ಮಹಿಳೆಯರು ಹಣೆಗೆ ಕುಂಕುಮ ಇಡುವಾಗ ಈ ಬೆರಳನ್ನು ಮಾತ್ರ ಬಳಸಬೇಕಂತೆ!

ವಿವಾಹದ ವೇಳೆ ಸಿಂಧೂರವನ್ನು ದಾನ ಮಾಡುವುದು ತುಂಬಾನೇ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಸಿಂಧೂರವು ಕೆಂಪು ಬಣ್ಣದಲ್ಲಿರುತ್ತದೆ. ಇದು ಪ್ರೀತಿ ಮತ್ತು ರಕ್ತದ ಸಂಕೇತವಾಗಿದೆ. ಪತಿ ಮತ್ತು ಪತ್ನಿಯ ನಡುವಿನ ಪ್ರೀತಿ ಮತ್ತು ಸಂಬಂಧದ ಆಳವನ್ನು ತೋರಿಸುತ್ತದೆ.
ಸಿಂಧೂರ ದಾನವನ್ನು ಅನುಸರಿಸುವುದು ಜೀವನದಲ್ಲಿ ಅದೃಷ್ಟ, ಸಂಪತ್ತು, ಸಂತೋಷ ಮತ್ತು ಶಾಂತಿಯನ್ನು ತರುತ್ತದೆ. ಇದಲ್ಲದೆ, ಇದು ಪತಿಯ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯದ ರೂಪವೂ ಆಗಿದೆ. ಆದ್ದರಿಂದ, ಹಿಂದೂ ವಿವಾಹ ಕಾರ್ಯದಲ್ಲಿ ಸಿಂಧೂರದ ಪ್ರಾಮುಖ್ಯತೆ ತುಂಬಾ ಹೆಚ್ಚಾಗಿರುತ್ತದೆ ಮತ್ತು ಇದು ಪತಿಗೆ ಹೆಂಡತಿಗೆ ನಿಷ್ಠೆ ಮತ್ತು ಪ್ರೀತಿಯ ಸಂಕೇತವಾಗಿದೆ.
ತಿಲಕ ಇಡಲು ಬಹಳಷ್ಟು ಮಂದಿ ಬಲಗೈನ ಉಂಗುರ ಬೆರಳನ್ನು ಬಳಸುತ್ತಾರೆ. ಆದರೆ ನಿಮಗೆ ಗೊತ್ತಾ..? ಅಷ್ಟೇ ಅಲ್ಲ… ಇತರೆ ಬೆರಳುಗಳಲ್ಲೂ ಸಹ ತಿಲಕ ಇಟ್ಟುಕೊಳ್ಳಬಹುದು. ಹಾಗಿದ್ದರೆ ಯಾವ ಬೆರಳಿನಿಂದ ತಿಲಕ ಇಟ್ಟುಕೊಂಡರೆ ಏನು ಪ್ರತಿಫಲ ಸಿಗುತ್ತದೆ. ಇಲ್ಲಿದೆ ಬೆರಳೆಣಿಕಿಯೆ ವಿವರಗಳು?
ಹಿಂದೂ ಶಾಸ್ತ್ರದ ಪ್ರಕಾರ ಮಧ್ಯದ ಬೆರಳು ಶನಿಗ್ರಹದ ಸ್ಥಾನ. ಈ ಗ್ರಹ ನಮಗೆ ದೀರ್ಘವಾದ ಆಯಸ್ಸನ್ನು ನೀಡುತ್ತದೆ. ಆದಕಾರಣ ಈ ಬೆರಳಿನಿಂದ ತಿಲಕ ಇಟ್ಟುಕೊಂಡರೆ ಆಯಸ್ಸು ಹೆಚ್ಚುತ್ತದೆ.
ಉಂಗುರದ ಬೆರಳಿನಿಂದ ತಿಲಕ ಇಟ್ಟುಕೊಂಡರೆ ಮಾನಸಿಕ ಪ್ರಶಾಂತಿ ಉಂಟಾಗುತ್ತದೆ. ಯಾಕೆಂದರೆ ಆ ಬೆರೆಳಿನ ಸ್ಥಾನ ಸೂರ್ಯನದು. ಅವನು ನಮಗೆ ಮಾನಸಿಕ ಶಾಂತಿಯನ್ನು ಉಂಟು ಮಾಡುತ್ತಾನೆ. ಹಾಗಾಗಿ ಈ ಬೆರಳಿನಿಂದ ತಿಲಕ ಇಟ್ಟುಕೊಂಡರೆ ಮನಸ್ಸು ಪ್ರಶಾಂತವಾಗಿ ಇರುತ್ತದೆ. ಸೂರ್ಯನಲ್ಲಿರುವ ಶಕ್ತಿ ನಮಗೆ ಲಭಿಸುತ್ತದೆ.
ಹೆಬ್ಬರಳಿನಿಂದ ತಿಲಕ ಇಟ್ಟುಕೊಂಡರೆ ದೈಹಿಕ ದೃಢತೆ, ಧೈರ್ಯ ಲಭಿಸುತ್ತದೆ. ಯಾಕೆಂದರೆ ಆ ಬೆರಳಿನ ಸ್ಥಾನ ಶುಕ್ರನದು. ಅವನು ನಮಗೆ ಬೆಟ್ಟದಷ್ಟು ಶಕ್ತಿ ನೀಡುತ್ತಾನೆ. ವಿಜ್ಞಾನವನ್ನು, ಆರೋಗ್ಯವನ್ನೂ ಸಹ ಉಂಟು ಮಾಡುತ್ತಾನೆ.
ತೋರು ಬೆರಳಿನಿಂದ ತಿಲಕ ಇಟ್ಟುಕೊಂಡರೆ ಮೋಕ್ಷ ಲಭಿಸುತ್ತದೆ. ಆ ಬೆರಳಿನ ಸ್ಥಾನ ಗುರು. ಅವನು ಜ್ಞಾನವನ್ನು ಪ್ರಸಾದಿಸುತ್ತಾನೆ. ಮೋಕ್ಷ ಉಂಟು ಮಾಡುತ್ತಾನೆ. ಸಮಸ್ಯೆಗಳಿಂದ ಹೊರಗೆ ಹಾಕುತ್ತಾನೆ.
ನಮ್ಮ ದೇಹದಲ್ಲಿ ಒಟ್ಟು 13 ಜಾಗಗಳಲ್ಲಿ ತಿಲಕ ಇಟ್ಟುಕೊಳ್ಳಬಹುದು. ಆದರೆ ಬಹಳಷ್ಟು ಮಂದಿ ಹಣೆಯ ಮೇಲೆ ತಿಲಕ ಧರಿಸುತ್ತಾರೆ. ಯಾಕೆಂದರೆ ಆ ಸ್ಥಾನ ಮಂಗಳನದು. ಅವನಿಗೆ ಕೆಂಪು ಎಂದರೆ ಇಷ್ಟ. ಹಾಗಾಗಿ ಕೆಂಪು ಬಣ್ಣದ ತಿಲಕವನ್ನು ಬಹಳಷ್ಟು ಮಂದಿ ಇಟ್ಟುಕೊಳ್ಳುತ್ತಾರೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






