ನೀವು ಮಂಗಳವಾರ ಮಾಡುವ ಈ ಕೆಲಸಗಳು ಸಮಸ್ಯೆಗಳಿಗೆ ಕಾರಣವಂತೆ!

ಹಿಂದೂ ಧರ್ಮದಲ್ಲಿ, ವಾರದ ಪ್ರತಿ ದಿನವೂ ಒಂದು ನಿರ್ದಿಷ್ಟ ದೇವರು ಮತ್ತು ಗ್ರಹದೊಂದಿಗೆ ಸಂಬಂಧ ಹೊಂದಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಂಗಳವಾರವನ್ನ ಹನುಮಂತನಿಗೆ ಅರ್ಪಿಸಲಾಗಿದೆ. ಕಲಿಯುಗದಲ್ಲಿಯೂ ಭೂಮಿಯಲ್ಲಿ ಇರುವಂತಹ ದೇವರು ಹನುಮಾನ್ ಎನ್ನಲಾಗುತ್ತದೆ. ಇದರ ಜೊತೆಗೆ ಇದು ಮಂಗಳ ಗ್ರಹದ ದಿನವಾಗಿದೆ, ಮಂಗಳವಾರ ಜ್ಯೋತಿಷ್ಯದಲ್ಲಿ ಹೆಚ್ಚಿನ ಮಹತ್ವವನ್ನ ಹೊಂದಿದೆ. ಈ ದಿನ ಹನುಮಂತನಿಗೆ ಪೂಜೆ ಸಲ್ಲಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹಾಗೆಯೇ, ಈ ದಿನ ಮಾಡುವ ಎಲ್ಲಾ ಕೆಲಸಗಳು ಬಹಳ ಮುಖ್ಯವಾಗುತ್ತದೆ.
ಮಂಗಳವಾರವನ್ನ ಹನುಮಂತನಿಗೆ ಅರ್ಪಿಸಲಾಗಿದೆ. ಕಲಿಯುಗದಲ್ಲಿಯೂ ಭೂಮಿಯಲ್ಲಿ ಇರುವಂತಹ ದೇವರು ಹನುಮಾನ್ ಎನ್ನಲಾಗುತ್ತದೆ. ಇದರ ಜೊತೆಗೆ ಇದು ಮಂಗಳ ಗ್ರಹದ ದಿನವಾಗಿದೆ, ಮಂಗಳವಾರ ಜ್ಯೋತಿಷ್ಯದಲ್ಲಿ ಹೆಚ್ಚಿನ ಮಹತ್ವವನ್ನ ಹೊಂದಿದೆ. ಈ ದಿನ ಹನುಮಂತನಿಗೆ ಪೂಜೆ ಸಲ್ಲಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹಾಗೆಯೇ, ಈ ದಿನ ಮಾಡುವ ಎಲ್ಲಾ ಕೆಲಸಗಳು ಬಹಳ ಮುಖ್ಯವಾಗುತ್ತದೆ.
ಈ ದಿನ ಹನುಮಂತನ ಪೂಜೆ ಮಾಡುವುದರಿಂದ ಜೀವನದಲ್ಲಿನ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಆದರೆ ಮಂಗಳವಾರ ನಾವು ಅನೇಕ ವಿಚಾರಗಳ ಬಗ್ಗೆ ಗಮನ ನೀಡಬೇಕು. ನಾವು ಮಂಗಳವಾರ ಮಾಡುವ ಕೆಲ ಕೆಲಸಗಳಿಂದ ಸಮಸ್ಯೆಗಳನ್ನ ಆಹ್ವಾನಿಸಿದಂತೆ. ಮುಖ್ಯವಾಗಿ ಮಂಗಳವನ್ನು ಧೈರ್ಯ ಮತ್ತು ಶಕ್ತಿಯ ಗ್ರಹವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ದಿನ ಮಾಡುವ ತಪ್ಪುಗಳಿಂದ ಹನುಮಂತನ ಕೋಪಕ್ಕೆ ಗುರಿಯಾಗಬಹುದು ಹಾಗೂ ಮಂಗಳನಿಂದ ಸಹ ಸಮಸ್ಯೆಗಳನ್ನ ಅನುಭವಿಸಬೇಕಾಗುತ್ತದೆ. ಹಾಗಾದ್ರೆ ಮಂಗಳವಾರದಂದು ಯಾವ ಕೆಲಸಗಳನ್ನು ಮಾಡಿದರೆ ಅಶುಭ ಫಲಗಳು ಉಂಟಾಗಬಹುದು ಎಂಬುದು ಇಲ್ಲಿದೆ.
ಮಾಂಸಹಾರ ಹಾಗೂ ಮದ್ಯಪಾನ ಮಾಡಬಾರದು: ಮಂಗಳವಾರ ಯಾವುದೇ ಕಾರಣಕ್ಕೂ ಮದ್ಯಪಾನ ಹಾಗೂ ಮಾಂಸಹಾರ ಸೇವನೆ ಮಾಡಬಾರದು ಎನ್ನುವ ನಿಯಮವಿದೆ. ನೀವು ಮಾಂಸಾಹಾರಿಯಾಗಿದ್ದರೆ ಈ ದಿನ ಮಾತ್ರ ಮಾಂಸಾಹಾರಿ ಆಹಾರವನ್ನು ಸೇವಿಸಬೇಡಿ. ಅಪ್ಪಿ-ತಪ್ಪಿ ಮಂಗಳವಾರ ಮಾಂಸಹಾರ ಹಾಗೂ ಮದ್ಯಪಾನ ಮಾಡಿದರೆ ನಿಮಗೆ ಪೂಜೆಯ ಫಲ ಸಿಗುವುದಿಲ್ಲ ಹಾಗೂ ಮಂಗಳ ಮತ್ತು ಹನುಮಂತನ ಕೋಪಕ್ಕೆ ಗುರಿಯಾಗುತ್ತೀರಿ.
ಉದ್ದಿನ ಬೇಳೆ ಖರೀದಿ ಮಾಡಬೇಡಿ: ಈ ಉದ್ದಿನ ಬೇಳೆಯು ಶನಿ ಗ್ರಹದಿಂದ ಆಳಲ್ಪಡುತ್ತದೆ. ಮಂಗಳವಾರ ಇದನ್ನ ಖರೀದಿ ಮಾಡುವುದು ಮಂಗಳ ಮತ್ತು ಶನಿಯ ಸಂಯೋಗದಿಂದ ಕುಟುಂಬದಲ್ಲಿ ತೀವ್ರ ಪರಿಣಾಮಗಳನ್ನು ಅನುಭವಿಸಬಹುದು. ಜ್ಯೋತಿಷ್ಯದಲ್ಲಿ ಶನಿ ಮತ್ತು ಮಂಗಳವನ್ನು ವಿರೋಧಿ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಈ ದಿನ ಉದ್ದಿನ ಬೇಳೆ ಖರೀದಿ ಮಾಡಿದರೆ ಕಷ್ಟಗಳು ಬರುತ್ತದೆ. ಇಲ್ಲದಿದ್ದರೆ ನೀವು ಶನಿಯಿಂದ ಸಮಸ್ಯೆಗಳನ್ನ ಸಹ ಅನುಭವಿಸಬೇಕಾಗುತ್ತದೆ.
ಹೊಸ ಮನೆಗೆ ಗುದ್ದಲಿ ಪೂಜೆ ಮಾಡಬೇಡಿ: ಜ್ಯೋತಿಷ್ಯದಲ್ಲಿ ಹನುಮಂತನನ್ನು ಭೂಮಿಯ ಮಗ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮಂಗಳವಾರ ಹೊಸ ಮನೆಗೆ ಭೂಮಿಯನ್ನ ಖರೀದಿಸಬೇಡಿ ಅಥವಾ ಹೊಸ ಮನೆ ಕಟ್ಟಲು ಭೂಮಿಪೂಜೆಯನ್ನು ಮಾಡಬಾರದು ಎನ್ನಲಾಗುತ್ತದೆ. ಅಪ್ಪಿ-ತಪ್ಪಿ ಮಂಗಳವಾರ ಭೂಮಿ ಖರೀದಿ ಮಾಡಿದರೆ ಅಥವಾ ಗುದ್ದಲಿ ಪೂಜೆ ಮಾಡಿದರೆ ಮನೆಯಲ್ಲಿ ಅನೇಕ ರೋಗಗಳು ಬರಬಹುದು ಮತ್ತು ಕುಟುಂಬದಲ್ಲಿ ಆರ್ಥಿಕ ಮುಗ್ಗಟ್ಟು ಕೂಡ ಉಂಟಾಗುತ್ತದೆ.
ಕಪ್ಪು ಬಣ್ಣದ ಬಟ್ಟೆಗಳನ್ನು ಖರೀದಿಸಬಾರದು: ಮಂಗಳವಾರ ಮಂಗಳನ ದಿನವಾಗಿದೆ, ಹಾಗಾಗಿ ಕಪ್ಪು ಬಣ್ಣದ ವಸ್ತುಗಳನ್ನ ಖರೀದಿ ಮಾಡಬಾರದು ಹಾಗೂ ಕಪ್ಪು ಬಣ್ಣದ ಬಟ್ಟೆಯನ್ನ ಧರಿಸಬಾರದು. ಕಪ್ಪು ಶನಿಯ ಬಣ್ಣವಾಗಿದೆ. ಮಂಗಳ ಹಾಗೂ ಶನಿಯ ಸಂಬಂಧ ಸರಿಯಿಲ್ಲದ ಕಾರಣದಿಂದ ನೀವು ಕಪ್ಪು ವಸ್ತುಗಳನ್ನ ಮನೆಗೆ ಮಂಗಳವಾರ ತಂದರೆ ಸಾಲಾಗಿ ಸಮಸ್ಯೆಗಳನ್ನ ಅನುಭವಿಸಬೇಕಾಗುತ್ತದೆ. ಅದರಲ್ಲೂ ಮಂಗಳನ ಕಾರಣದಿಂದ ವೈವಾಹಿಕ ಜೀವನದಲ್ಲಿ ಕಷ್ಟಗಳು ಬರುತ್ತದೆ.
ಮಂಗಳವಾರದಂದು ಕಬ್ಬಿಣದ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಿ. ಬದಲಾಗಿ, ಮಂಗಳವಾರದಂದು ಕಿತ್ತಳೆ ಅಥವಾ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿ. ಹನುಮಂತನಿಗೆ ಕೆಂಪು ಬಣ್ಣವನ್ನು ತುಂಬಾ ಇಷ್ಟ, ಹಾಗಾಗಿ ಈ ದಿನ ಕೆಂಪು ಬಣ್ಣವನ್ನ ಧರಿಸಿದರೆ ಅದೃಷ್ಟ ಕೈ ಹಿಡಿಯುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯು ಕೂದಲು, ಉಗುರು ಹೀಗೆ ಅನೇಕ ವಸ್ತುಗಳನ್ನ ಆಳುತ್ತದೆ. ಮಂಗಳವು ಕತ್ತರಿ, ರೇಜರ್ಗಳು, ಉಗುರು ಕತ್ತರಿಗಳು ಮತ್ತು ಆಯುಧಗಳಂತಹ ವಸ್ತುಗಳ ಅಧಿಪತಿಯೂ ಹೌದು. ಹಾಗಾಗಿ ಮಂಗಳವಾರ ಕೂದಲು ಹಾಗೂ ಉಗುರು ಕಟ್ ಮಾಡಬಾರದು ಎನ್ನಲಾಗುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






