ನಮ್ಮದು ಸಮರ್ಥ ಸರ್ಕಾರ, ಸಿದ್ದರಾಮಯ್ಯ ಸಮರ್ಥ ಮುಖ್ಯಮಂತ್ರಿ: ಜಿ.ಪರಮೇಶ್ವರ್

ಬೆಂಗಳೂರು: ನಮ್ಮದು ಸಮರ್ಥ ಸರ್ಕಾರ, ಸಮರ್ಥ ಮುಖ್ಯಮಂತ್ರಿ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು. ಅಸಮರ್ಥ ಸರ್ಕಾರ ಎಂಬ ವಿಜಯೇಂದ್ರ ಹೇಳಿಕೆಗೆ ನಗರದಲ್ಲಿ ಮಾತನಾಡಿದ ಅವರು, ಅದು ಅವರ ಅಭಿಪ್ರಾಯ ಅಷ್ಟೇ. ನಮ್ಮ ಅಭಿಪ್ರಾಯ ಬೇರೆಯೇ ಇದೆ. ನಮ್ಮದು ಸಮರ್ಥ ಸರ್ಕಾರ, ಸಮರ್ಥ ಮುಖ್ಯಮಂತ್ರಿ ಎಂದು ತಿರುಗೇಟು ನೀಡಿದರು.
ಮೂರು ಕ್ಷೇತ್ರಗಳ ಉಪಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ವರದಿ ಪ್ರಕಾರ ಮೂರು ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕೆಕೆಆರ್ಡಿಬಿಯಲ್ಲಿ ಅಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿ, ಮೇಲ್ನೋಟಕ್ಕೆ ದುರ್ಬಳಕೆ ಆಗಿರೋದು ಬಂದಿದೆ. ಹಣ ದರ್ಬಳಕೆ ಆಗಿದೆ. ವರ್ಷಕ್ಕೆ ನೂರು ಕೋಟಿಯಂತೆ ದುರ್ಬಳಕೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಮೂರು ವರ್ಷಕ್ಕೆ 300 ಕೋಟಿ ಆಗಲಿದೆ. ತನಿಖೆಯ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?






