ಖ್ಯಾತ ನಟ ದಳಪತಿ ವಿಜಯ್ ಅಬಿಮಾನಿ ಮುಖಕ್ಕೆ ಗನ್ ಹಿಡಿದ ಬಾಡಿಗಾರ್ಡ್! ಯಾಕೆ!?

ಖ್ಯಾತ ನಟ ದಳಪತಿ ವಿಜಯ್ ಅಬಿಮಾನಿ ಮುಖಕ್ಕೆ ಬಾಡಿಗಾರ್ಡ್ ಗನ್ ಹಿಡಿದ ಘಟನೆ ಮಧುರೈ ವಿವಾನ ನಿಲ್ದಾಣದಲ್ಲಿ ಜರುಗಿದೆ.
ದಳಪತಿ ವಿಜಯ್ ಅವರು ಮಧುರೈ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಅವರು ಬರುವ ವಿಚಾರ ಮೊದಲೇ ತಿಳಿದಿತ್ತು. ಈ ಕಾರಣಕ್ಕೆ ಅನೇಕರು ಅಲ್ಲಿ ನೆರೆದಿದ್ದರು. ಈ ವೇಳೆ ವಯಸ್ಸಾದ ಅಭಿಮಾನಿಯೋರ್ವ ವಿಜಯ್ನ ಭೇಟಿ ಮಾಡಲು ಮುಂದೆ ಬಂದಿದ್ದಾನೆ. ಬಾಡಿಗಾರ್ಡ್ಗಳ ಕಣ್ಣು ತಪ್ಪಿಸಿ ಭೇಟಿ ಮಾಡುವ ಪ್ರಯತ್ನ ಮಾಡಿದ್ದಾನೆ. ಆಗ ಅವರಿಗೆ ಬಾಡಿಗಾರ್ಡ್ ಗನ್ ತೋರಿಸಿ ಹೆದರಿಸಿದ್ದಾನೆ.
ದಳಪತಿ ವಿಜಯ್ ಅವರು ‘ಜನ ನಾಯಗನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಶೂಟ್ ಕೊಡೆಕೆನಲ್ನಲ್ಲಿ ನಡೆದಿದೆ. ಅವರು ಮಧುರೈನಿಂದ ಚೆನ್ನೈಗೆ ಬರುವವರಿದ್ದರು. ಈ ವಿಡಿಯೋ ಮನೋಬಲ ವಿಜಯಬಾಲನ್ ಅವರು ಹಂಚಿಕೊಂಡಿದ್ದಾರೆ. ವಿಜಯ್ ಬಾಡಿಗಾರ್ಡ್ ನಡೆ ಎಲ್ಲ ಕಡೆ ಚರ್ಚೆ ಹುಟ್ಟುಹಾಕಿದೆ. ಅವರು ಆ ರೀತಿ ಮಾಡಬಾರದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






