ಬಳ್ಳಾರಿ ಜೈಲಿಗೆ ಕರೆತಂದರೆ ದರ್ಶನ್ ಮತ್ತೆ ಕೆಟ್ಟುಹೋಗ್ತಾರೆ: ಕಾರಾಗೃಹದ ಕರ್ಮಕಾಂಡ ಬಿಚ್ಚಿಟ್ಟ ಮಾಜಿ ಕೈದಿ

ಆಗಸ್ಟ್ 28, 2024 - 16:13
 0  28
ಬಳ್ಳಾರಿ ಜೈಲಿಗೆ ಕರೆತಂದರೆ ದರ್ಶನ್ ಮತ್ತೆ ಕೆಟ್ಟುಹೋಗ್ತಾರೆ: ಕಾರಾಗೃಹದ ಕರ್ಮಕಾಂಡ ಬಿಚ್ಚಿಟ್ಟ ಮಾಜಿ ಕೈದಿ
FOCUS KARNATAKA Darshan Thugodeepa

ಬಳ್ಳಾರಿ ಜೈಲಿಗೆ ಕರೆತಂದರೆ ದರ್ಶನ್ ಮತ್ತೆ ಕೆಟ್ಟುಹೋಗ್ತಾರೆ: ಕಾರಾಗೃಹದ ಕರ್ಮಕಾಂಡ ಬಿಚ್ಚಿಟ್ಟ ಮಾಜಿ ಕೈದಿ


 ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್​ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿರುವ ವಿಚಾರ ಸದ್ಯ ಚರ್ಚೆಯಲ್ಲಿದೆ. ಇದೇ ಕಾರಣಕ್ಕೆ ದರ್ಶನ್​ರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಆದರೆ, ಬಳ್ಳಾರಿ ಜೈಲಿನ ಬಗ್ಗೆ ಅದೇ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ್ದ ವ್ಯಕ್ತಿಯೊಬ್ಬರು ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ.

ಹಣ ನೀಡಿದ್ರೆ ಬಳ್ಳಾರಿ ಜೈಲಿನಲ್ಲಿ ಏನು ಬೇಕಾದರೂ ಸಿಗುತ್ತದೆ ಎಂದು ಬಳ್ಳಾರಿ ಜೈಲಿನಲ್ಲಿದ್ದ ಆನಂದಿ ಕೊಟ್ಟಂ ಜಯಸಿಂಹ ಹೇಳಿದ್ದಾರೆ. ‘ಟಿವಿ9’ ಜತೆ ಮಾತನಾಡಿರುವ ಅವರು, ಸಿಬ್ಬಂದಿಗೆ ದುಡ್ಡು ಕೊಟ್ಟರೆ ಬಳ್ಳಾರಿ ಜೈಲಿನಲ್ಲಿ ಎಲ್ಲವೂ ಸಿಗುತ್ತದೆ. ಮೊಬೈಲ್, ಗಾಂಜಾ, ಸಿಗರೇಟ್ ಎಲ್ಲವೂ ಜೈಲಿನಲ್ಲಿ ಸಿಗುತ್ತದೆ. ಜೈಲಿನಲ್ಲಿ ಕೈದಿಗಳನ್ನು ನೋಡಬೇಕಾದರೂ ಲಂಚ ಕೊಡಬೇಕು ಎಂದು ಹೇಳಿದ್ದಾರೆ.

ಬಳ್ಳಾರಿ ಜೈಲಿನ ವಿಐಪಿ ಸೆಲ್‌ನಲ್ಲಿ ಟಿವಿ ವ್ಯವಸ್ಥೆ, ಮಲಗಲು ಬೆಡ್ ವ್ಯವಸ್ಥೆ, ಫ್ಯಾನ್, ಮೊಬೈಲ್ ಎಲ್ಲವೂ ಇದೆ. ದರ್ಶನ್​​ರನ್ನು ಬಳ್ಳಾರಿಗೆ ಕರೆತಂದರೆ ಮತ್ತೆ ಕೆಟ್ಟು ಹೋಗುತ್ತಾರೆ. ಪರಪ್ಪನ ಅಗ್ರಹಾರ ಜೈಲಿಗಿಂತ ಬಳ್ಳಾರಿ ಜೈಲಲ್ಲಿ ಏನೂ ಕಡಿಮೆ ಇಲ್ಲ ಎಂದು ಕೊಟ್ಟಂ ಜಯಸಿಂಹ ಹೇಳಿದ್ದಾರೆ.ಕೊಲೆ ಆರೋಪದ ಕೇಸ್​ನಲ್ಲಿ ಜೈಲು ಸೇರಿದ್ದ ಜಯಸಿಂಹ ಆರು ವರ್ಷ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದರು. 2006 ರಿಂದ 2021 ರ ವರಗೆ ಜೈಲಿನಲ್ಲಿದ್ದರು.

ದರ್ಶನ್​ಗೆ ಹೆಚ್ಚು ಅನುಕೂಲ ಮಾಡಿಕೊಡುವುದಕ್ಕಾಗಿಯೇ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗುತ್ತದೆ ಎಂಬುದಾಗಿಯೂ ಕೆಲವು ಮೂಲಗಳು ಹೇಳಿದ್ದವು. ಇದೀಗ ಆನಂದಿ ಕೊಟ್ಟಂ ಜಯಸಿಂಹ ನೀಡಿರುವ ಮಾಹಿತಿ ಆ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow