ಕೇವಲ ಸಾಬ್ರೂ, ಸಾಬ್ರೂ ಎನ್ನುತ್ತಾರೆ. ರಾಜ್ಯದಲ್ಲಿ ಸಾಬ್ರೂ ಬಿಟ್ರೇ ಬೇರೆ ಯಾರು ಇಲ್ವಾ?: ಶಾಸಕ ಯತ್ನಾಳ್ ಕಿಡಿ

ವಿಜಯಪುರ: ಕೇವಲ ಸಾಬ್ರೂ, ಸಾಬ್ರೂ ಎನ್ನುತ್ತಾರೆ. ರಾಜ್ಯದಲ್ಲಿ ಸಾಬ್ರೂ ಬಿಟ್ರೇ ಬೇರೆ ಯಾರು ಇಲ್ವಾ? ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಅಲ್ಪಸಂಖ್ಯಾತರಿಗೆ ವಸತಿಯಲ್ಲಿ 5% ಏರಿಕೆ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಜೈನ್, ಸಿಖ್, ಕ್ರೈಸ್ತರು ಅಲ್ಪಸಂಖ್ಯಾತರಿದ್ದಾರೆ. ಅವರಿಗೆ 10% ಮಾತ್ರ, ಮುಸ್ಲಿಂರಿಗೆ 80% ಕೊಡುತ್ತಾರೆ. ಬೆಳಗಾವಿ ಅಧಿವೇಶನದಲ್ಲಿ ನನಗೆ ಹಾಗೂ ಜಮೀರ್ಗೆ ಇದೇ ವಿಷಯದಿಂದ ಜಗಳವಾಗಿತ್ತು ಎಂದರು.
ಇನ್ನೂ ಮುಸ್ಲಿಂರಿಗೆ 80% ಹಂಚಿಕೆ ಮಾಡಲು ಇರ್ಯಾರು? ಹಿಂದೂಗಳಿಗೆ ಇಲ್ಲಿ ಏನಿಲ್ಲ. ಸಿದ್ದರಾಮಯ್ಯ, ಡಿಕೆಶಿ ಬಹುತೇಕ ಮೂರು ವರ್ಷದಲ್ಲಿ ಕರ್ನಾಟಕವನ್ನ ಮತ್ತೊಂದು ಕೇರಳ, ಪಶ್ಚಿಮ ಬಂಗಾಳನಂತೆ ಮುಸ್ಲಿಂ ರಾಜ್ಯ ಮಾಡುತ್ತಾರೆ.
ಸಿದ್ದರಾಮಯ್ಯ ತಮ್ಮ ಸಮುದಾಯಕ್ಕೆ ಕೊಡುಗೆ ಕೊಡಲಿ. ಕುರಿಗಾಹಿಗಳಿಗೆ 5 ಲಕ್ಷ ರೂ, ಕೊಡಲಿ. ಮುಸ್ಲಿಂರಿಗೆ ಬಿಟ್ಟು ಬೇರೆ ಯಾರಿಗೂ ಕೊಡುತ್ತಿಲ್ಲ. ಕೇವಲ ಸಾಬ್ರೂ, ಸಾಬ್ರೂ ಎನ್ನುತ್ತಾರೆ. ರಾಜ್ಯದಲ್ಲಿ ಸಾಬ್ರೂ ಬಿಟ್ರೇ ಬೇರೆ ಯಾರು ಇಲ್ವಾ? ಎಂದು ಕಿಡಿಕಾರಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






