ಬಾರ್ಡರ್ ಗವಾಸ್ಕರ್ ಟ್ರೋಫಿ ಮಿಸ್ ಆದ್ರೆ ಯಾರಿದೆಲ್ಲಾ ತಲೆದಂಡ?

ಟೀಮ್ ಇಂಡಿಯಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋತಿದ್ದೇ ಆದಲ್ಲಿ, ಹಲವರ ತಲೆದಂಡ ಆಗೋದು ಬಹುತೇಕ ಖಚಿತ ಎನ್ನಲಾಗಿದೆ.
ಬಿಗ್ಬಾಸ್ಗಳ ಏಟಿಗೆ ಮೊದಲು ಬಲಿಯಾಗೋದೇ, ಕೋಚ್ ಗೌತಮ್ ಗಂಭೀರ್. ಟಿ-ಟ್ವೆಂಟಿ ಫಾರ್ಮೆಟ್ ಬಿಟ್ರೆ. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ, ಕೋಚ್ ಗಂಭೀರ್ ರೆಕಾರ್ಡ್ಸ್ ಅದ್ಭುತವಾಗಿ ಏನಿಲ್ಲ. ಗಂಭೀರ್ ಅಗ್ರೆಸಿವ್, ಅವರನ್ನ ಕೋಚ್ ಮಾಡಿದ್ರೆ ತಂಡಕ್ಕೆ ಅಗ್ರೆಸಿವ್ನೆಸ್ ತರುತ್ತಾರೆ ಅಂತ ಬಿಗ್ಬಾಸ್ಗಳ ಲೆಕ್ಕಾಚಾರವಾಗಿತ್ತು. ಆದ್ರೀಗ ಎಲ್ಲಾ ಉಲ್ಟಾ ಆಗಿದೆ. ಆಸಿಸ್ ಟೆಸ್ಟ್ ಸರಣಿಯ ನಂತರ ಗಂಭೀರ್, ವೈಟ್ಬಾಲ್ ಕ್ರಿಕೆಟ್ಗೆ ಮಾತ್ರ ಕೋಚ್ ಆಗಿ ಉಳಿಯಲಿದ್ದಾರೆ. ಟೆಸ್ಟ್ ಕ್ರಿಕೆಟ್ಗೆ ಬಿಗ್ಬಾಸ್ಗಳು, ಹೊಸ ಕೋಚ್ ನೇಮಿಸೋ ಸಾಧ್ಯತೆ ಇದೆ.
ಗಂಭೀರ್ ಕೋಚ್ ಆಗಿದ್ದೇ ತಡ. ನನಗೆ ಅವರು ಬೇಕು, ಇವರು ಬೇಕು ಅಂತ ಬಿಗ್ಬಾಗ್ಬಾಸ್ಗಳ ಮುಂದೆ ದೊಡ್ಡ ಬೇಡಿಕೆಯ ಪಟ್ಟಿಯನ್ನೇ ಇಟ್ಟಿದ್ದರು. ಗಂಭೀರ್ ಹೇಳ್ತಿದ್ದಾರೆ, ಏನೋ ಸಾಧನೆ ಮಾಡಿಬಿಡ್ತಾರೆ ಅಂತ, ಬಿಗ್ಬಾಸ್ಗಳು ಗಂಭೀರ್ ಹೇಳಿದಕ್ಕೆಲ್ಲಾ ತಲೆ ಅಲ್ಲಾಡಿಸಿದ್ರು. ಆದ್ರೀಗ ಗಂಭೀರ್ ಮಾತು ಕೇಳಿ ನಾವು ಕೆಟ್ಟೆವು ಅಂತ, ಬಿಗ್ಬಾಸ್ಗಳು ಬಿಸಿಸಿಐ ಆಫೀಸ್ನಲ್ಲಿ ಗುಸುಗುಡುತ್ತಿದ್ದಾರಂತೆ. ಗೊತ್ತಿಲ್ಲ. ಮುಂದೆ ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್, ರಿಯಾನ್ ಟೆನ್ಡೆಸ್ಕಾಟೆ ಮತ್ತು ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್, ಟೆಸ್ಟ್ ತಂಡದಲ್ಲಿ ಇರ್ತಾರೋ ಇಲ್ವೋ ಅಂತ.
2025 ಜೂನ್ ಬಳಿಕ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಹೊಸ ಸೈಕಲ್ ಶುರುವಾಗುತ್ತದೆ. ಹೊಸ ವರ್ಷಕ್ಕೆ ಟೀಮ್ ಇಂಡಿಯಾದಲ್ಲಿ ಮೇಜರ್ ಸರ್ಜರಿ ಕೂಡ ಮಾಡಲಾಗುತ್ತದೆ. ಹಿರಿಯರಿಗೆ ಕೊಕ್ ಕೊಟ್ಟು, ಯುವ ತಂಡವನ್ನಕಟ್ಟಲು ಬಿಸಿಸಿಐ ಮುಂದಾಗಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






