ಮಿತಿ ಮೀರಿದ ಲಾಯರ್ ವರ್ತನೆ: ಜಗದೀಶ್ ಮೇಲೆ ಸಿಟ್ಟು ಹೊರ ಹಾಕಿದ ಗೌತಮಿ ಅಸಮಾಧಾನ!

ಬಿಗ್ ಬಾಸ್ ಎಂದಾಗ ವಿವಾದಗಳು ಸಾಮಾನ್ಯ. ಈಗಾಗಲೇ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸಾಕಷ್ಟು ವಿವಾದಗಳು ನಡೆದು ಹೋಗಿವೆ. ಅದೇ ರೀತಿ ಗೌತಮಿ ಬಗ್ಗೆ ಜಗದೀಶ್ ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಅದು ಏನು ಎಂಬುದನ್ನು ರಿವೀಲ್ ಮಾಡಿಲ್ಲ. ವಿವಾದ ಆಗಬಾರದು ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎನ್ನಲಾಗಿದೆ.
ಗೌತಮಿ ಅವರು ಕಣ್ಣೀರು ಹಾಕುತ್ತಾ ಬಂದು ಮೋಕ್ಷಿತಾ ಬಳಿ ಈ ಬಗ್ಗೆ ಮಾತನಾಡಿದ್ದಾರೆ. ‘ಗೌತಮಿಯವರ ಬಗ್ಗೆ ಜಗದೀಶ್ ಕೆಟ್ಟದಾಗಿ ಮಾತನಾಡಿದ್ದರ ಬಗ್ಗೆ ಇಲ್ಲಿ ಮಾತನಾಡಲಾಗುತ್ತಿದೆ’ ಎಂದು ತೋರಿಸಲಾಗಿದೆ. ಅವರು ಮಾಡಿರುವ ಕಮೆಂಟ್ ಏನು ಎಂಬುದನ್ನು ತೋರಿಸಿಲ್ಲ. ಗೌತಮಿ ಕಣ್ಣೀರು ಹಾಕುವಾಗ ಮೋಕ್ಷಿತಾ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ.
ಜಗದೀಶ್ ಅವರು ಹೇಳಬೇಕು ಎಂದು ಹೇಳಿರುವುದಿಲ್ಲ. ನಿಮಗೇ ಗೊತ್ತಲ್ಲ, ಅವರು ಏನು ಮಾತಾಡ್ತಾರೆ ಎನ್ನುವುದು ಅವರಿಗೆ ಗೊತ್ತಾಗಲ್ಲ’ ಎಂದರು ಮೋಕ್ಷಿತಾ. ಜಗದೀಶ್ ಬಗ್ಗೆ ಗೌತಮಿ ಕೋಪ ಹೊರಹಾಕಿದರು. ‘ಅವರು ಕಂಟೆಂಟಿಂಗೆ ನಮ್ಮನ್ನು ಬೆಳೆಸಿಕೊಳ್ಳೋದು ಸರಿ ಅಲ್ಲ. ಅವರು ಯಾವ ದೃಷ್ಟಿಯಲ್ಲಿ ನೋಡಿದಾರೆ ಎಂಬುದು ನೆನಸಿಕೊಂಡ್ರೆ ಸಿಟ್ಟು ಬರುತ್ತದೆ. ಈ ರೀತಿ ಆದಾಗ ಮೊದಲು ಅಳು ಬರುತ್ತದೆ. ಆಮೇಲೆ ಸರಿಯಾದ ಸಮಯ ನೋಡಿಕೊಂಡು ತಿರುಗೇಟು ಕೊಡ್ತೀನಿ’ ಎಂದು ಗೌತಮಿ ಹೇಳಿದ್ದಾರೆ.
ಎಲ್ಲರೂ ನೋಡ್ತಾರೆ ಅನ್ನೋದು ಗೊತ್ತು. ಕೆಲವರು ಹೇಳೋದಿಲ್ಲ. ಕಮೆಂಟ್ ಮಾಡುವಷ್ಟು ಧೈರ್ಯ ನೀನು ಮಾಡ್ತೀಯಾ ಅಂದ್ರೆ ಕೈಕೊಂಡು ಕೂರುವಳು ನಾನಲ್ಲ. ನೀನಾಗೆ ಹಳ್ಳ ತೋಡಿಕೊಂಡಿದ್ದೀಯಾ. ನಾನು ಕೊಡ್ತೀನಿ’ ಎಂದು ಗೌತಮಿ ಅವರು ಸಿಟ್ಟು ಹೊರಹಾಕಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






