ದೆವ್ವ ಬಂತು ದೆವ್ವ: ಬಿಗ್ ಬಾಸ್ ಮನೆಯಲ್ಲಿ ನಡುಗಿ ಹೋದ ಚೈತ್ರಾ ಕುಂದಾಪುರ್! ಅಂತದ್ದೇನಾಯ್ತು!

ಡಿಸೆಂಬರ್ 22, 2024 - 10:05
 0  14
ದೆವ್ವ ಬಂತು ದೆವ್ವ: ಬಿಗ್ ಬಾಸ್ ಮನೆಯಲ್ಲಿ ನಡುಗಿ ಹೋದ ಚೈತ್ರಾ ಕುಂದಾಪುರ್! ಅಂತದ್ದೇನಾಯ್ತು!

ಬಿಗ್ ಬಾಸ್ ಸೀಸನ್ 11 ಭಾರೀ ಕುತೂಹಲದಿಂದ ಮೂಡಿ ಬರುತ್ತಿದ್ದು, ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನೇನೋ  ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದ್ದು, ಸ್ಪರ್ಧಿಗಳು ಜಿದ್ದಾಜಿದ್ದಿನ ಪೈಪೋಟಿ ಕೊಡುತ್ತಿದ್ದಾರೆ. 

ಇನ್ನೂ ಈ ವಾರದ ಕಿಚ್ಚನ ಕಥೆಗೂ ಮುನ್ನ ಅಂದ್ರೆ ಶುಕ್ರವಾರ ರಾತ್ರಿ ಬಿಗ್ ಬಾಸ್ ಮನೆಯಲ್ಲಿ ಒಂದು ಅಚ್ಚರಿ ಘಟನೆ ನಡೆದಿದೆ. ಅಚ್ಚರಿ ನೋಡಿ ಬಿಗ್ ಬಾಸ್ ಸ್ಪರ್ಧಿಗಳು ಒಂದು ಕ್ಷಣ ಗಾಬರಿ ಆಗಿದ್ದಾರೆ. ಅದರಲ್ಲೂ ಚೈತ್ರಾ ಕುಂದಾಪುರ್ ಸ್ಥಿತಿ ದೇವರೇ ಬಲ್ಲ ಎಂಬಂತಾಗಿತ್ತು. 

ಹೌದು, ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಪ್ರಸಾರವಾಗಲಿರುವ ನೂರು ಜನ್ಮಕೂ ಸೀರಿಯಲ್ ತಂಡ ಬಿಗ್ ಮನೆಗೆ ಎಂಟ್ರಿ ಕೊಟ್ಟಿತ್ತು. horror ಕಾನ್ಸೆಪ್ಟ್ ಇರುವ ಈ ಸೀರಿಯಲ್ ಪ್ರಮೋಷನ್ ಗಾಗಿ ಬಿಗ್ ಮನೆಗೆ ನಿನ್ನೆ ಎಂಟ್ರಿ ಕೊಟ್ಟಿತ್ತು. 

ಈ ವೇಳೆ ದೆವ್ವದ ಝಲಕ್ ನೋಡಿ ಚೈತ್ರಾ ಕಿರುಚಿ ಚೀರಾಡಿದ್ದಾರೆ. ಅಯ್ಯೋ ದೆವ್ವ ಬಂತು ದೆವ್ವ, ಅಂತ ಮನೆ ಮಂದಿಯಲ್ಲಾ ಅಕ್ಷರಶಃ ಹೈರಾಣಾಗಿದ್ದರು. 

ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ ಪ್ರಸಾರ ಕಾಣುತ್ತಿದೆ ಎಂದರೆ ಅದನ್ನು ಬಿಗ್ ಬಾಸ್​ನಲ್ಲಿ ಪ್ರಚಾರ ಮಾಡಲಾಗುತ್ತದೆ. ಈಗಲೂ ಹಾಗೆಯೇ ಆಗಿದೆ. ‘ನೂರು ಜನ್ಮಕೂ’ ಹೆಸರಿನ ಹಾರರ್ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಡಿಸೆಂಬರ್ 23ರಿಂದ ಪ್ರಸಾರ ಕಾಣಲಿದೆ. ‘ಗೀತಾ’ ಧಾರಾವಾಹಿಯಿಂದ ಹೆಸರಾದ ಧನುಷ್ ಗೌಡ, ಹಿರಿಯ ನಟಿ ಗಿರಿಜಾ ಲೋಕೇಶ್, ಭಾಗ್ಯಶ್ರೀ, ಬಿ.ಎಂ. ವೆಂಕಟೇಶ್ ಹಾಗೂ ಗಾಯಕಿ ಅರ್ಚನಾ ಉಡುಪ ಮೊದಲಾದವರು ಪಾತ್ರವರ್ಗದಲ್ಲಿದ್ದಾರೆ. ಈ ಧಾರಾವಾಹಿಯ ಪ್ರಮೋಷನ್ ಬಿಗ್ ಬಾಸ್ ಮನೆಯಲ್ಲಿ ಮಾಡಲಾಗಿದೆ.

ಬಿಗ್ ಬಾಸ್ ಸ್ಪರ್ಧಿಗಳಿಗೆ ಕನ್ನಡಿಯಲ್ಲಿ ಲೈಟ್ ತೋರಿಸಿ, ಕನ್ನಡಿಯಲ್ಲಿ ಮುಖ ಬರುವಂತೆ ಮಾಡಿ ಭಯ ಬೀಳಿಸಲಾಯಿತು. ಇದನ್ನು ನೋಡಿ ಚೈತ್ರಾ ಅವರು ಬೆವತೇ ಹೋದರು. ಅವರು ಬಿದ್ದು ಒದ್ದಾಡೋಕೆ ಆರಂಭಿಸಿದರು. ಅವರ ಬಳಿ ಇದನ್ನು ಅರಗಿಸಿಕೊಳ್ಳೋಕೆ ಆಗಲೇ ಇಲ್ಲ. ಭಯದಲ್ಲೇ ಅವರು ಹೋಗಿ ದೇವರ ದೀಪ ಹಚ್ಚಿದರು. ಪ್ರಾರ್ಥನೆ ಮಾಡಿದರು. ಹಣೆಗೆ ಕುಂಕುಮ ಇಟ್ಟುಕೊಂಡರು.

ಜೈಲಿನಲ್ಲಿ ಇದ್ದಾಗ ಅವರಿಗೆ ಸ್ವಲ್ಪ ಜ್ವರ ಬಂದಿತ್ತು. ಈ ಘಟನೆ ಬಳಿಕ ಈ ಜ್ವರ ಮಿತಿ ಮೀರಿತು. ಅವರು ಎಲ್ಲರನ್ನು ಹಿಡಿದು ತಬ್ಬಿದರು. ಅವರ ಮುಖದಲ್ಲಿ ಭಯ ಎದ್ದು ಕಾಣುತ್ತಿತ್ತು. ಮೊದಲೇ ಕುಗ್ಗಿದ್ದ ಅವರು ಈ ಘಟನೆಯಿಂದ ಮತ್ತಷ್ಟು ಕುಗ್ಗುವಂತೆ ಆಯಿತು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow