ಮಹಾಕುಂಭಮೇಳ: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಕೃತಿಕಾ ರವೀಂದ್ರ!

ನಟಿ ಕೃತಿಕಾ ರವೀಂದ್ರ ಈಗ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದು, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.
ರಾಧಾ ಕಲ್ಯಾಣ, ಭೂಮಿಗೆ ಬಂದ ಭಗವಂತ ಸೀರಿಯಲ್ ಮೂಲಕ ಸಖತ್ ಫೇಮಸ್ ಆಗಿದ್ದರು ಕೃತಿಕಾ ರವೀಂದ್ರ. ಸದ್ಯ ನಟಿ ಕೃತಿಕಾ ಅವರು ಬಿಡುವು ಮಾಡಿಕೊಂಡು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರೋ ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ.
ಸ್ನೇಹಿತರ ಜೊತೆಗೆ ನಟಿ ಕೃತಿಕಾ ಕುಂಭಮೇಳದಲ್ಲಿ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ಇದೇ ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋ ಜೊತೆಗೆ ನಟಿ 144 ವರ್ಷಗಳಿಗೊಮ್ಮೆ ನಡೆಯೋ ಮಹಾಕುಂಭಮೇಳಕ್ಕೆ ಬಂದು ಗಂಗಾ ಯಮುನಾ, ಸರಸ್ವತಿ ಸಂಗಮ ಸ್ನಾನ ಮಾಡಿರೋ ಪುಣ್ಯ ನನ್ನದು. ಧನ್ಯೋಸ್ಮಿ ಶಿವಾರ್ಪಣಮಸ್ತು ಎಂದು ಬರೆದುಕೊಂಡಿದ್ದಾರೆ
ನಿಮ್ಮ ಪ್ರತಿಕ್ರಿಯೆ ಏನು?






