ಭವ್ಯಗೂ-ಅಮುಲ್ಯಾಗೂ ಏನು ಸಂಬಂಧ!? ಇದು ಎಲ್ಲೂ ರಿವಿಲ್ ಆಗಿಲ್ಲ ಯಾಕೆ ?

ಜನವರಿ 29, 2025 - 22:10
 0  9
ಭವ್ಯಗೂ-ಅಮುಲ್ಯಾಗೂ ಏನು ಸಂಬಂಧ!? ಇದು ಎಲ್ಲೂ ರಿವಿಲ್ ಆಗಿಲ್ಲ ಯಾಕೆ ?

ಇತ್ತೀಚೆಗಷ್ಟೇ ಬಿಗ್‌ಬಾಸ್‌ ಸೀಸನ್‌ ೧೧ ಯಶಸ್ವಿಯಾಗಿ ಕೊನೆಗೊಂಡಿತು.. ಈ ವೇಳೆ ಹನುಮಂತ ವಿನ್ನರ್‌ ಆದರೇ ತ್ರಿವಿಕ್ರಮ್‌ ರನ್ನರ್‌ಅಪ್‌ ಆದರು. ಡೊಡ್ಮನೆಗೆ ಎಂಟ್ರಿನೀಡಿದ್ದ 20 ಸ್ಪರ್ಧಿಗಳಲ್ಲಿ 6 ಮಂದಿ ಫೈನಲಿಸ್ಟ್ ಆಗಿ ಹೊರ ಹೊಮ್ಮಿದ್ದರು. ಅವರಲ್ಲಿ ಗೀತಾ ಸೀರಿಯಲ್ ಖ್ಯಾತಿಯ ಭವ್ಯಗೌಡ ಕೂಡ ಒಬ್ಬರು. 

ಬಿಗ್ ಬಾಸ್ ಆಟ ಮುಗಿದ್ಮೇಲೆ ಮದುವೆ, ವೃತ್ತಿ ಜೀವನದ ಸೇರಿದಂತೆ ಹಲವು ವಿಚಾರಗಳ ಬಗ್ಗೆ  ಇದೀಗ ಭವ್ಯ ಮಾತನಾಡಿದ್ದಾರೆ. ಇನ್ನೂ ‘ಚೆಲುವಿನ ಚಿತ್ತಾರ’ ಖ್ಯಾತಿಯ ನಟಿ ಅಮೂಲ್ಯ ಜೊತೆಗಿನ ಬಾಂಧವ್ಯದ ಬಗ್ಗೆ ಭವ್ಯಾ ಮಾತನಾಡಿದ್ದಾರೆ. 

ಭವ್ಯಾ ಗೌಡ ಬಿಗ್​ಬಾಸ್​ ಮನೆಯಲ್ಲಿದ್ದಾಗ ಸಖತ್​ ಸ್ಟ್ರಾಂಗ್​ ಸ್ಪರ್ಧಿಯಾಗಿ ಹೊರ ಹೊಮ್ಮಿದ್ದರು. ಅಲ್ಲದೇ ಬಿಗ್​ಬಾಸ್​ ಸೀಸನ್ 11ರಲ್ಲಿ ಮೂರು ಬಾರಿ ಮಹಿಳಾ ಕ್ಯಾಪ್ಟನ್​ ಆಗಿ ಆಯ್ಕೆಯಾಗಿದ್ದರು. ಅಷ್ಟೇ ಅಲ್ಲದೇ ಮೊದಲ ಬಾರಿಗೆ ಮಹಿಳಾ ಸ್ಪರ್ಧಿಯಾಗಿದ್ದ ಭವ್ಯಾ ಗೌಡ ಕಿಚ್ಚನ ಚಪ್ಪಾಳೆ ಕೂಡ ಗಿಟ್ಟಿಸಿಕೊಂಡಿದ್ದರು.

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಗೀತಾ ಸೀರಿಯಲ್​ ಮೂಲಕ ಭವ್ಯಾ ಗೌಡ ಸಖತ್ ಫೇಮಸ್ ಆಗಿದ್ದರು. ಈ ಮೂಲಕವೇ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡು ಬಿಗ್​ಬಾಸ್​ ಮನೆಗೂ ಎಂಟ್ರಿ ಕೊಟ್ಟಿದ್ದರು. ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟು ಕಮಾಲ್​ ಮಾಡಿದ್ದ ಭವ್ಯಾ ಗೌಡಗೆ ಸ್ಯಾಂಡಲ್​ವುಡ್​ ಸ್ಟಾರ್ ನಟಿ ಕೂಡ ಸಾಥ್​ ಕೊಟ್ಟಿದ್ದರು. ಭವ್ಯಾ ಗೌಡಗೇ ಮತ ಹಾಕಿ ಎಂದು ಕೂಡ ಮನವಿ ಮಾಡಿದ್ದರು.

ನಟಿ ಅಮೂಲ್ಯ ಬಿಗ್​ಬಾಸ್​ ಮನೆಗೆ ಹೋಗಿದ್ದ ಭವ್ಯಾ ಗೌಡ ಪರ ಕ್ಯಾಂಪೇನ್ ಮಾಡಿದ್ದರು. ಭವ್ಯಾ ಗೌಡ ಅವರನ್ನು ಕಳೆದ ಎಂಟು ವರ್ಷಗಳಿಂದ ನೋಡುತ್ತಿದ್ದೇನೆ. ಜಗದೀಶ್‌ ಅವರನ್ನು ಮದುವೆಯಾದನಂತರ ಭವ್ಯಾ ಅವರ ಪರಿಚಯ ಆಯ್ತು. ಭವ್ಯಾ ಗೌಡ ಸಹೋದರಿಯರು ತುಂಬ ಫೋಕಸ್‌ ಆಗಿದ್ದು, ಶ್ರಮ ಹಾಕುತ್ತಾರೆ. ಒಳ್ಳೆ ಕೆಲಸ ಮಾಡಬೇಕು, ಮನೆಗೆ ಶಕ್ತಿ ಆಗಬೇಕು ಎನ್ನುವ ಆಸೆ ಹೊಂದಿದ್ದಾರೆ. ಆ ಆಸೆ ನೆರವೇರಲಿ, ನನ್ನ ಕಡೆಯಿಂದ ಶುಭವಾಗಲಿ. ಎಲ್ಲರೂ ಮತ ಹಾಕಿ ಎಂದಿದ್ದರು. ಈ ವಿಡಿಯೋವನ್ನು ಭವ್ಯಾ ಗೌಡ ಅವರ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. 

ನಟಿ ಅಮೂಲ್ಯ ಪತಿ ಜಗದೀಶ್‌ ಆರ್‌ ಚಂದ್ರ ಅವರು ಭವ್ಯಾ ಗೌಡ ಅವರ ಸಂಬಂಧದಲ್ಲಿ ದೊಡ್ಡಪ್ಪನ ಮಗ ಆಗಬೇಕಂತೆ. ಹೀಗಾಗಿ ನಟಿ ಅಮೂಲ್ಯ ಅವರ ಜೊತೆಗೆ ಪತಿ ಜಗದೀಶ್‌ ಅವರು ಭವ್ಯಾಗೆ ವೋಟ್​ ಹಾಕಿ ಎಂದಿದ್ದರು. ಈ ಬಗ್ಗೆ ಹೇಳಿದ್ದ ಜಗದೀಶ್‌ ಆರ್‌ ಚಂದ್ರ ಅವರು, ನನಗೆ ಭವ್ಯಾ ಗೌಡ ತಂಗಿ ಆಗಬೇಕು. ಧಾರಾವಾಹಿ ಇರಬಹುದು ಅಥವಾ ಈಗ ಬಿಗ್‌ ಬಾಸ್‌ ಶೋ ಇರಬಹುದು, ತನ್ನ ಶ್ರಮದಿಂದಲೇ ಅವಳು ಇಲ್ಲಿಯವರೆಗೆ ಬಂದಿದ್ದಾಳೆ. ಬಿಗ್‌ ಬಾಸ್‌ ಶೋನಲ್ಲಿ ಮಹಿಳೆ ಗೆದ್ದು ಬಹಳ ಸಮಯ ಆಯ್ತು. ಈಗ ಭವ್ಯಾ ಗೆಲ್ಲಬೇಕು ಅಂತ ಆಶಿಸುವೆ. ನಿಮ್ಮೆಲ್ಲರ ಆಶೀರ್ವಾದ ಹೀಗೆ ಮುಂದುವರೆಯಲಿ. ಭವ್ಯಾಗೆ ಮತ ಹಾಕಿ ಅಂತ ಅವಳ ಕುಟುಂಬದವರ ಪರವಾಗಿ ನಾನು ಮತ ಯಾಚಿಸುವೆ ಎಂದಿದ್ದರು.

ಈ ಬಗ್ಗೆ ಮಾತನಾಡಿದ ಭವ್ಯಾ ಗೌಡ, ಜಗದೀಶ್‌ ಅಣ್ಣ ದೊಡ್ಡಪ್ಪನ ಮಗ ಆಗಬೇಕು. ಜಗದೀಶ್‌ ಅಣ್ಣನಿಗೆ ಅಮೂಲ್ಯ ಅವರಿಗೆ ಕೊಟ್ಟಿದ್ದು, ಹೀಗಾಗಿ ಸಂಬಂಧದಲ್ಲಿ ಅಮೂಲ್ಯ ಅವರು ನನಗೆ ಅತ್ತಿಗೆ ಆಗಬೇಕು. ಅಮೂಲ್ಯ ಅಕ್ಕ ನಮಗೆ ತುಂಬಾ ಸಪೋರ್ಟ್ ಮಾಡುತ್ತಾರೆ. ಏನೇ ವಿಚಾರ ಆಗಲಿ ಡೌಟ್ಸ್​ ಇದ್ರೆ ರೆಸ್ಪಾನ್ಸ್ ಮಾಡುತ್ತಾರೆ. ಹೀಗೆ ಮಾಡು, ಹಾಗೇ ಮಾಡು ಅಂತ ಹೇಳುತ್ತಾರೆ ಎಂದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow