ದರ್ಶನ್ ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್: ಸಿನಿಮಾ ಕಡೆ ಮುಖ ಮಾಡಿದ ದಾಸ!

ಮಾರ್ಚ್ 7, 2025 - 17:59
 0  16
ದರ್ಶನ್ ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್: ಸಿನಿಮಾ ಕಡೆ ಮುಖ ಮಾಡಿದ ದಾಸ!

ಸಿಲಿಕಾನ್ ಸಿಟಿ ಬೆಂಗಳೂರಿನ ಡಿ ಗ್ಯಾಂಗ್ ನಡೆಸಿದ ಕೃತ್ಯ ದರ್ಶನ್ ಕ್ಯಾರೆಕ್ಟರ್ ಗೆ ಮಸಿ ಬಳದಂತಾಗಿತ್ತು. ಬ್ಯಾಕ್ ಟು ಬ್ಯಾಕ್ ಸಿನಿಮಾ ಆಫರ್, ಕೈ ತುಂಬಾ ದುಡ್ಡು, ಲಕ್ಷುರಿ ಜೀವನ ಇವೆಲ್ಲವನ್ನು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕಸಿದುಕೊಂಡಿತು. ಅಲ್ಲದೇ ದರ್ಶನ್ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಆದರೆ ದಾಸ ಮಾತ್ರ ಎಲ್ಲವನ್ನೂ ಗಟ್ಟಿಯಾಗಿ ಎದುರಿಸಿದರು. ಆನಂತರ ಬೇಲ್ ಮೇಲೂ ಕೂಡ ಹೊರ ಬಂದಿದ್ದಾರೆ. 

ಜೈಲಿನಿಂದ ಹೊರ ಬಂದ ಮೇಲೆ ತಮ್ಮ ಅಭಿಮಾನಿಗಳನ್ನ ಹಾಡಿ ಹೊಗಳಿದ್ದ ದಾಸ, ಇದೀಗ ಹೊಸ ಸಿನಿಮಾಕ್ಕಾಗಿ ಕ್ಯಾಮೆರಾ ಮುಂದೆ ತಮ್ಮ ಅದ್ಭುತ ನಟನೆ ಮುಂದುವರೆಸಲಿದ್ದಾರೆ. ಇದೇ ವಾರ ಡೆವಿಲ್ ಸಿನಿಮಾ ಶೂಟಿಂಗ್​ನಲ್ಲಿ ದರ್ಶನ್ ತೊಡಗಿಕೊಳ್ಳಲಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಡೆವಿಲ್ ಸಿನಿಮಾದ ಶೂಟಿಂಗ್ ಸಿದ್ಧತೆ ಜೋರಾಗಿ ನಡೆಯುತ್ತಿದೆ. ದರ್ಶನ್ ಕೂಡ ಶೂಟಿಂಗ್​ನಲ್ಲಿ ಭಾಗಿಯಾಗೋದು ಪಕ್ಕಾ ಆಗಿದೆ. ಈ ವಾರದಲ್ಲೇ ಚಿತ್ರೀಕರಣ ನಡೆಯಲಿದ್ದು ಚಿತ್ರೀಕರಣದಲ್ಲಿ ಇತರೆ ಕಲಾವಿದರು ತಮ್ಮ ಪಾತ್ರ ನಿಭಾಯಿಸಲಿದ್ದಾರೆ. ನಿಗದಿ ಮಾಡಿದ ಸಮಯಕ್ಕೆ ದರ್ಶನ್ ಶೂಟಿಂಗ್ ಸ್ಪಾಟ್​ಗೆ ಹೋಗಿ ಕ್ಯಾಮೆರಾ ಮುಂದೆ ಎಂದಿನಂತೆ ನಟನೆ ಮಾಡುವರು.

ಮಾರ್ಚ್​ 8 ರಂದು ಡೆವಿಲ್ ಶೂಟಿಂಗ್ ಬೆಂಗಳೂರಲ್ಲಿ ಆರಂಭವಾಗಲಿದ್ದು ಬಳಿಕ ಚಿತ್ರತಂಡ ಮೈಸೂರಿಗೆ ಸ್ಥಳಾಂತರಗೊಂಡು ಶೂಟಿಂಗ್ ನಡೆಸಲಿದೆ. ಈಗಾಗಲೇ ಈ ಸಿನಿಮಾದ ಶೂಟಿಂಗ್ ಕೆಲವೊಂದಿಷ್ಟು ಆಗಿದೆ. ಉಳಿದಿದ್ದನ್ನು ಈಗ ಮಾಡಲಾಗುತ್ತಿದೆ. ಅರ್ಧಕ್ಕೆ ನಿಂತಿದ್ದ ಡೆವಿಲ್ ಸಿನಿಮಾದ ಶೂಟಿಂಗ್ ಮುಂದುವರೆಯಲಿದೆ.

ಜೂನ್ 11 ರಂದು ಮೈಸೂರಲ್ಲಿ ಡೆವಿಲ್ ಚಿತ್ರೀಕರಣ ನಡೆಯುತ್ತಿರುವಾಗಲೇ ದರ್ಶನ್ ಅವರನ್ನು ಪೊಲೀಸರು ಪ್ರಕರಣವೊಂದರಲ್ಲಿ ಅರೆಸ್ಟ್ ಮಾಡಿದ್ದರು. ಜೈಲಿನಲ್ಲಿದ್ದ ದರ್ಶನ್ ಜಾಮೀನನ್ನು ಪಡೆದು ಹೊರ ಬಂದಿದ್ದಾರೆ. ಅಂದು ನಿಂತು ಹೋಗಿದ್ದ ಚಿತ್ರೀಕರಣವನ್ನು 10 ತಿಂಗಳ ಬಳಿಕ ಮತ್ತೆ ಮಾಡಲಾಗುತ್ತಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow