ನಟ ರಕ್ಷಿತ್ ಶೆಟ್ಟಿ ಮನೆ ಮುಂದೆ ದಿಢೀರ್ ಪ್ರತಿಭಟನೆ! ಗ್ರಾಮಸ್ಥರ ಈ ನಿರ್ಧಾರಕ್ಕೆ ಕಾರಣ ಏನು!?

ಕನ್ನಡ ಚಿತ್ರರಂಗದ ನಟ ರಕ್ಷಿತ್ ಶೆಟ್ಟಿ ಮನೆ ಮುಂದೆ ದಿಢೀರ್ ಪ್ರತಿಭಟನೆ ನಡೆದಿದ್ದು, ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಉಡುಪಿ ಅಲೆವೂರಿನ ಕುಕ್ಕಿಕಟ್ಟೆಯಲ್ಲಿನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಮನೆ ಮುಂದೆ ರಸ್ತೆ ದುರಸ್ಥಿಗೆ ಆಗ್ರಹಿಸಿ ವಿಚಿತ್ರ ಪ್ರತಿಭಟನೆ ನಡೆಸಲಾಗುತ್ತಿದೆ. ಹೊಂಡ-ಗುಂಡಿ ಮೇಲೆ ರಸ್ತೆ ದುರಸ್ಥಿ ಪಡಿಸಿ. ಈ ರಸ್ತೆಯ ಅವಸ್ಥೆಯನ್ನ ಕಾಣದಷ್ಟು ಕುರುಡರಾದರೆ ರಾಜಕಾರಣಿಗಳು ಅನ್ನೋ ಬರಹ ಬರೆಯಲಾಗಿದೆ.
ರಸ್ತೆ ದುರಸ್ಥಿಗಾಗಿ ಸಂಬಂಧಪಟ್ಟವರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯರು ರಸ್ತೆ ಮೇಲೆ ರಸ್ತೆ ದುರಸ್ಥಿ ಪಡಿಸಿ ಅನ್ನೋ ಬರಹ ಇದೀಗ ವೈರಲ್ ಆಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






