'ರಾಮಾಯಣ' ಗ್ಲಿಂಪ್ಸ್ ಬಿಡುಗಡೆ: ರಣ್ಬೀರ್ ಕಪೂರ್ ವಿರುದ್ಧ ಟೀಕೆ, ಯಶ್’ಗೆ ಹೆಚ್ಚಾಯ್ತು ಕ್ರೇಜ್!

ಜುಲೈ 7, 2025 - 20:25
 0  9
'ರಾಮಾಯಣ' ಗ್ಲಿಂಪ್ಸ್ ಬಿಡುಗಡೆ: ರಣ್ಬೀರ್ ಕಪೂರ್ ವಿರುದ್ಧ ಟೀಕೆ, ಯಶ್’ಗೆ ಹೆಚ್ಚಾಯ್ತು ಕ್ರೇಜ್!

ಭಾರೀ ನಿರೀಕ್ಷೆಯ 'ರಾಮಾಯಣ' ಸಿನಿಮಾದ ಟೀಸರ್ ಇದೀಗ ಬಿಡುಗಡೆಯಾಗಿದೆ. ದೀಪಾವಳಿ 2026ರಲ್ಲಿ ಬಿಡುಗಡೆಯಾಗಲಿರುವ ಪೌರಾಣಿಕ ಮಹಾಕಾವ್ಯದ ಚಿತ್ರ ಈಗಾಗಲೇ ಚರ್ಚೆಯ ಕೇಂದ್ರಬಿಂದುವಾಗಿದೆ. ಅಭಿನಯದಲ್ಲಿ ರಣ್ಬೀರ್ ಕಪೂರ್ ರಾಮನ ಪಾತ್ರವಹಿಸಿದ್ದು, ಯಶ್ ರಾವಣನ ವೇಷದಲ್ಲಿ ಮಿಂಚಿದ್ದಾರೆ. ಕೇವಲ 3 ನಿಮಿಷದ ಗ್ಲಿಂಪ್ಸ್ನಲ್ಲಿ ಇಬ್ಬರೂ ಕೆಲವೇ ಸೆಕೆಂಡುಗಳಲ್ಲಿ ಕಾಣಿಸಿಕೊಂಡರೂ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಣ್ಬೀರ್ ಅವರ ಪಾತ್ರ ಆಯ್ಕೆ ಕುರಿತಂತೆ ವಿವಾದದ ಹೊಗೆಯು ಹರಡಿದೆ. ಗೋಮಾಂಸ ಸೇವನೆಯ ಕುರಿತಂತೆ ಅವರು ಹಿಂದಿನ ಸಂದರ್ಶನದಲ್ಲಿ ನೀಡಿದ್ದ ಹೇಳಿಕೆ ಇದೀಗ ವೈರಲ್ ಆಗಿದ್ದು, "ಧರ್ಮವಂತರ ಸಂಕೇತವಾದ ರಾಮನ ಪಾತ್ರಕ್ಕೆ ಅಸಭ್ಯ ಆಯ್ಕೆ" ಎಂಬ ಟೀಕೆಗಳು ಕೇಳಿಬರುತ್ತಿವೆ. ಇದಕ್ಕೆ ಬದಲಿ, ಯಶ್ ರಾವಣನ ಪಾತ್ರದಲ್ಲಿ ಮಿಂಚಿದ್ದು, "ಕೇವಲ ಒಂದು ಕಣ್ಣು" ದೃಶ್ಯಕ್ಕೂ ಅಭಿಮಾನಿಗಳು ಫಿದಾ ಆಗಿದ್ದಾರೆ. "ಮುಗ್ಧತೆ ಮತ್ತು ಕ್ರೂರತೆ ಮಿಶ್ರಿತವಾಗಿ ಭಾಸವಾಗಿದೆ" ಎಂಬಂತೂ ಕಾಮೆಂಟ್ಗಳು ಹರಿದಾಡುತ್ತಿವೆ.

ಚಿತ್ರದ ನಿರ್ದೇಶನದ ಹೊಣೆಯನ್ನು ನಿತೀಶ್ ತಿವಾರಿ ಹೊತ್ತಿದ್ದಾರೆ. ಸಂಗೀತದಲ್ಲಿ ಎರಡು ಆಸ್ಕರ್ ವಿಜೇತರುಎಆರ್ ರೆಹಮಾನ್ ಮತ್ತು ಹನ್ಸ್ ಜಿಮರ್. ಚಿತ್ರವನ್ನು ನಿರ್ಮಿಸುತ್ತಿರುವವರು ಯಶ್ ಮತ್ತು ನಮಿತ್ ಮಲ್ಹೋತ್ರಾ. ರಾಮಾಯಣದ ಆಧುನಿಕ ಪರಿಕಲ್ಪನೆಯು ಯಾವ ಮಟ್ಟದ ಅಭಿಮಾನಿ ಪ್ರೀತಿ ಗಳಿಸುತ್ತದೆ, ಯಾವ ರೀತಿ ವಿವಾದಗಳಿಗೆ ಸ್ಪಷ್ಟನೆ ನೀಡುತ್ತದೆ ಎಂಬುದನ್ನು ನೋಡಬೇಕು. ಪೌರಾಣಿಕ ಪಾತ್ರಗಳ ಬಗೆಗಿನ ಸಾರ್ವಜನಿಕ ಪ್ರಾಮಾಣಿಕತೆ ಮತ್ತು ನಂಬಿಕೆಗಳನ್ನು ಕಾಪಾಡಿಕೊಳ್ಳುವುದು ಚಿತ್ರತಂಡದ ಮುಂದೆ ನಿಂತಿರುವ ದೊಡ್ಡ ಸವಾಲು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow