ರಾಜ್ಯದ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವು ಕೇಸ್: ಸಿಎಂಗೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿದ ಮಹಿಳಾ ಆಯೋಗ!

ಬೆಂಗಳೂರು:- ಇತ್ತೀಚಿಗೆ ರಾಜ್ಯದ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವು ಕೇಸ್ ಹೆಚ್ಚಳವಾಗಿದ್ದು, ಇದೇ ಘಟನೆಗೆ ಸಂಬಂಧಿಸಿದಂತೆ ಸಿಎಂಗೆ ಪತ್ರ ಬರೆದು ಮಹಿಳಾ ಆಯೋಗ ಕಳವಳ ವ್ಯಕ್ತಪಡಿಸಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಪತ್ರ ಬರೆದಿದ್ದಾರೆ. ಬಾಣಂತಿಯರ ಮರಣವನ್ನ ತಡೆಗಟ್ಟಲು ತುರ್ತಾಗಿ ಗಮನ ಹರಿಸಿ. ಅಲ್ಲದೇ ಟಾಸ್ಕ್ ಫೋರ್ಸ್ ರಚಿಸುವಂತೆ ಮನವಿ ಮಾಡಿದ್ದಾರೆ. ಬಾಣಂತಿಯರ ಸಾವಿನಲ್ಲಿ ವೈದ್ಯರ ನಿರ್ಲಕ್ಷ್ಯ ಇದ್ರೆ ಕ್ರಮಕ್ಕೆ ಮನವಿ ಮಾಡಿದ್ದಾರೆ. ವೈದ್ಯಕೀಯ ಮಾರ್ಗಸೂಚಿಗಳನ್ನ ಪಾಲಿಸುವಂತೆ ವೈದ್ಯರಿಗೆ ಸೂಚಿಸಬೇಕು. ಒಂದು ವೇಳೆ ವೈದ್ಯರ ತಪ್ಪಿದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪತ್ರದಲ್ಲಿ ಏನಿದೆ?
ಕರ್ನಾಟಕ ರಾಜ್ಯದಲ್ಲಿ ಹೆರಿಗೆಯ ನಂತರ ತಾಯಂದಿರ ಸಾವುಗಳು ಪ್ರಕರಣಗಳು ಹೆಚ್ಚುತ್ತಿರುವುದು ವಿಷಾದನೀಯಮತ್ತು ಶೋಚನೀಯ. ರಾಜ್ಯವು ವೈದ್ಯಕೀಯ ರಂಗದಲ್ಲಿ ಮುಂಚೂಣಿಯಲ್ಲಿದೆ. ಇಂತಹ ಸಾವುಗಳು ಮುಂದೆ ಸಂಭವಿಸುವುದನ್ನು ತಡೆಗಟ್ಟಬೇಕಿದೆ.
ಸೂಕ್ತ ಸಮಯದಲ್ಲಿ ಹೆರಿಗೆಯ ನಂತರ ವೈದ್ಯಕೀಯ ಚಿಕಿತ್ಸೆಯನ್ನು ನೀಡಬೇಕಾಗಿದೆ.ರಾಜ್ಯ ಮಟ್ಟದ ನುರಿತ ತಜ್ಞ ವೈದ್ಯರ ತಂಡವನ್ನು ಟಾಸ್ಕ್ ಫೋರ್ಸ್ ರಚಿಸಿ. ಹೆರಿಗೆಯ ನಂತರ ತಾಯಂದಿರ ಸಾವು ಯಾವ ಕಾರಣಗಳಿಗೆ ಸಂಭವಿಸುತ್ತಿದೆ ?ಈ ಬಗ್ಗೆ ವಿಸ್ತತ ಅಧ್ಯಯನ ನಡೆಸಿ ಸೂಕ್ತ & ಪರಿಣಾಮಕಾರಿಯಾಗಿ. ತಾಯಂದಿರ ಸಾವುಗಳನ್ನು ತಡೆಗಟ್ಟಲು ಸಲಹೆ ಹಾಗೂ ಪರಿಹಾರಗಳನ್ನು ತಿಳಿದುಕೊಳ್ಳುವುದು. ಕಳೆದ 3 ವರ್ಷಗಳಲ್ಲಿ ನಡೆದ ಸಾವಿನ ಅಂಕಿ ಅಂಶಗಳನ್ನ ಸಂಗ್ರಹಿಸೋದು. ಹೆರಿಗೆಯ ನಂತರ ತಾಯಂದಿರ ಸಾವುಗಳ ಅಂಕಿ-ಅಂಶಗಳನ್ನು ಸಂಗ್ರಹಿಸುವುದು. ವೈದ್ಯಕೀಯ ಸಿಬ್ಬಂದಿ & ಆಸ್ಪತ್ರೆಯ ಆಡಳಿತ ಮಂಡಳಿಗಳಿಂದ ಏನಾದರೂ ನಿರ್ಲಕ್ಷ್ಯವಾಗಿದ್ದಲ್ಲಿ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಹಾಗೂ ತಾಯಂದಿರ ಸಾವಿಗೆ ನ್ಯಾಯಯುತ ಪರಿಹಾರಗಳನ್ನು ನೀಡುವುದು. ಹೆಣ್ಣು ಗರ್ಭಧರಿಸಿದ ನಂತರ ಸುಸೂತ್ರವಾಗಿ ಹೆರಿಗೆ ಆಗುವವರೆಗೆ. ಸೂಕ್ತ ರೀತಿಯ ವೈದ್ಯಕೀಯ ಮಾರ್ಗಸೂಚಿಗಳನ್ನು ತಜ್ಞ ವೈದ್ಯರ ತಂಡದಿಂದ ಪಡೆದು.ಸದರಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ರಾಜ್ಯದ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಸೂಚಿಸಬೇಕು ಎಂದು ಕೋರಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






