ನಿರ್ದೇಶಕನಿಗೆ ಗುಂಡು ಹಾರಿಸಿ ಕೊಲೆಗೆ ಯತ್ನ: ನಟ ತಾಂಡವ ರಾಮ್ ಅರೆಸ್ಟ್!

ನವೆಂಬರ್ 19, 2024 - 14:16
 0  12
ನಿರ್ದೇಶಕನಿಗೆ ಗುಂಡು ಹಾರಿಸಿ ಕೊಲೆಗೆ ಯತ್ನ: ನಟ ತಾಂಡವ ರಾಮ್ ಅರೆಸ್ಟ್!

ಸಿನಿಮಾ ಅರ್ಧಕ್ಕೆ ನಿಂತ ಹಿನ್ನೆಲೆ ಕೋಪಗೊಂಡು ನಿರ್ದೇಶಕನಿಗೆ ನಟನೋರ್ವ ಕೊಲೆ ಬೆದರಿಕೆ ಹಾಕಿರುವ ಘಟನೆ ಜರುಗಿದೆ. 

ನಟ ತಾಂಡವ ರಾಮ್ ನಿಂದ ಕೃತ್ಯ ನಡೆದಿದ್ದು, ಮುಗಿಲ್ ಪೇಟೆ ಸಿನಿಮಾ ನಿರ್ದೇಶಕ ಭರತ್ ಮೇಲೆ ಆರೋಪಿ ಗುಂಡು ಹಾರಿಸಿದ್ದಾನೆ. ಈ ಘಟನೆ ನಗರದ ಚಂದ್ರಾ ಲೇಔಟನ್ ನಲ್ಲಿ ನಡೆದಿದೆ. ಲೈಲೆನ್ಸ್ ಗನ್ ತೋರಿಸಿ ಬೆದರಿಕೆ ಹಾಕಿದ್ದು, ಬಳಿಕ ಒಂದು ಸುತ್ತು ಗುಂಡಿ  ಹಾರಿಸಿದ್ದಾನೆ. 

ಸಿನಿಮಾ ಅರ್ಧಕ್ಕೆ ನಿಲ್ಲಿದ ಕಾರಣಕ್ಕೆ ಗಲಾಟೆ ಮಾಡಿಕೊಂಡು ಕೊಲೆ ಯತ್ನ ಮಾಡಲಾಗಿದೆ. 
 
ಚಂದ್ರ ಲೇಔಟ್ ಪೊಲೀಸರಿಂದ  ಆರೋಪಿ ತಾಂಡವ ರಾಮ್ ಅರೆಸ್ಟ್ ಮಾಡಲಾಗಿದೆ. ತಾಂಡವ ರಾಮ್ ಜೋಡಿಹಕ್ಕಿ , ಭೂಮಿಗೆ ಬಂದ ಭಗವಂತ. ಧಾರವಾಹಿಯಲ್ಲಿ ನಟನೆ ಮಾಡಿದ್ದ ಎನ್ನಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow