ಕಿಚ್ಚನ ಕೂಗಿಗೆ ವ್ಯಾಪಕ ಸ್ಪಂದನೆ: ಒಂದೇ ದಿನದಲ್ಲಿ ಮಗುವಿನ ಚಿಕಿತ್ಸೆಗೆ ಕನ್ನಡಿಗರು ಕೊಟ್ಟಿದೆಷ್ಟು?

ಸ್ಯಾಂಡ್ಲ್ವುಡ್ ನಟ ಕಿಚ್ಚ ಸುದೀಪ್ ಅವರು ಪುಟ್ಟ ಮಗುವಿನ ಜೀವ ಉಳಿಸೋ ಹೋರಾಟಕ್ಕೆ ಮುಂದಾಗಿದ್ದು, ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಮಗುವಿನ ಸಹಾಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸುವಂತೆ ವಿಡಿಯೋ ಸಂದೇಶದ ಮೂಲಕ ನಟ ಕಿಚ್ಚ ಸುದೀಪ್ ಅವರು ಮನವಿ ಮಾಡಿದ್ದರು.
ಸುದೀಪ್ ಅವರು ವಿಡಿಯೋ ಮಾಡಿದ ಒಂದೇ ದಿನದಲ್ಲಿ ಕೀರ್ತನಾ ಅವರ ಚಿಕಿತ್ಸೆಗೆ ಲಕ್ಷ, ಲಕ್ಷ ರೂಪಾಯಿ ಹಣದ ನೆರವು ಹರಿದು ಬಂದಿದೆ.
ನಿನ್ನೆ ಬೆಳಗ್ಗೆ ಕಿಚ್ಚ ಸುದೀಪ್ ಅವರ ಫ್ಯಾನ್ಸ್ ಪೇಜ್ಗಳಲ್ಲಿ ಈ ವಿಡಿಯೋ ರಿಲೀಸ್ ಮಾಡಲಾಗಿತ್ತು. ಈ ವಿಡಿಯೋದಲ್ಲಿ ಕಿಚ್ಚ ಸುದೀಪ್ ಅವರು ನಮ್ಮ ಫಾರೆಸ್ಟ್ ಡಿಪಾರ್ಟ್ಮೆಂಟ್ ಅಲ್ಲಿ ವರ್ಕ್ ಮಾಡ್ತಿದ್ದಂತಹ ಆಫೀಸರ್ ಅವ್ರ ಹೆಸರು ಕಿಶೋರ್. ಅವರ ಧರ್ಮಪತ್ನಿ ನಾಗಶ್ರೀ ಅವರು.
ಈ ದಂಪತಿಗೆ ಒಂದು ಪುಟ್ಟ ಮಗು. 2 ವರ್ಷ 2 ತಿಂಗಳು. ಹೆಸರು ಕೀರ್ತನ ಅಂತಾ. ಬಹಳ ಸುಂದರವಾದಂತಹ ಒಂದು ಮುಗ್ಧ ಮಗು. ಈ ಮಗುವಿಗೆ ಒಂದು ರೇರ್ ಜೆನಟಿಕಲ್ ಡಿಸಾರ್ಡರ್ ಆಗಿದೆ. SMA – ಸ್ಪೈನಲ್ ಮಸ್ಕುಲರ್ ಅಟ್ರೊಫಿ ಅಂತಾ. ಬಹಳ ರೇರ್ ಜೆನಟಿಕಲ್ ಡಿಸಾರ್ಡರ್ ಇದು ಎಂದು ಮಗುವಿನ ಅನಾರೋಗ್ಯ ಬಗ್ಗೆ ಮಾಹಿತಿ ನೀಡಿದ್ದರು.
ಇದಕ್ಕೊಂದು ಔಷಧಿ ಇದೆ. ಗುಣ ಆಗೋವಂತಹ ಸಾಧ್ಯತೆಗಳಿವೆ. ಆದ್ರೆ ಆ ಒಂದು ಮೆಡಿಕಲ್ ಟ್ರೀಟ್ಮೆಂಟ್ಗೆ ಬೇಕಾದಂತಹ ಒಂದು ಮೊತ್ತ ಕೇಳಿದ್ರೆ ಮೈಜುಂ ಅನಿಸುತ್ತದೆ. ಈ ಚಿಕಿತ್ಸೆಗೆ ಬೇಕಾಗಿರೋದು 16 ಕೋಟಿ ರೂಪಾಯಿ.
ತಂದೆ ತಾಯಿ ಎಲ್ಲದನ್ನೂ ಬಿಟ್ಟು, ಅವರ ಆಸ್ತಿಯನ್ನೂ ಮಾರಿ, ಎಲ್ಲವನ್ನೂ ಮಾಡಿ ಈ ಮಗುವನ್ನು ಉಳಿಸಿಕೊಳ್ಳೋ ಪ್ರಯತ್ನದಲ್ಲಿದ್ದಾರೆ. ಸಾಕಷ್ಟು ಜನ ಇದಕ್ಕೆ ಕೈಜೊಡಿಸಿದ್ದಾರೆ. ಸಾಕಷ್ಟು ಜನ ಸಹಾಯ ಮಾಡಲು ಮುಂದೆ ಬಂದಿದ್ದಾರೆ
ನನ್ನ ಕೈಲಾದಷ್ಟು, ನಾನೇನು ಮಾಡಬಲ್ಲೆ ಅದನ್ನು ಮಾಡಿದ್ದೇನೆ. ನಾನು ಈ ವಿಡಿಯೋ ಮಾಡಲು ಮುಖ್ಯ ಕಾರಣ ಅಷ್ಟೇನೆ. ಒಂದೇ ಒಂದು ರಿಕ್ವೆಸ್ಟ್. ಇಲ್ಲಿ ಕ್ಯೂಆರ್ ಕೋಡ್ ಇದೆ. ಇದಕ್ಕೆ ನಿಮ್ಮ ಕೈಯಲ್ಲಿ ಎಷ್ಟು ಸಹಾಯ ಮಾಡಕ್ಕಾಗುತ್ತೋ ಖಂಡಿತಾ ಮಾಡಿ. ಆ ಮಗು, ನಮ್ಮ ಕೀರ್ತನಳನ್ನು ಉಳಿಸಿಕೊಳ್ಳೋ ಪ್ರಯತ್ನ ನಾವೆಲ್ಲಾ ಸೇರಿ ಮಾಡೋಣ ಎಂದು ತಿಳಿಸಿದ್ದರು
ಕಿಚ್ಚ ಸುದೀಪ್ ಮಾಡಿದ ಈ ಮನವಿಗೆ ನೆರವಿನ ಮಹಾಪೂರವೇ ಹರಿದು ಬಂದಿದೆ. ಸುದೀಪ್ ಅಭಿಮಾನಿಗಳು, ಸಹೃದಯಿ ಕನ್ನಡಿಗರು ಕೀರ್ತನಾ ಅವರಿಗೆ ಹಣದ ಸಹಾಯ ಮಾಡುತ್ತಿದ್ದಾರೆ. ಸಾವಿರಾರು ಜನ ತಮ್ಮ ಕೈಯಲ್ಲಾದಷ್ಟು ಹಣವನ್ನು ಪಾವತಿ ಮಾಡುತ್ತಿದ್ದಾರೆ. ಸುದೀಪ್ ಅವರು ವಿಡಿಯೋ ಮಾಡಿದ ಒಂದೇ ದಿನದಲ್ಲಿ ನನ್ನ ಮಗಳ ಚಿಕಿತ್ಸೆಗೆ 18 ಲಕ್ಷ ರೂಪಾಯಿ ಹಣ ಸಹಾಯ ಮಾಡಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






