂ ಸಿದ್ದರಾಮಯ್ಯರನ್ನು ಅರೆಸ್ಟ್ ಮಾಡಲು ಸ್ನೇಹಮಯಿ ಕೃಷ್ಣ ಆಗ್ರಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಂಧನ ಯಾಕೆ ಆಗಬೇಕು. ದೂರುದಾರರಿಗೆ ರಕ್ಷಣೆ ಕೊಡಲು ನಮ್ಮಲ್ಲಿ ಇದ್ದಾರೆ. ಆ ರೀತಿ ಸಿದ್ದರಾಮಯ್ಯ ಆಗಲಿ ಅಥವಾ ಬೇರೆಯಾರೇ ಆಗಲಿ ನಮ್ಮಲ್ಲಿ ಮಾಡುವುದಿಲ್ಲ. ನಿರ್ಭೀತಿಯಿಂದ ಅವರು ಇರಬಹುದು ಎಂದರು.
ಖರ್ಗೆ ಕುಟುಂಬ ಸಿಎ ಸೈಟ್ ವಾಪಸ್ ನೀಡಿರುವ ವಿಚಾರವಾಗಿ ಮಾತನಾಡಿ, ನಾನು ದೇಶದಲ್ಲಿ ಇರಲಿಲ್ಲ. ಬೆಂಗಳೂರಿಗೆ ಹೋಗಿಲ್ಲ. ಸಿದ್ದಾರ್ಥ ವಿಹಾರ ಟ್ರಸ್ಟ್ನ ಸಿಎ ಸೈಟ್ ವಾಪಸ್ ನೀಡಿದ್ದರ ಬಗ್ಗೆ ನನಗೆ ಗೊತ್ತಿಲ್ಲ, ನಾನು ಅಮೇರಿಕಾದಿಂದ ನೇರವಾಗಿ ವಿಜಯಪುರ ಬಂದಿದ್ದೇನೆ. ನಾನು ಬೆಂಗಳೂರು ಹೋದ ನಂತರ ನೋಡುತ್ತೇನೆ. ಆಮೇಲೆ ಉತ್ತರಿಸುತ್ತೇನೆ ಎಂದರು.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






