ನನಗೆ ಯಾವುದೇ ಸಂಬಂಧವಿಲ್ಲ: ಶಿವಪ್ರಕಾಶ್ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಸ್ಪಷ್ಟನೆ!

ಸ್ಪಷ್ಟನೆ ನೀಡಿದ ಅವರು, “ನಾನು ಕೊಲೆಯಾದ ವ್ಯಕ್ತಿಯನ್ನು ಗೊತ್ತಿಲ್ಲ. ಕೊಲೆ ಮಾಡಿದವರನ್ನೂ ನಾನು ಚಿಂತೆ ಮಾಡಿಲ್ಲ. ನನ್ನ ವಿರುದ್ಧ ಉದ್ದೇಶಪೂರ್ವಕವಾಗಿ ಎಫ್ಐಆರ್ ದಾಖಲಾಗಿದೆ. ಇದು ಮಾಧ್ಯಮಗಳ ಮೂಲಕ ನನಗೆ ತಿಳಿದುಬಂದಿದೆ,” ಎಂದು ಹೇಳಿದ್ದಾರೆ. ಅವರು ಕಾನೂನು ಹೋರಾಟ ನಡೆಸುವುದಾಗಿ ಹಾಗೂ ಗೃಹ ಸಚಿವ ಪರಮೇಶ್ವರ್ ಅವರಿಗೆ ಈ ಕುರಿತು ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ:
ಈ ಘಟನೆ ಮಂಗಳವಾರ ರಾತ್ರಿ, ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು ನಡೆದಿತ್ತು. ಶಿವಪ್ರಕಾಶ್, ಹಲವು ಬಾರಿ ಜೀವ ಬೆದರಿಕೆಗಳನ್ನನುಭವಿಸಿದ್ದ ಎಂದು ತಾಯಿ ವಿಜಯಲಕ್ಷ್ಮಿ ದೂರಿನಲ್ಲಿ ತಿಳಿಸಿದ್ದಾರೆ.ಬೈರತಿ ಬಸವರಾಜ್ ಸೇರಿದಂತೆ ಇತರ ಐವರು ಆರೋಪಿಗಳ ವಿರುದ್ಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರಕರಣಕ್ಕೆ ಕಾರಣವಾಗಿ ಕಿತ್ತಕನೂರು ಪ್ರದೇಶದಲ್ಲಿನ ಜಾಗದ ವಿವಾದ ಮತ್ತು ರಿಯಲ್ ಎಸ್ಟೇಟ್ ಸಂಬಂಧಿತ ವ್ಯವಹಾರಗಳೆಂದು ಹೇಳಲಾಗುತ್ತಿದೆ. ಬಿಳಿ ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದ 8–9 ಮಂದಿ ಮಚ್ಚುಗಳಿಂದ ಶಿವಪ್ರಕಾಶ್ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.
ಯಾರಾದರೂ ಸುಮ್ಮನೆ ಹೆಸರು ಹೇಳಿದರೆ ಏಕೆ ಎಫ್ಐಆರ್ ದಾಖಲಿಸಬೇಕು? ನಿಜ ಹೇಳಬೇಕಾದರೆ, ನನಗೆ ಈ ಪ್ರಕರಣದ ಬಗ್ಗೆ ಯಾವುದೇ ನೈಜ ಮಾಹಿತಿ ಇಲ್ಲ ಎಂದು ಬಸವರಾಜ್ ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






