ರಾಷ್ಟ್ರಮಟ್ಟದಲ್ಲಿ ಡಿಕೆಶಿ ಹೋಗುವ ಕಡೆ ಕರಿಬೆಕ್ಕುಗಳು ಓಡಾಡ್ತಿವೆ: ಆರ್.ಅಶೋಕ್ ವ್ಯಂಗ್ಯ

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಡಿಕೆಶಿ ಹೋಗುವ ಕಡೆ ಕರಿಬೆಕ್ಕುಗಳು ಓಡಾಡ್ತಿವೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿಕೆಶಿ ಅವರು ಕುಂಭಮೇಳಕ್ಕೆ ಹೋಗಿದ್ದು, ಶಿವರಾತ್ರಿ ದಿನ ಇಶಾ ಫೌಂಡೇಶನ್ಗೆ ಹೋಗಿದ್ದು ಅವರ ವೈಯುಕ್ತಿಕ.
ಆದರೆ ಕಾಂಗ್ರೆಸ್ ಪಕ್ಷದಲ್ಲಿ ಕರಿಬೆಕ್ಕಿನ ಕಾಟ ಜಾಸ್ತಿ ಆಗಿದೆ. ಡಿಕೆಶಿ ಎಲ್ಲಿ ಹೋದರೂ ಕರಿಬೆಕ್ಕಿನ ಕಾಟ ಇದೆ. ಇಷ್ಟು ದಿನ ರಾಜ್ಯದಲ್ಲಿ ಇದ್ದವು, ಈಗ ರಾಷ್ಟ್ರಮಟ್ಟದಲ್ಲಿ ಡಿಕೆಶಿ ಹೋಗುವ ಕಡೆ ಕರಿಬೆಕ್ಕುಗಳು ಓಡಾಡ್ತಿವೆ. ಇದು ಒಳ್ಳೆಯದಕ್ಕೋ? ಕೆಟ್ಟದ್ದಕ್ಕೋ? ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಧರ್ಮದ ವಿಚಾರವಾಗಿ ನಮ್ಮ ಪಕ್ಷದ ನಾಯಕರು ಹೋಗುವುದು ಸಾಮಾನ್ಯ. ಇಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ಈ ಹಿಂದೆ ಪ್ರಧಾನಿ ಕೂಡ ಹೋಗಿದ್ದಾರೆ. ಈಗ ಅಮಿತ್ ಶಾ ಅವರು ಹೋಗಿದ್ದಾರೆ. ಡಿಕೆಶಿ ಯಾಕೆ ಹೋಗಿದ್ದು ಎಂದು ಕಾಂಗ್ರೆಸ್ ಪಕ್ಷದಲ್ಲಿ ಆಕ್ಷೇಪ ಶುರುವಾಗಿದೆ. ಪ್ರಧಾನಿಯನ್ನು ಡಿಕೆಶಿಯವರು ಭೇಟಿ ಮಾಡಿ ಬಂದಿದ್ದರು. ಈಗ ಇಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದಾರೆ ಎಂದು ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?






