ಬಿಗ್ ಮನೆಯಿಂದ ಧನರಾಜ್ ಔಟ್: ಫಿನಾಲೆ ಕನಸು ಭಗ್ನ, ಎಡವಿದ್ದೆಲ್ಲಿ ಚಿರತೆ, ಗೆಳೆಯನ ಕೈಬಿಟ್ಟ ಹನುಮ!

ಕನ್ನಡ ಬಿಗ್ ಬಾಸ್ ಸೀಸನ್ 11 ರಿಂದ ಡಬಲ್ ಎಲಿಮಿನೇಷನ್ ಮೂಲಕ ಗೌತಮಿ ಜಾಧವ್ ಜೊತೆ ಮತ್ತೊಬ್ಬ ಸ್ಪರ್ಧಿ ಧನರಾಜ್ ಆಚಾರ್ ಹೊರ ಬಿದ್ದಿದ್ದಾರೆ.
ಫಿನಾಲೆಗೆ ಇನ್ನೊಂದು ವಾರ ಬಾಕಿ ಇದ್ದು, ಈ ವಾರ ಡಬಲ್ ಎಲಿಮಿನೇಷನ್ ನಡೆದಿದೆ. ಶನಿವಾರದ ಎಪಿಸೋಡ್ನಲ್ಲಿ ಗೌತಮಿ ಜಾದವ್ ಎಲಿಮಿನೇಟ್ ಆಗಿದ್ರು. ಭಾನುವಾರದ ಎಪಿಸೋಡ್ನಲ್ಲಿ ಧನರಾಜ್ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ.
ಸೋಶಿಯಲ್ ಮೀಡಿಯಾ ಮೂಲಕ ಜನಪ್ರಿಯತೆ ಪಡೆದಿದ್ದ ಧನರಾಜ್ಗೆ ಬಿಗ್ ಬಾಸ್ ಬಾಗಿಲು ತೆರೆದ ಬಳಿಕ ನೇಮು-ಫ್ರೇಮು ಕೂಡ ಹೆಚ್ಚಿದೆ. ಯೂಟ್ಯೂಬರ್ ಆಗಿದ್ದ ಧನರಾಜ್ಗೆ ಅಪಾರ ಫ್ಯಾನ್ ಫಾಲೋವರ್ಸ್ ಕೂಡ ಇದ್ದಾರೆ. ತನ್ನ ಕಾಮಿಡಿಯಿಂದಲೇ ಪ್ರೇಕ್ಷಕರನ್ನ ರಂಜಿಸಿದ್ದ ಧನರಾಜ್ ಬಿಗ್ ಬಾಸ್ ಜರ್ನಿ ಮುಗಿದಿದೆ.
ಫಿನಾಲೆ ವೀಕ್ ತಲುಪಿ ಫೈನಲಿಸ್ಟ್ ಆಗುವ ಧನರಾಜ್ ಕನಸು ನನಸಾಗಲಿಲ್ಲ. ಮಿಡ್ ಎಲಿಮಿನೇಷನ್ ವೀಕ್ ನಲ್ಲಿ ಸಖತ್ ಜೋಶ್ನಿಂದಲೇ ಧನರಾಜ್ ಆಟವಾಡಿದ್ರು. ಅತಿ ಹೆಚ್ಚು ಪಾಯಿಂಟ್ಸ್ ಪಡೆಯುವ ಮೂಲಕ ಟಾಪ್ನಲ್ಲಿದ್ರು. ಆದ್ರೆ ಮೋಸದಾಟ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಕಿಚ್ಚನ ಮುಂದೆ ಭಾವುಕರಾದ ಧನರಾಜ್ ಮಾಡಿದೆ ತಪ್ಪಿಗೆ ಕ್ಷಮೆ ಕೂಡ ಕೇಳಿದ್ರು. ತಮ್ಮ ತಮಾಷೆ ಮಾತುಗಳಿಂದ ಮನೆ ಮಂದಿಯ ಮನಗೆದ್ದಿದ್ದ ಧನರಾಜ್ ಆಟಕ್ಕೆ ಇದೀಗ ಬ್ರೇಕ್ ಬಿದ್ದಿದೆ. ಬಿಗ್ ಬಾಸ್ ಮನೆಯಿಂದ ಧನರಾಜ್ ಎಲಿಮಿನೇಟ್ ಆಗಿದ್ದಾರೆ.
ಒಬ್ಬ ಸಾಮಾನ್ಯ ಯೂಟ್ಯೂಬರ್ ಬಿಗ್ ಬಾಸ್ ಮನೆಯಲ್ಲಿ 100 ದಿನಗಳು ಕಳೆಯೋದು ಸಣ್ಣ ವಿಚಾರವಲ್ಲ. ಕಿಚ್ಚನಿಂದ ಬಿಗ್ ಬಾಸ್ ಜಿಂಕೆ ಎಂದು ಕರೆಸಿಕೊಂಡಿದ್ದ ಧನರಾಜ್, ತಮ್ಮ ಆಟವನ್ನು ಅಚ್ಚುಕಟ್ಟಾಗಿಯೇ ಆಡಿದ್ರು.
ಹನುಮಂತು ಜೊತೆ ದೋಸ್ತಿ ಮಾಡಿಕೊಂಡ ಧನರಾಜ್ ಪ್ರೇಕ್ಷಕರಿಗೆ ಒಳ್ಳೆಯ ಮನರಂಜನೆ ನೀಡಿದ್ರು. ಹನುಮಂತ-ಧನರಾಜ್ ದೋಸ್ತಿ ಅಭಿಮಾನಿಗಳಿಗೂ ಇಷ್ಟವಾಯ್ತು,. ಧನರಾಜ್ನನ್ನು ಸೇವ್ ಮಾಡುವ ಅವಕಾಶವಿದ್ರೂ ಹನುಮಂತು ಸೇವ್ ಮಾಡಲಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






