ಚಿರಂಜೀವಿ ಚಿತ್ರದಲ್ಲಿ ನಟನೆಗೆ ಅವಕಾಶ ಬಂದಿದೆ: ಪ್ರದೀಪ್ ಈಶ್ವರ್

ಚಿರಂಜೀವಿ ಚಿತ್ರದಲ್ಲಿ ನಟನೆಗೆ ಅವಕಾಶ ಬಂದಿದೆ: ಪ್ರದೀಪ್ ಈಶ್ವರ್
ರಾಜಕಾರಣದಲ್ಲಿ ಎಂತೆಂಥವರನ್ನೋ ಡ್ಯಾನ್ಸ್ ಮಾಡಿಸಿದ್ದೀನಿ.. ನಮ್ಮದೇ ಸಮುದಾಯದವರಾದ ತೆಲುಗು ನಟ ಚಿರಂಜೀವಿ ಅವರ ಮುಂದಿನ ಚಿತ್ರದಲ್ಲಿ ನಟಿಸುವ ಬಗ್ಗೆ ಚರ್ಚೆಯಾಗಿದೆ. ಯಾವ ಪಾತ್ರ ಎಂಬುದನ್ನು ಅವರೇ ರಿವೀಲ್ ಮಾಡುತ್ತಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಚಿರಂಜೀವಿಯವರು ನಮ್ಮ ಸಮುದಾಯದವರು. ಹೀಗಾಗಿ ನಾನು ಶಾಸಕನಾಗಿ ಗೆದ್ದಾಗ ಅವರು ನನ್ನನ್ನು ಕರೆಸಿಕೊಂಡಿದ್ದರು. ಅವರ ಜತೆ ಒಂದು ಗಂಟೆ ಇದ್ದೆ. ಪವನ್ ಕಲ್ಯಾಣ್ ಅವರು ಗೆದ್ದಾಗ ಫೋನ್ ಮಾಡಿ ಶುಭ ಕೋರಿದ್ದೆ. ನನಗೂ ಸಿನಿಮಾ ರಂಗದ ಜತೆ ಸಂಪರ್ಕವಿದೆ. ಹೀಗಾಗಿ ಚಿರಂಜೀವಿಯವರ ವಿಶ್ವಂಬರ ಚಿತ್ರವಲ್ಲ, ಅದರ ನಂತರ ಬರುವ ಚಿತ್ರದಲ್ಲಿ ನಟಿಸುವ ಬಗ್ಗೆ ಚರ್ಚೆಯಾಗಿದೆ. ರಾಜಕಾರಣದಲ್ಲಿ ಆಕಾಶದ ಮೇಲಿದ್ದವರನ್ನೆಲ್ಲಾ ಡ್ಯಾನ್ಸ್ ಮಾಡಿಸಿದ್ದೀನಿ, ಇವರು ಯಾವ ಪಾತ್ರ ಕೊಡುತ್ತಾರೋ ಗೊತ್ತಿಲ್ಲ. ಅದನ್ನು ಅವರೇ ಹೇಳಲಿದ್ದಾರೆ ಎಂದರು.
ನಗರಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಗೆದ್ದವರು ವೋಟ್ ಹಾಕಲಿದ್ದಾರೆ ಎಂಬ ನಿರೀಕ್ಷೆ ಇದೆ. ನಮಗೆ ಅಧಿಕಾರ ಸಿಗದೇ ಇದ್ದರೂ ಪರವಾಗಿಲ್ಲ, ನಾವು ಕುದುರೆ ವ್ಯಾಪಾರ ಮಾಡಲ್ಲ, 12 ಮಂದಿ ಸದಸ್ಯರಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾವೇನು ಎಂಬುದನ್ನು ತೋರಿಸುತ್ತೇವೆ ಎಂದು ಶಾಸಕರು ತಿಳಿಸಿದರು.
ನಗರಸಭೆ ಸದಸ್ಯರ ಬಗ್ಗೆ ಹಿಂದೆ ಮಾತನಾಡಿರುವುದಕ್ಕೆ ನಾನು ಬದ್ಧನಾಗಿದ್ದೇನೆ. ವಾಪಸ್ ಪಡೆಯುವ ಮಾತೇ ಇಲ್ಲ. ಈ ಬಾರಿ ಚುನಾವಣೆಯಲ್ಲಿಪಕ್ಷದಿಂದ ಗೆದ್ದವರು ಮತ ಹಾಕುವ ನಿರೀಕ್ಷೆ ಇದೆ. ನಮ್ಮ ಪಕ್ಷದಲ್ಲಿ3-4 ಮಂದಿ ಆಕಾಂಕ್ಷಿಗಳು ಇದ್ದಾರೆ. ಯಾರು ಅಭ್ಯರ್ಥಿ ಎಂಬುದುನ್ನು ಜಿಲ್ಲಾಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದಿಂದ ಗೆದ್ದು ಬೇರೆ ಪಕ್ಷದವರಿಗೆ ಮತ ಹಾಕುವುದು ನ್ಯಾಯಾನ? ಅವರೇನು 50 ಗ್ರಾಂ ಕಡಲೆಬೀಜ ಪಡೆದು ಬೇರೆ ಪಕ್ಷಕ್ಕೆ ಮತ ಹಾಕಿದ್ದಾರಾ? ಪಕ್ಷನಿಷ್ಠೆ ಬಗ್ಗೆ ನಾನು ಮಾತನಾಡಿದ್ದೇನೆ, ಹೀಗಾಗಿ ನಾನು ಯಾವುದೇ ಮಾತುಗಳನ್ನು ವಾಪಸ್ ಪಡೆಯುವ ಮಾತೇ ಇಲ್ಲಎಂದು ಪ್ರದೀಪ್ ಈಶ್ವರ್ ತಿಳಿಸಿದರು.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






