ಬೆಳಗಾವಿ ತಹಶೀಲ್ದಾರ್ ಕಛೇರಿಯ ಎಸ್ಡಿಸಿ ಸಿಬ್ಬಂದಿ ಸೂಸೈಡ್: ಸಾವಿಗೆ ಕಾರಣ ಡೆತ್ ನೋಟ್ ನಲ್ಲಿ ಬಹಿರಂಗ!

ಬೆಳಗಾವಿ:- ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಕಛೇರಿಯ ದ್ವಿತೀಯ ದರ್ಜೆಯ ಸಹಾಯಕರಾದ ರುದ್ರನ್ನ ಯಡವನ್ನವರ ನೇಣಿಗೆ ಶರಣಾದ ಘಟನೆ ಕಂಡುಬಂದಿದೆ. ಇಂದು ಬೆಳಿಗ್ಗೆ ಘಟನೆ ಜರುಗಿದೆ.
ನಿನ್ನೆಯಷ್ಟೇ ಸವದತ್ತಿಗೆ ವರ್ಗಾವಣೆ ಆಗಿರುವ ಮಾಹಿತಿ ಇದ್ದು, ಅದರ ಕುರಿತಾದ ಅಸಮಾಧಾನವೂ ಸಾವಿಗೆ ಶರಣಾದ ವ್ಯಕ್ತಿಗೆ ಇದ್ದಿತು ಎಂಬ ಮಾಹಿತಿ ಲಭ್ಯವಾಗಿದ್ದು, ನೇಣಿಗೆ ಶರಣಾದ ವ್ಯಕ್ತಿಯ ಪತ್ನಿ ಗಿರಿಜಾ ಕೂಡಾ ತಹಶೀಲ್ದಾರ ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.
ಬೆಳ್ಳಂಬೆಳಿಗ್ಗೆ ನಡೆದ ಈ ಘಟನೆಯಿಂದ ಬೆಳಗಾವಿಯ ಇಡೀ ತಹಶೀಲ್ದಾರ ಕಛೇರಿಯ ಸಿಬ್ಬಂದಿಯೇ ದಿಗ್ಧಮೆಯಾಗಿದ್ದು, ಆತ್ಮಹತ್ಯೆಗೆ ಯಾವ ಕಾರಣ ಇರಬಹುದು ಎಂಬ ಗೊಂದಲದಲ್ಲಿದ್ದಾರೆ..
ನೇಣಿಗೆ ಶರಣಾದ ವ್ಯಕ್ತಿ ವಾಟ್ಸ್ ಅಪ್ ಸಂದೇಶವನ್ನು ತನ್ನ ಸಿಬ್ಬಂದಿಗೆ ಹಾಗೂ ಮಾಧ್ಯಮದವರಿಗೆ ಕೆಳಿಸಿದ್ದು ಲಭ್ಯವಿದ್ದು ಬೆಳಗಾವಿಯಿಂದ ಸವದತ್ತಿಗೆ ಈತನ ವರ್ಗಾವಣೆಯ ಕಾರಣವೂ ಈತನ ನೋವಿಗೆ ಕಾರಣವಾಗಿದ್ದು, ವರ್ಗಾವಣೆಯ ರದ್ದತಿಗಾಗಿ ಬೆಳಗಾವಿಯ ಸಚಿವರ ಆಪ್ತರನ್ನು ಬೇಟಿ ಆಗಿದ್ದು, ತಹಶೀಲ್ದಾರರಿಗೂ ಮನವಿ ಮಾಡಿಕೊಂಡಿದ್ದು ಯಾವ ಸ್ಪಂದನೆ ನೀಡಲಿಲ್ಲ, ಬದಲಾಗಿ ತೊಂದರೆ ಆಗಿದೆ ಎಂದು ಬರೆದುಕೊಂಡಿದ್ದಾರೆ ಎಂಬ ಮಾಹಿತಿಯಿದೆ..
ಸ್ಥಳಕ್ಕೆ ಖಡೇ ಬಜಾರ್ ಪೊಲೀಸರು ಹಾಗೂ ಡಿಸಿಪಿ ಜಗದೀಶ್ ರೋಹನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆಯ ಬಳಿಕ ಆತ್ಮಹತ್ಯೆಯ ಕಾರಣ ತಿಳಿದು ಬರಲಿದೆ ಎಂದಿದ್ದಾರೆ.
ಇನ್ನು ಮೃತ ರುದ್ರಣ್ಣನ ತಾಯಿವರು ತಮ್ಮ ಮಗ ನಿನ್ನೆ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ ಮಗ ರಾತ್ರಿ ಗೊತ್ತಿಲ್ಲದೇ ಮನೆಯಿಂದ ಹೊರಗೆ ಹೋಗಿದ್ದು, ಇಂದು ಬೆಳಿಗ್ಗೆ ಈ ವಿಷಯ ಬೆಳಕಿಗೆ ಬಂದಿರುವುದಾಗಿ ತಿಳಿಸಿದ್ದಾರೆ.
ಇನ್ನು ಪತಿಯ ಶವವನ್ನು ನೋಡಿ ಪತ್ನಿಯ ಆಕ್ರಂದನ
ಮುಗಿಲು ಮುಟ್ಟಿತ್ತು. ರುದ್ರಣ್ಣ ಯಡವಣ್ಣವರ ಮೃತದೇಹವನ್ನು ನೋಡಿ ಕುಟುಂಬಸ್ಥರು ಸೇರಿದಂತೆ ಸಿಬ್ಬಂದಿಗಳು ಕೂಡ ಕಣ್ಣೀರಿಟ್ಟರು.
ಆತ್ಮಹತ್ಯೆಗೆ ಕಾರಣವೇನು ಎಂಬುದು ಮುಂದೆ ನಡೆಯುವ ಪೊಲೀಸ್ ತನಿಖೆಯ ಮೂಲಕ ಸತ್ಯಾಂಶ ಬಯಲಿಗೆ ಬರಬೇಕಾಗಿದ್ದು, ನಿನ್ನೆಯಷ್ಟೇ ಎಲ್ಲರೊಂದಿಗೆ ಒಳ್ಳೆಯ ರೀತಿಯಲ್ಲಿ ಮಾತನಾಡಿದ ಸಿಬ್ಬಂದಿ ಇಂದು ನೇಣಿಗೆ ಶರಣಾಗಿದ್ದು ಯಾರ ಕಡೆಯಿಂದಲೂ ನಂಬಲು ಸಾಧ್ಯವಾಗುತ್ತಿಲ್ಲ..
ನಿಮ್ಮ ಪ್ರತಿಕ್ರಿಯೆ ಏನು?






