ಪ್ರಾಸಿಕ್ಯೂಷನ್ ಸಮರದಲ್ಲಿ ಕಾಂಗ್ರೆಸ್ ದಿಟ್ಟ ಹೆಜ್ಜೆ: ಕೇಂದ್ರ ಸಚಿವರಾಗಿ ತಣ್ಣಗೆ ಕೂತಿದ್ದ ಎಚ್ಡಿಕೆ ಬುಡಕ್ಕೆ ಬಾಂಬ್?

ಪ್ರಾಸಿಕ್ಯೂಷನ್ ಸಮರದಲ್ಲಿ ಕಾಂಗ್ರೆಸ್ ದಿಟ್ಟ ಹೆಜ್ಜೆ: ಕೇಂದ್ರ ಸಚಿವರಾಗಿ ತಣ್ಣಗೆ ಕೂತಿದ್ದ ಎಚ್ಡಿಕೆ ಬುಡಕ್ಕೆ ಬಾಂಬ್?
ಹೋರಾಟ ಆರಂಭದ ಉದ್ದೇಶ ಒಂದು, ಗುರಿ ಇನ್ನೊಂದು, ಇದು ರಾಜಕೀಯ. ಸದ್ಯ, ಕರ್ನಾಟಕ ರಾಜಕೀಯದಲ್ಲಿ ಮುಗಿಲು ಮುಟ್ಟಿರುವ ಪ್ರಾಸಿಕ್ಯೂಷನ್ ಸಮರದಲ್ಲಿ, ಕಾಂಗ್ರೆಸ್ ತಾನು ಇಟ್ಟಿರುವ ಗುರಿಯತ್ತ ಸಾಗುತ್ತಿದೆಯೇ? ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಪೈಪೋಟಿಯಲ್ಲಿ ಟಾರ್ಗೆಟ್ ಆಗಿದ್ದು ಜೆಡಿಎಸ್ ಪಕ್ಷ ಎನ್ನುವಂತಾಗಿದೆ.
ಈ ರೀತಿಯ ಚರ್ಚೆಗಳು ಆರಂಭವಾಗಿದ್ದಕ್ಕೆ ಕಾರಣ ಇಲ್ಲದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುತ್ತಿದ್ದಂತೆಯೇ ರಾಜ್ಯ ರಾಜಕೀಯ ಗರಿಗೆದರಿದೆ. ಯಾವಾಗ ರಾಜಭವನಕ್ಕೆ ಖಾಸಗಿ ದೂರು ತನ್ನ ವಿರುದ್ದ ಹೋಯಿತೋ, ಆಗಲೇ ಈ ರೀತಿಯ ಬೆಳವಣಿಗೆಯನ್ನು ಸಿದ್ದರಾಮಯ್ಯ ನಿರೀಕ್ಷಿಸಿದ್ದರು.
ಹಾಗಾಗಿಯೇ, ಇದಕ್ಕೆ ಕಾನೂನು ಹೋರಾಟಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಕಲ ಪೂರ್ವ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ವಿಶೇಷ ಕ್ಯಾಬಿನೆಟ್ ಮೀಟಿಂಗ್, ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಯಿತು. ಅಲ್ಲೂ, ಅವರಿಗೆ ಪೂರ್ಣ ಬೆಂಬಲ ಸಿಗುವ ಮೂಲಕ, ಸಿಎಂ ಇನ್ನಷ್ಟು ಗಟ್ಟಿಯಾದರು.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ.
ನಿಮ್ಮ ಪ್ರತಿಕ್ರಿಯೆ ಏನು?






