ಮಧುಮೇಹ ರೋಗಿಗಳಿಗೆ ಈ ಹಣ್ಣು ರಾಮಬಾಣ..! ಇದರ ಪ್ರಯೋಜನಗಳು ತಿಳಿದ್ರೆ ಶಾಕ್ ಆಗ್ತೀರಾ

ನೋಡೋಕೆ ಥೇಟ್ ಗೇರುಹಣ್ಣಿನ ತರ ಕಾಣುವ ಈ ಅಪರೂಪದ ಹಣ್ಣಿನ ಹೆಸರು ವಾಟರ್ ಆ್ಯಪಲ್. ವಿದೇಶದಲ್ಲಿ ಹೆಚ್ಚು ಬೇಡಿಕೆಯಿರುವ ಈ ಹಣ್ಣು ಸ್ಥಳೀಯ ಮಾರುಕಟ್ಟೆಯಲ್ಲಿ ಕಾಣಸಿಗುವುದು ವಿರಳ. ಇಂತಹ ಅಪರೂಪದ ಹಣ್ನೀನಲ್ಲಿ ಸಾಕಷ್ಟು ಪ್ರಯೋಜನಗಳಿವೆ. ವಾಟರ್ ಆಪಲ್ ಕೋಲ್ಕತ್ತಾ, ಕೇರಳ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತದೆ. ನೀರು ಹೇರಳವಾಗಿ ಕಂಡುಬರುತ್ತದೆ ಇದೇ ಕಾರಣಕ್ಕೆ ವಾಟರ್ ಆಪಲ್ ಎನ್ನುತ್ತಾರೆ.
ಮಧುಮೇಹ ರೋಗಿಗಳಿಗೆ ವಾಟರ್ ಆಪಲ್ ಸೇವನೆ ತುಂಬಾ ಪ್ರಯೋಜನಕಾರಿ. ವಾಟರ್ ಆಪಲ್ ಆಂಟಿಹೈಪರ್ಗ್ಲೈಸೆಮಿಕ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಮಧುಮೇಹಿಗಳು ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಏರುಪೇರಾಗುವುದಿಲ್ಲ.
ವಾಟರ್ ಆಪಲ್ ನಲ್ಲಿ ಬಯೋಆಕ್ಟಿವ್ ಸ್ಫಟಿಕದಂತಹ ಆಲ್ಕಲಾಯ್ಡ್ 'ಜಾಂಬೋಸಿನ್' ಕಂಡು ಬರುತ್ತದೆ. ವಾಟರ್ ಆಪಲ್ ಹಸಿಯಾಗಿರುವಾಗ ಹಸಿರು ಬಣ್ಣ ಹಣ್ಣಾದ ನಂತರ ಕೆಂಪು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ತಿನ್ನಲು ಸಾಕಷ್ಟು ರುಚಿಯಾಗಿ ಮತ್ತು ರಸಭರಿತವಾಗಿರುತ್ತದೆ.
ಪೊಟ್ಯಾಸಿಯಮ್ ಹೊಂದಿರುವ ಕಾರಣದಿಂದ ವಾಟರ್ ಆಪಲ್ ತಿನ್ನುವುದರಿಂದ ಹೃದಯವು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ಸಮಸ್ಯೆಗೂ ಇದು ಮದ್ದಾಗಿದೆ.
ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹ ವಾಟರ್ ಆಪಲ್ ತಿನ್ನಬಹುದಾಗಿದೆ. ವಾಟರ್ ಆಪಲ್ ನಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ.
ಗುಲಾಬಿ ಜಾಮೂನ್ಗಳು ಫೈಬರ್ನಲ್ಲಿ ಸಮೃದ್ಧವಾಗಿದ್ದು, ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ, ಇದರಿಂದಾಗಿ ಅಪಧಮನಿ ಅಪಾಯ ಮತ್ತು ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಇತರ ಹೃದಯ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತವೆ.
ಗುಲಾಬಿ ಜಾಮೂನ್ನಲ್ಲಿ ವಿಟಮಿನ್ ಎ ಮತ್ತು ಸಿ ಜೊತೆಗೆ ಇತರ ಸಕ್ರಿಯ ಸಂಯುಕ್ತಗಳಿವೆ, ಅದು ವ್ಯಕ್ತಿಯನ್ನು ಕ್ಯಾನ್ಸರ್ ನಿಂದ ರಕ್ಷಿಸುತ್ತದೆ. ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ಗೆ ಗುಲಾಬಿ ಜಾಮೂನ್ಗಳ ಪರಿಣಾಮಕಾರಿತ್ವವನ್ನು ಸಾಬೀತುಪಡಿಸುವ ವಿವಿಧ ಅಧ್ಯಯನಗಳು ಮತ್ತು ಸಂಶೋಧನೆಗಳು ಇವೆ.
ನಿಮ್ಮ ಪ್ರತಿಕ್ರಿಯೆ ಏನು?






