ಬಾರ್ಡರ್ ಗವಾಸ್ಕರ್ ಟ್ರೋಫಿ ಮಿಸ್ ಆದ್ರೆ ಯಾರಿದೆಲ್ಲಾ ತಲೆದಂಡ?

ಡಿಸೆಂಬರ್ 19, 2024 - 09:12
 0  7
ಬಾರ್ಡರ್ ಗವಾಸ್ಕರ್ ಟ್ರೋಫಿ ಮಿಸ್ ಆದ್ರೆ ಯಾರಿದೆಲ್ಲಾ ತಲೆದಂಡ?

ಟೀಮ್ ಇಂಡಿಯಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋತಿದ್ದೇ ಆದಲ್ಲಿ, ಹಲವರ ತಲೆದಂಡ ಆಗೋದು ಬಹುತೇಕ ಖಚಿತ ಎನ್ನಲಾಗಿದೆ. 

ಬಿಗ್​ಬಾಸ್​​ಗಳ ಏಟಿಗೆ ಮೊದಲು ಬಲಿಯಾಗೋದೇ, ಕೋಚ್​ ಗೌತಮ್ ಗಂಭೀರ್​. ಟಿ-ಟ್ವೆಂಟಿ ಫಾರ್ಮೆಟ್ ಬಿಟ್ರೆ. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್​ನಲ್ಲಿ, ಕೋಚ್ ಗಂಭೀರ್ ರೆಕಾರ್ಡ್ಸ್​ ಅದ್ಭುತವಾಗಿ ಏನಿಲ್ಲ. ಗಂಭೀರ್ ಅಗ್ರೆಸಿವ್, ಅವರನ್ನ ಕೋಚ್ ಮಾಡಿದ್ರೆ ತಂಡಕ್ಕೆ ಅಗ್ರೆಸಿವ್​ನೆಸ್ ತರುತ್ತಾರೆ ಅಂತ ಬಿಗ್​ಬಾಸ್​​ಗಳ ಲೆಕ್ಕಾಚಾರವಾಗಿತ್ತು. ಆದ್ರೀಗ ಎಲ್ಲಾ ಉಲ್ಟಾ ಆಗಿದೆ. ಆಸಿಸ್ ಟೆಸ್ಟ್ ಸರಣಿಯ ನಂತರ ಗಂಭೀರ್, ವೈಟ್​ಬಾಲ್​​​​ ಕ್ರಿಕೆಟ್​​ಗೆ ಮಾತ್ರ ಕೋಚ್ ಆಗಿ ಉಳಿಯಲಿದ್ದಾರೆ. ಟೆಸ್ಟ್​ ಕ್ರಿಕೆಟ್​​ಗೆ ಬಿಗ್​ಬಾಸ್​ಗಳು, ಹೊಸ ಕೋಚ್ ನೇಮಿಸೋ ಸಾಧ್ಯತೆ ಇದೆ.

ಗಂಭೀರ್ ಕೋಚ್ ಆಗಿದ್ದೇ ತಡ. ನನಗೆ ಅವರು ಬೇಕು, ಇವರು ಬೇಕು ಅಂತ ಬಿಗ್​ಬಾಗ್​ಬಾಸ್​ಗಳ ಮುಂದೆ ದೊಡ್ಡ ಬೇಡಿಕೆಯ ಪಟ್ಟಿಯನ್ನೇ ಇಟ್ಟಿದ್ದರು. ಗಂಭೀರ್​​ ಹೇಳ್ತಿದ್ದಾರೆ, ಏನೋ ಸಾಧನೆ ಮಾಡಿಬಿಡ್ತಾರೆ ಅಂತ, ಬಿಗ್​ಬಾಸ್​​ಗಳು ಗಂಭೀರ್ ಹೇಳಿದಕ್ಕೆಲ್ಲಾ ತಲೆ ಅಲ್ಲಾಡಿಸಿದ್ರು. ಆದ್ರೀಗ ಗಂಭೀರ್ ಮಾತು ಕೇಳಿ ನಾವು ಕೆಟ್ಟೆವು ಅಂತ, ಬಿಗ್​ಬಾಸ್​ಗಳು ಬಿಸಿಸಿಐ ಆಫೀಸ್​ನಲ್ಲಿ ಗುಸುಗುಡುತ್ತಿದ್ದಾರಂತೆ. ಗೊತ್ತಿಲ್ಲ. ಮುಂದೆ ಬ್ಯಾಟಿಂಗ್ ಕೋಚ್​ ಅಭಿಷೇಕ್ ನಾಯರ್, ರಿಯಾನ್ ಟೆನ್​ಡೆಸ್ಕಾಟೆ ಮತ್ತು ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್, ಟೆಸ್ಟ್ ತಂಡದಲ್ಲಿ ಇರ್ತಾರೋ ಇಲ್ವೋ ಅಂತ.

2025 ಜೂನ್ ಬಳಿಕ ವರ್ಲ್ಡ್​ ಟೆಸ್ಟ್ ಚಾಂಪಿಯನ್​ಶಿಪ್ ಹೊಸ ಸೈಕಲ್ ಶುರುವಾಗುತ್ತದೆ. ಹೊಸ ವರ್ಷಕ್ಕೆ ಟೀಮ್ ಇಂಡಿಯಾದಲ್ಲಿ ಮೇಜರ್ ಸರ್ಜರಿ ಕೂಡ ಮಾಡಲಾಗುತ್ತದೆ. ಹಿರಿಯರಿಗೆ ಕೊಕ್ ಕೊಟ್ಟು, ಯುವ ತಂಡವನ್ನಕಟ್ಟಲು ಬಿಸಿಸಿಐ ಮುಂದಾಗಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow