ನಿತ್ಯ ಪೂಜೆ ಮಾಡೋ ಅಭ್ಯಾಸ ಇದ್ರೆ, ದೇವರ ಇಷ್ಟ ಮೊದಲು ತಿಳಿಯಿರಿ; ಈ ಹೂಗಳಿಂದ ಪೂಜೆ ಮಾಡಿದ್ರೆ ಮಾತ್ರ ಫಲ!

ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ದೇವರ ಪೂಜೆಯಲ್ಲಿ ಹೂವುಗಳಿಗೆ ವಿಶೇಷ ಮಹತ್ವವಿದೆ. ಪುಷ್ಪಾರ್ಚನೆ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳು ಯಾವುವು..? ಶಾಸ್ತ್ರಗಳ ಪ್ರಕಾರ, ಪುಷ್ಪವನ್ನು ಭಗವಂತನ ಪಾದದಲ್ಲಿ ಅರ್ಪಿಸಿದಾಗ ಪುಣ್ಯವನ್ನು ಹೆಚ್ಚಿಸಲು, ಪಾಪಗಳ ನಾಶಕ್ಕೆ ಮತ್ತು ಹೇರಳವಾದ ಶುಭ ಫಲಗಳನ್ನು ಪಡೆಯಲು ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.
ದೇವರಿಗೆ ಅಲಂಕಾರ ಮಾಡುವಾಗ ಯಾವಾಗಲೂ ತಲೆಯ ಮೇಲೆ ಹೂವುಗಳನ್ನು ಅಲಂಕರಿಸಬೇಕು ಮತ್ತು ಪೂಜೆ ಮಾಡುವಾಗ ದೇವರ ಪಾದಗಳಿಗೆ ಹೂವನ್ನು ಅರ್ಪಿಸಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹೂವುಗಳನ್ನು ಅರ್ಪಿಸುವುದರಿಂದ ಯಾವ ಶುಭ ಫಲಗಳು ಸಿಗುತ್ತವೆ..? ಮತ್ತು ದೇವರಿಗೆ ಪುಷ್ಪವನ್ನು ಅರ್ಪಿಸುವಾಗ ಯಾವ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು..? ಇದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ!
ಶಿವನಿಗೆ ಎಲ್ಲಾ ಹೂವುಗಳು ಇಷ್ಟವಾಗುವುದಿಲ್ಲ.ದತುರಾ, ಒಣ ಕಮಲ ಬಿಲ್ವಪತ್ರೆ, ತುಂಬೆ ಹೂವು, ಕಣಗಿಲೆ ಹೂವು, ಲಿಂಗದ ಹೂವು ಎಂದರೆ ಬಹಳ ಇಷ್ಟ. ಚಂಪ ಹಾಗೂ ಕೇತಕಿಯ ಹೂವನ್ನ ಯಾವುದೇ ಕಾರಣಕ್ಕೂ ಶಿವನಿಗೆ ಅರ್ಪಣೆ ಮಾಡಬಾರದು.
ಆದಿಶಕ್ತಿಯ ಸಾರಕಾಳಿ ದೇವಿಯನ್ನುಕೆಂಪು ದಾಸವಾಳದ ಹೂವುಗಳಿಂದ ಮಾತ್ರ ಪೂಜಿಸಲಾಗುತ್ತದೆ. ಅಲ್ಲದೇ, ನೀವು ಚೆಂಡು ಹೂವುಗಳನ್ನ ಸಹ ಪೂಜೆಗೆ ಬಳಕೆ ಮಾಡಬಹುದು. ಕೆಂಪು ಬಣ್ನದ ಹೂವು ಕಾಳಿಯ ಆರಾಧನೆ ಮಾಡಲು ಶ್ರೇಷ್ಠ ಎನ್ನಲಾಗುತ್ತದೆ.
ಲಕ್ಷ್ಮಿ ದೇವಿಯನ್ನ ಸಂಪತ್ತಿನ ದೇವತೆ ಎನ್ನಲಾಗುತ್ತದೆ. ದೇವಿಗೆ ಕಮಲದ ಹೂವನ್ನ ದೇವಿಗೆ ಅರ್ಪಣೆ ಮಾಡಿದರೆ ಬಹಳ ಒಳ್ಳೆಯದು. ಇನ್ನು ದೇವಿಗೆ ನೀವು ಬಿಳಿ ಬಣ್ಣದ ಹೂವುಗಳನ್ನ ಅರ್ಪಿಸಬಹುದು. ಬಿಳಿ ಸೇವಂತಿಗೆಯಂತಹ ಪರಿಮಳವಿಲ್ಲದ ಹೂವುಗಳನ್ನು ಲಕ್ಷ್ಮಿ ಮಾತೆಗೆ ಅರ್ಪಿಸಲಾಗುತ್ತದೆ.
ಗಣೇಶನಿಗೆ ಹೂವುಗಳಿಗಿಂತ ಮುಖ್ಯವಾಗಿ ಗರಿಕೆಯನ್ನ ಅರ್ಪಣೆ ಮಾಡಲಾಗುತ್ತದೆ. ನಿವು ಗಣೇಶನಿಗೆ ಗೌರಿ ಹೂವು, ತುಂಬೆಯನ್ನ ಅರ್ಪಣೆ ಮಾಡಬಹುದು. ಅಲ್ಲದೇ, ನೀವು ದಾಸವಾಳ ಹೂವನ್ನ ಸಹ ಗಣೇಶನಿಗೆ ಅರ್ಪಣೆ ಮಾಡಬಹುದು.
ವಿಷ್ಣುವಿಗೆ ನೀವು ತಾವರೆ ಹಾಗೂ ತುಳಸಿ ಎಂದರೆ ಬಹಳ ಇಷ್ಟ ಎನ್ನುವುದು ಎಲ್ಲರಿಗೂ ಗೊತ್ತು. ಮುಖ್ಯವಾಗಿ ವಿಷ್ಣು ಅಲಂಕಾರ ಪ್ರಿಯ. ಹಾಗಾಗಿ ಬಹುತೇಕ ಎಲ್ಲಾ ಹೂವುಗಳನ್ನ ಹಾಕಿ ಅಲಂಕಾರ ಮಾಡಬಹುದು. ಆದರೆ ಅರಳಿ ಹೂವನ್ನ ಹಾಕಬಾರದು.
ಹನುಮಂತನಿಗೆ ವೀಳ್ಯದೆಲೆ ಎಂದರೆ ಬಹಳ ಇಷ್ಟ. ಹಾಗಾಗಿ ಶನಿವಾರ ಯಾರು ವೀಳ್ಯದೆಲೆಯನ್ನ ಅರ್ಪಣೆ ಮಾಡುತ್ತಾರೋ ಅವರ ಇಷ್ಟಾರ್ಥಗಳು ಈಡೇರುತ್ತದೆ. ಇನ್ನು ಹನುಮಂತನಿಗೆ ತುಳಸಿ ಹಾಗೂ ಕೆಂಪು ಬಣ್ಣದ ಹೂವನ್ನ ಅರ್ಪಣೆ ಮಾಡಬಹುದು.
ಪಾರ್ವತಿ ದೇವಿಗೆ ಅನೇಕ ಹೂವುಗಳು ಎಂದರೆ ಬಹಳ ಇಷ್ಟ. ಮುಖ್ಯವಾಗಿ ದಾಸವಾಳ, ಮಲ್ಲಿಗೆ, ಬಿಳಿ ತಾವರೆ ಹಾಗೂ ಚಂಪಕ ಪುಷ್ಪ ಎಂದರೆ ಅಚ್ಚುಮೆಚ್ಚು. ಹಾಗಾಗಿ ಇದನ್ನ ನೀವು ಅರ್ಪಣೆ ಮಾಡಿದರೆ ನಿಮ್ಮ ಕನಸುಗಳು ನನಸಾಗುತ್ತದೆ.
ವಿಷ್ಣು ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದು, ಸಕಲ ಲೋಕಗಳ ಪಾಲಕ ಎಂದು ಹಿಂದೂ ಧರ್ಮ ನಂಬುತ್ತದೆ. ವಿಷ್ಣುವನ್ನು ಲಕ್ಮಿನಾರಾಯಣ, ಹರಿ, ಜನಾರ್ದನ, ಮಾಧವ, ಕೇಶವ, ಅಚ್ಯುತ, ಶ್ರೀನಿವಾಸ ಎಂದೂ ಕರೆಯುತ್ತಾರೆ. ಕಮಲ, ಮೌಲ್ಸಿರಿ, ಜೂಹಿ, ಕದಂಬ, ಕೇದಿಗೆ,ಮಲ್ಲಿಗೆ, ಅಶೋಕ, ಮಾಲ್ತಿ, ವಸಂತಿ, ಚಂಪಾ (ಸಂಪಿಗೆ) , ವೈಜಯಂತಿ ಹೂವುಗಳು ವಿಷ್ಣುವಿಗೆ ಬಹಳ ಪ್ರಿಯವಾದವು. ಹೂವುಗಳನ್ನು ಹೊರತುಪಡಿಸಿ, ತುಳಸಿ ದಳವನ್ನು ಮುಖ್ಯವಾಗಿ ಅವರಿಗೆ ಅರ್ಪಿಸಲಾಗುತ್ತದೆ
ಲಕ್ಷ್ಮಿ ದೇವತೆ: ವೈಕುಂಠದ ಅಧಿಪತಿ ಶ್ರೀವಿಷ್ಣುವಿನ ಪತ್ನಿ. ಲಕ್ಷ್ಮಿ. ಹಣ, ಐಶ್ವರ್ಯ, ಸಿರಿ, ಸಂಪತ್ತುಗಳ ಅಧಿದೇವತೆಯೆಂದು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿಯನ್ನು ಮಹಾಲಕ್ಷ್ಮಿ ಎಂದೂ ಕರೆಯಲಾಗುತ್ತದೆ. ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವ ಮೂಲಕ ಲಕ್ಷ್ಮಿಗೆ ಪೂಜೆ ಸಲ್ಲಿಸಲಾಗುತ್ತದೆ.ಕಮಲವು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಅತ್ಯಂತ ಪ್ರೀತಿಯ ಹೂವಾಗಿದೆ. ಇದಲ್ಲದೇ, ಅವರಿಗೆ ಕೆಂಪು ಹೂವುಗಳು, ಕೆಂಪು ಗುಲಾಬಿಗಳು ಕೂಡ ಇಷ್ಟ.
ನಿಮ್ಮ ಪ್ರತಿಕ್ರಿಯೆ ಏನು?






