ಬಿಟ್ಟು ಬಿಡದೆ ಕಾಡಿದ ಅನಾರೋಗ್ಯ: ಜಿಗುಪ್ಸೆಗೊಂಡ ವ್ಯಕ್ತಿ ನೇಣಿಗೆ ಶರಣು!

ಎಪ್ರಿಲ್ 5, 2025 - 12:02
 0  22
ಬಿಟ್ಟು ಬಿಡದೆ ಕಾಡಿದ ಅನಾರೋಗ್ಯ:  ಜಿಗುಪ್ಸೆಗೊಂಡ ವ್ಯಕ್ತಿ ನೇಣಿಗೆ ಶರಣು!

ಬೆಂಗಳೂರು:- ಬೆಂಗಳೂರಿನ ಗೊಲ್ಲರಹಟ್ಟಿಯಲ್ಲಿ ವ್ಯಕ್ತಿಯೋರ್ವ ಅನಾರೋಗ್ಯಕ್ಕೆ ಬೇಸತ್ತು ನೇಣಿಗೆ ಶರಣಾಗಿರುವ ಘಟನೆ ಜರುಗಿದೆ. ಪುರುಷೋತ್ತಮ ಮೃತ ವ್ಯಕ್ತಿ. 

ಮೃತ ವ್ಯಕ್ತಿಯು, ಮಾಗಡಿ ತಾಲೂಕು ರಾಮನಗರ ಜಿಲ್ಲೆ ಬಾಳೆನಹಳ್ಳಿಯ ಪುರುಷೋತ್ತಮ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪುರುಷೋತ್ತಮ್ ಕಳೆದ 5 ವರ್ಷದಿಂದ ಹೆಂಡತಿ ಹಾಗೂ ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಅನಾರೋಗ್ಯದಿಂದ ಬೆಸತ್ತು ಗೊಲ್ಲರಹಟ್ಟಿಯಲ್ಲಿ ರೂಂ ಡೋರ್ ಲಾಕ್ ಮಾಡಿಕೊಂಡು ನೇಣಿಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow