ವೈದ್ಯರ ನಿರ್ಲಕ್ಷ್ಯ: ತುಮಕೂರಿನಲ್ಲಿ ಡೆಂಘಿಗೆ 7 ವರ್ಷದ ಬಾಲಕ ದುರ್ಮರಣ!

ತುಮಕೂರು:- ಚಳಿಗಾಲದಲ್ಲಿ ಕೆಮ್ಮು, ವೈರಲ್ ಜ್ವರ ಜನರನ್ನು ಕಾಡಿತ್ತು. ಇದೀಗ ಬೇಸಿಗೆ ಮುನ್ನವೇ ಡೆಂಘಿ ಹಾವಳಿ ಆರಂಭವಾಗಿದೆ. ಕರ್ನಾಟಕದಲ್ಲಿ ಡೆಂಘಿ ಭೀತಿ ಎದುರಾಗಿದ್ದು, ತುಮಕೂರಿನಲ್ಲಿ ಓರ್ವ ಬಾಲಕ ಡೆಂಘಿ ಜ್ವರಕ್ಕೆ ಮೃತಪಟ್ಟಿದ್ದಾನೆ.
ಜಿಲ್ಲೆಯ ಪಾವಗಡ ಪಟ್ಟಣದ ಬಾಬೈಯನ ಗುಡಿಬೀದಿಯಲ್ಲಿ ಘಟನೆ ಜರುಗಿದೆ. 7 ವರ್ಷದ ಕರುಣಾಕರ್ ಮೃತ ಬಾಲಕ. ಪಾವಗಡದ ಸುಧಾ ಕ್ಲಿನಿಕ್ನಲ್ಲಿ ಬಾಲಕ ಕಳೆದ 8 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೊನೆ ಕ್ಷಣದವರೆಗೂ ಡೆಂಘಿ ಜ್ವರ ಎಂದು ವೈದ್ಯರು ಪೋಷಕರಿಗೆ ತಿಳಿಸಿಲ್ಲ.
ಹೀಗಾಗಿ ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಧಾ ಕ್ಲಿನಿಕ್ ಮುಂದೆ ಪ್ರತಿಭಟನೆ ಮಾಡಲಾಗಿದೆ.
ಸೂಚನೆ:-
ಇನ್ನೂ ಮಹಾಮಾರಿ ಡೆಂಗ್ಯೂ ಕಾಯಿಲೆಯಿಂದ ಬಳಲುತ್ತಿರುವ ಜನರು ವಿಶ್ರಾಂತಿ ಪಡೆಯಬೇಕು. ಜಾಸ್ತಿ ನೀರು ಹಾಗೂ ಜ್ಯೂಸ್ ಕುಡಿಯಬೇಕು. ಜ್ವರ ಮತ್ತು ದೇಹದ ನೋವಿಗೆ ಮಾತ್ರೆ ತೆಗೆದುಕೊಳ್ಳಬಹುದು.
ನಿಮ್ಮ ಪ್ರತಿಕ್ರಿಯೆ ಏನು?






