ನಾನು ಕರ್ನಾಟಕದವಳೇ: ವಿವಾದದ ಬೆನ್ನಲ್ಲೇ ರಶ್ಮಿಕಾ ಪ್ಯಾಚ್ ಅಪ್!

ಮಾರ್ಚ್ 31, 2025 - 20:05
 0  12
ನಾನು ಕರ್ನಾಟಕದವಳೇ: ವಿವಾದದ ಬೆನ್ನಲ್ಲೇ ರಶ್ಮಿಕಾ ಪ್ಯಾಚ್ ಅಪ್!

ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿರುವ ಸಿಕಂದರ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. 

ಸಿಕಂದರ್ ಸಿನಿಮಾದ ಸಂದರ್ಶನದ ವೇಳೆ ನಟಿ ರಶ್ಮಿಕಾ ಅವರು ಭಾಷೆಗಳನ್ನು ಕಲಿಯುವುದರ ಬಗ್ಗೆ ಮಾತನಾಡಿದ್ದಾರೆ. ನಾನು ಕರ್ನಾಟಕದವಳು. ನಾನು ಬೆಳೆದಿದ್ದು ಕರ್ನಾಟಕದಲ್ಲಿ. ಅಲ್ಲಿ ನಾನು ಮಾತನಾಡುತ್ತಿದ್ದಿದ್ದು ಕನ್ನಡ ಮತ್ತು ಇಂಗ್ಲೀಷ್ ಎಂದಿದ್ದಾರೆ.

ಹೈದರಾಬಾದ್​ಗೆ​ ಬಂದ ಬಳಿಕ ನಾನು ತೆಲುಗು ಕಲಿಯುವುದು ಅನಿವಾರ್ಯವಾಯಿತು. ನನ್ನ ಮನೆ, ಕಚೇರಿಯ ಸಿಬ್ಬಂದಿ, ಸೆಕ್ಯೂರಿಟಿಯವರು ತೆಲುಗು ಭಾಷೆಯವರೇ ಇದ್ದಾರೆ. ನನ್ನ ಸಿಬ್ಬಂದಿ ಜೊತೆ ನಾನು ತೆಲುಗು ಭಾಷೆಯಲ್ಲೇ ಮಾತನಾಡಬೇಕು. ಹೀಗಾಗಿ ನಾನು ತೆಲುಗು ಭಾಷೆ ಕಲಿತಿದ್ದೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರು ನಾನು ಹೈದರಾಬಾದ್​ನಿಂದ ಬಂದವಳು ಎಂದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಕನ್ನಡಿಗರು ರಶ್ಮಿಕಾ ಮಂದಣ್ಣ ಅವರ ಮಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಿಮಗೆ ಹುಟ್ಟಿದ ಊರೇ ಮರೆತು ಹೋಯ್ತಾ ಅಂತೆಲ್ಲಾ ಆಕ್ರೋಶದ ಮಾತನಾಡಿದ್ದರು. ಇದೀಗ ನಾನು ಕರ್ನಾಟಕದವಳು ಅನ್ನೋ ಮೂಲಕ ರಶ್ಮಿಕಾ ಮಂದಣ್ಣ ತನ್ನ ಹಳೆಯ ವಿವಾದಕ್ಕೆ ತೆರೆ ಎಳೆಯೋ ಪ್ರಯತ್ನ ಮಾಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow