ನಟ ದರ್ಶನ್ʼಗೆ ಬೇಲಾ..? ಮತ್ತೆ ಜೈಲಾ..? : ಕೋರ್ಟ್ ನಿಂದ ಇಂದು ಮಹತ್ವದ ತೀರ್ಪು ಪ್ರಕಟ..!

ಅಕ್ಟೋಬರ್ 9, 2024 - 10:27
 0  11
ನಟ ದರ್ಶನ್ʼಗೆ ಬೇಲಾ..? ಮತ್ತೆ ಜೈಲಾ..? : ಕೋರ್ಟ್ ನಿಂದ ಇಂದು ಮಹತ್ವದ ತೀರ್ಪು ಪ್ರಕಟ..!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಇಂದಿಗೆ ಮುಂದೂಡಿದೆ.  ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ವಾದ ಮಂಡಿಸಲು ಕಾಲಾವಕಾಶ ಪಡೆದಿದ್ದ ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ 57ನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಪ್ರಬಲ ವಾದ ಮಂಡಿಸಿದರು.

ಸರ್ಕಾರಿ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್ ರೇಣುಕಾಸ್ವಾಮಿ ಕೊಲೆ ಪ್ರಕರಣ ತನಿಖೆಯನ್ನು ಅತ್ಯುತ್ತಮ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ ನನ್ನ ಪ್ರಕಾರ ಕಳಪೆ ತನಿಖೆಯಾಗಿದೆ. ದರ್ಶನ್ ವಿರುದ್ಧ ಎಫ್ಐಆರ್ ದಾಖಲಾದಾಗಿನಿಂದಲೂ ಮಾಧ್ಯಮಗಳು ಟ್ರಯಲ್ ನಡೆಸಿ ದೋಷಿ ಎಂದು ತೀರ್ಪು ನೀಡಿವೆ.

ಮಾಧ್ಯಮಗಳ ಟ್ರಯಲ್​ನಿಂದ ಜಾಮೀನು ನಿರ್ಧಾರವಾಗಲ್ಲ ಎಂದು ನಂಬಿದ್ದೇನೆ. ದರ್ಶನ್ ವಿರುದ್ಧ ಸಾಂದರ್ಭಿಕ ಸಾಕ್ಷಿ ಸೃಷ್ಟಿಸಲಾಗಿದೆ. ಹತ್ಯೆ ಸ್ಥಳದಲ್ಲಿ ನೈಲಾನ್ ಹಗ್ಗ, ಮರದ ಕೊಂಬೆ, ಸ್ಟೋನಿ ಬ್ರೂಕ್ ಪಬ್ ಹೆಸರಿನ ನೀರಿನ ಬಾಟಲಿ ಮಹಜರು ಮಾಡಿರುವುದಾಗಿ ಪೊಲೀಸರು ಚಾರ್ಜ್‌ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಅವರು ವಾದಿಸಿದರು. ಈ ಬಾರಿಯಾದರೂ ದಾಸನಿಗೆ ಬೇಲ್ ಸಿಗುತ್ತಾ ಎಂದು ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದು, ದರ್ಶನ್‌ ಜಾಮೀನು ಭವಿಷ್ಯ ಏನಾಗಲಿದೆ ಎಂದು ಕಾದುನೋಡಬೇಕಿದೆ. 

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow