ಬಿಗ್ ಬಾಸ್ ಮನೆಗೆ ಬಂದ ಸೃಜನ್: ಈ ವಾರ ಔಟ್ ಆಗೋದು ಇವರೇ ಅಂತಿದ್ದಾರೆ ವೀಕ್ಷಕರು!

ಕಿಚ್ಚ' ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರು ಕಳೆದ ವಾರ ನಿಧನರಾದರು. ಆ ಹಿನ್ನೆಲೆಯಲ್ಲಿ ನಟ ಸುದೀಪ್ ಅವರು ಈ ವಾರದ 'ಬಿಗ್ ಬಾಸ್' ವೀಕೆಂಡ್ ಸಂಚಿಕೆಗಳಿಗೆ ಗೈರಾಗಿದ್ದಾರೆ. ಹಾಗಾಗಿ, ಅತಿಥಿಯಾಗಿ ಶನಿವಾರದ ಸಂಚಿಕೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಕಾಣಿಸಿಕೊಂಡಿದ್ದರು. ಇದೀಗ ಭಾನುವಾರದ ಸಂಚಿಕೆಗೆ ನಟ ಸೃಜನ್ ಲೋಕೇಶ್ ಅವರು ಆಗಮಿಸಿದ್ದಾರೆ.
ಈ ವಾರಾಂತ್ಯದಲ್ಲಿ ಶನಿವಾರ ಹಾಗೂ ರವಿವಾರ ಬಿಗ್ ಬಾಸ್ ರಿಯಾಲಿಟಿ ಶೋ ನಿರೂಪಣೆಯನ್ನು ಯೋಗರಾಜ್ ಭಟ್ ಹಾಗೂ ಸೃಜನ್ ಲೋಕೇಶ್ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರು ಮಾತೃವಿಯೋಗದ ಕಾರಣ ಗೈರಾಗಿದ್ದಾರೆ. ಇಂದಿನ ಪಂಚಾಯ್ತಿ ಮಾಡಿದ ಸೃಜನ್ ಲೋಕೇಶ್ ಮನೆಯವರಿಗೆ ಲಡ್ಡು ತಿನ್ನುವ ಟಾಸ್ಕ್ ನೀಡಿದ್ದಾರೆ. ಯಾರೆಲ್ಲ ನಾಮಿನೇಟ್ ಆಗಿದ್ದಾರೋ ಅವರೆಲ್ಲರೂ ಈ ಲಡ್ಡು ತಿನ್ನುವ ಟಾಸ್ಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಯಾರ್ ಯಾರಿಗೆ ಸೇಫ್ ಆಗ್ತೀನಿ ಅನ್ನೋ ವಿಶ್ವಾಸ ಇದೆ ಎಂದು ಅವರು ಪ್ರಶ್ನೆ ಮಾಡುತ್ತಾರೆ. ಆಗ ಗೌತಮಿ ಅವರು ನೀಡಿದ ಉತ್ತರ ಏನಿದೆ ನೋಡಿ
ಯಾರ್ಯಾರು ಈ ಮನೆಯಲ್ಲಿ ಉಳಿದುಕೊಳ್ಳುತ್ತೀರಾ ಎಂದು ಕೇಳಿದಾಗ ಗೌತಮಿ ಹೇಳುತ್ತಾರೆ “ಸೇಪ್ ಆಗಬೇಕು ಎನ್ನುವ ಆಸೆ ಎಷ್ಟಿದೆಯೋ ಅಷ್ಟೇ ನಂಬಿಕೆನೂ ಇದೆ” ಎಂದಿದ್ದಾರೆ. ಮೊದಲ ಬಾರಿಗೆ ಮಾನಸಾ ಇಷ್ಟೊಂದು ಕಣ್ಣೀರು ಹಾಕಿರುವುದು ಬಿಗ್ ಬಾಸ್ ಮನೆಯೊಳಗಡೆ ಕಾಣಿಸುತ್ತಿದೆ. ಯಾವಾಗಲೂ ಬೈದುಕೊಂಡು ಓಡಾಡುತ್ತಿದ್ದ ಮಾನಸಾ ಈ ವಾರ ಕಣ್ಣೀರಿಟ್ಟಿದ್ದಾರೆ. ನೀವೆಲ್ಲ ಹೇಳೋದನ್ನು ಕೇಳಿದ್ರೆ ನಾನೇನು ಮಾಡೇ ಇಲ್ವೇನೋ ಅಂತ ಅನಿಸ್ತಿದೆ ಎಂದಿದ್ದಾರೆ.
ಇನ್ನು ಮೋಕ್ಷಿತಾ ಹಾಗೂ ತ್ರಿವಿಕ್ರಂ ನಡುವೆ ಇನ್ನು ಮುಂದಿನ ದಿನಗಳಲ್ಲಿ ಒಂದು ದೊಡ್ಡ ಜಗಳ ಆಗುವ ಎಲ್ಲಾ ಸಾಧ್ಯತೆಗಳು ಎದ್ದು ಕಾಣಿಸಿದೆ. ತ್ರಿವಿಕ್ರಂ ಅವರದು ಪ್ಲ್ಯಾನಿಂಗ್ ಇದೆ. ಇವರನ್ನೇ ನಾವು ನಾಮಿನೇಟ್ ಮಾಡಬೇಕು ಎಂದು ಅವರು ಮೊದಲೇ ನಿರ್ಧಾರ ಮಾಡಿಕೊಂಡಿರುತ್ತಾರೆ. ಅವರ ಜೊತೆ ಇನ್ನೂ ಹಲವರು ಕೈ ಜೋಡಿಸಿದ್ದಾರೆ ಎಂದು ಮೋಕ್ಷಿತಾ ಹೇಳಿದ್ದಾರೆ. ಆಗ ತ್ರಿವಿಕ್ರಂ ಅವರ ಮುಖಭಾವ ಬದಲಾಗುತ್ತದೆ. ಬಿಗ್ ಬಾಸ್ ಮನೆಯಲ್ಲಿ ಈ ರೀತಿಯ ನಿರ್ಧಾರಗಳಿಗೆ ಜಾಗ ಇರಕೂಡದು ಎಂದು ಮೋಕ್ಷಿತಾ ಹೇಳಿದ್ದಾರೆ.
ಇನ್ನು ಭವ್ಯ ಗೌಡ ಅವರು ನಗುತ್ತಿರುವುದು ಪ್ರೋಮೊದಲ್ಲಿ ಕಾಣಿಸುತ್ತದೆ. ನಂತರದಲ್ಲಿ ಮನೆಯ ಗಾರ್ಡನ್ ಏರಿಯಾಕ್ಕೆ ಎರಡು ಕಾರ್ಗಳು ಬರುತ್ತದೆ. ಅದರಲ್ಲಿ ಎಲಿಮಿನೇಟ್ ಆದವರನ್ನು ಕರೆದೊಯ್ಯಲಾಗಿದೆ. ಆದರೆ ಯಾರು ಎಲಿಮಿನೇಟ್ ಆಗಿದ್ದಾರೆ ಎಂದು ಇನ್ನು ಮುಂದೆ ತಿಳಿಯುತ್ತದೆ
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






