ವೈಯಾಲಿಕಾವಲ್ ಮಹಿಳೆ ಕೇಸ್ʼಗೆ ಟ್ವಿಸ್ಟ್! ದೇಹದ ವಾಸನೆ ಬಂದಿದ್ದು ಹೇಗೆ..? ಆರೋಪಿ ಬಂಧನಕ್ಕಾಗಿ 8 ತಂಡ ರಚನೆ

ಬೆಂಗಳೂರು: ಬೆಂಗಳೂರಿನಲ್ಲಿ ಡೆಡ್ಲಿ ಮರ್ಡರ್ವೊಂದು ನಡೆದಿದೆ. 29 ವರ್ಷದ ಮಹಾಲಕ್ಷ್ಮಿ ಎಂಬ ಮಹಿಳೆಯನ್ನ ವ್ಯಕ್ತಿಯೋರ್ವ ರಣಭೀಕರವಾಗಿ ಹತ್ಯೆಗೈದಿದ್ದಾನೆ. ಮಹಿಳೆಯ ಮೃತದೇಹವನ್ನು ಒಂದಲ್ಲ, ಎರಡಲ್ಲ ಬರೋಬ್ಬರಿ 50ಕ್ಕೂ ಹೆಚ್ಚು ಪೀಸ್ ಮಾಡಿ ಫ್ರಿಡ್ಜ್ನಲ್ಲಿಟ್ಟಿರುವ ಘಟನೆ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದೆ. ನಗರದ ವೈಯಾಲಿಕಾವಲ್ನ ಮುನೇಶ್ವರ ಬ್ಲಾಕ್ನಲ್ಲಿ ನಡೆದಿರುವ ಈ ಪ್ರಕರಣದಲ್ಲಿ ಒಂದೊಂದೇ ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ.
10 ದಿನಗಳ ಹಿಂದೆಯೇ ಮೊಬೈಲ್ ಸ್ವಿಚ್ಆಫ್:
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಹತ್ತು ದಿನಗಳ ಹಿಂದೆಯೇ ಮಹಿಳೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ಮಹಾಲಕ್ಷ್ಮಿ ಕಳೆದ ಒಂದು ವಾರದಿಂದ ಕೆಲಸಕ್ಕೆ ಹೋಗಿಲ್ಲ. ವಾಸವಿರುವ ಮನೆಯ ಬಳಿಯೂ ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ. 10 ದಿನಗಳ ಹಿಂದೆಯೇ ಮಹಾಲಕ್ಷ್ಮಿ ಮೊಬೈಲ್ ಸಹ ಸ್ವಿಚ್ಆಫ್ ಆಗಿದೆ. ಹಾಗಾಗಿ 10 ದಿನಗಳ ಹಿಂದೆಯೇ ಕೊಲೆಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಮಹಾಲಕ್ಷ್ಮಿ ಮೂಲ ನೇಪಾಳದವವರು. ಈಕೆ ಗಂಡ ನೆಲಮಂಗಲದ ಬಸವಣ್ಣ ದೇವರ ಮಠದಲ್ಲಿ ಕೆಲಸ ಮಾಡುತ್ತಿದ್ದನಂತೆ. ಗಂಡನಿಂದ ದೂರವಾದ ಮಹಾಲಕ್ಷ್ಮೀ ಮಲ್ಲೇಶ್ವರಂನಲ್ಲಿರುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಫ್ಯಾಕ್ಟರಿ ಸ್ಟಾಫ್ ಆಗಿ ಕೆಲಸ ಮಾಡುತ್ತಿದ್ದ ಯುವತಿ, ಕಳೆದ ಎರಡು ವಾರದಿಂದ ಕೆಲಸಕ್ಕೆ ಹೋಗಿಲ್ಲ. ಕಂಪನಿಯಿಂದ ಕಾಲ್ ಮಾಡಿದ್ರೂ ಫೋನ್ ಸ್ವಿಚ್ ಆಫ್ ಆಗಿತ್ತು.
ಜೊತೆಗೆ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕಾಲ್ ಮಾಡಿದ್ರೂ ರೆಸ್ಪಾನ್ಸ್ ಮಾಡಿಲ್ಲ. ಮಹಾಲಕ್ಷ್ಮಿಗೆ ಕಟ್ಟಿಂಗ್ ಶಾಪ್ನಲ್ಲಿ ಕೆಲಸ ಮಾಡೋನ ಜೊತೆ ಆತ್ಮೀಯತೆ ಬೆಳೆದಿತ್ತಂತೆ. ಇದೇ ವಿಚಾರಕ್ಕೆ ಜಗಳ ನಡೆದು ಮಹಾಲಕ್ಷ್ಮಿ ಒಂಟಿಯಾಗಿ ವೈಯಾಲಿಕಾವಲ್ನಲ್ಲಿ ರೂಮ್ ಮಾಡ್ಕೊಂಡಿದ್ದಳು. ಹಲವು ದಿನದಿಂದ ಪತಿ ಕರೆ ಮಾಡಿದಾಗ ಮಹಾಲಕ್ಷ್ಮಿ ಕರೆ ಸ್ವೀಕರಿಸಿರಲಿಲ್ಲ. ಇಂದು ಬಂದು ಬಾಗಿಲು ತೆರೆದು ನೋಡಿದಾಗ ಈ ಭೀಕರ ಘಟನೆ ಬೆಳಕಿಗೆ ಬಂದಿದೆ.
ಕೊಲೆ ಮಾಡಿ ಎಸ್ಕೇಪ್ ಆಗಲು ಹಂತಕ ಮಾಸ್ಟರ್ ಪ್ಲಾನ್ ಮಾಡಿದ್ನಾ ಎಂಬ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದೆ. ಫ್ರಿಜ್ನಲ್ಲಿ ಮೃತ ದೇಹದ ತುಂಡು ಕತ್ತರಿಸಿ ಇಟ್ಟರೆ ಅಷ್ಟು ಸುಲಭದಲ್ಲಿ ಗೊತ್ತಾಗಲ್ಲ. ತಪ್ಪಿಸಿಕೊಳ್ಳಲು ಸಮಯ ಸಿಗುತ್ತೆ ಎಂದು ಈ ಪ್ಲಾನ್ ಮಾಡಿದ್ನಾ? 15 ದಿನದ ಹಿಂದೆ ಕೊಲೆ ಆಗಿದ್ದರೂ ಕೂಡ ವಾಸನೆ ಬರೋದಿಲ್ಲ ಎಂದು ಫ್ರಿಡ್ಜ್ ಕೂಡ ಆನ್ ಮಾಡಿ ಇಟ್ಟುಹೋಗಿದ್ನಾ ಎಂಬ ಸಾಕಷ್ಟು ಅನುಮಾನ ಹುಟ್ಟುಕೊಂಡಿವೆ. ತಪ್ಪಿಸಿಕೊಳ್ಳಲು ಸಮಯ ಬೇಕಾಗುತ್ತೆ ಅಂತಲೇ ಈ ರೀತಿ ಮಾಡಿದ್ನಾ ಎಂಬ ಸಂಶಯ ಮೂಡಿದೆ. ಆರೋಪಿಯ ಜಾಡು ಪತ್ತೆ ಮಾಡುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ.
ಇನ್ನು ಅಚ್ಚರಿಯ ವಿಷಯ ಏನಂದ್ರೆ, ಕೊ*ಲೆಗಾರ ಮೃತದೇಹವನ್ನು ಫ್ರಿಡ್ಜ್ನಲ್ಲಿ ಉಲ್ಟಾ ಮಾಡಿ ಇಟ್ಟಿದ್ದ. ಮೃತಳ ತಲೆಯನ್ನು ಫ್ರಿಡ್ಜ್ನ ತಳ ಭಾಗದಲ್ಲಿ ಮತ್ತು ಕೈ ಮತ್ತು ಕಾಲುಗಳನ್ನು ಮೇಲ್ಭಾಗದಲ್ಲಿ ಇಡಲಾಗಿತ್ತು. ಮುಖವನ್ನು ಸಹ ಹೊರಗೆ ಕಾಣಿಸದಂತೆ ತಿರುಗಿಸಿ ಇಟ್ಟಿದ್ದ. ವೈಯಾಲಿಕಾವಲ್ ಪೊಲೀಸರು, FSL ತಂಡದ ಪರಿಶೀಲನೆಯ ಬಳಿಕ ಮೃತದೇಹದ ಪೀಸ್, ಪೀಸ್ಗಳನ್ನು ಲೆಕ್ಕ ಹಾಕಲಾಗಿದೆ. ಸದ್ಯ 50ಕ್ಕೂ ಹೆಚ್ಚು ಮೃತದೇಹದ ಬಿಡಿ ಭಾಗಗಳನ್ನು ತುಂಬಿಕೊಂಡು ಬೌರಿಂಗ್ ಆಸ್ಪತ್ರೆಗೆ ಸಾಗಿಸಲಾಗಿದೆ. ಪೀಸ್ಗಳ ಸ್ಯಾಂಪಲ್, ಅಳತೆ, ಬೌನ್ ಸ್ಯಾಂಪಲ್ನ ಮಾಹಿತಿಯನ್ನು ಕಲೆ ಹಾಕಲಾಗಿದೆ.
ದೇಹದ ತುಂಡುಗಳಿಂದ ಹಂತ ಹಂತವಾಗಿ ರಕ್ತ ಫ್ರಿಜ್ನಿಂದ ತೊಟ್ಟಿಕ್ಕಿದೆ. ಬಳಿಕ ರಕ್ತ ತೊಟ್ಟಿಕ್ಕಿ ಗೊಬ್ಬರ ಮಾದರಿ ಆಗಿ ಹುಳ ಆಗಿದೆ. ಸದ್ಯ ಪೊಲೀಸರು ಹಾಗು ಎಫ್ಎಸ್ಎಲ್ ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ ಸಿಕ್ಕಿರುವ ಎಫ್ಎಸ್ಎಲ್ ಫ್ರೀಜರ್ನಿಂದ ದೇಹದ ಪೀಸ್ಗಳನ್ನು ಹೊರ ತೆಗೆದು ಎಲ್ಲಾ ಆಯಾಮದಲ್ಲಿ ಸ್ಯಾಂಪಲ್ಸ್ ಕಲೆಹಾಕಿದ್ದಾರೆ. ಫ್ರೀಡ್ಜ್ನಿಂದ ದೇಹದ ಪೀಸ್ಗಳನ್ನು ಹೊರ ತೆಗೆದ ಅಧಿಕಾರಿಗಳು ಆರೋಪಿಯ ಬಂಧನಕ್ಕಾಗಿ ಎಂಟು ತಂಡ ರಚನೆ ಮಾಡಿದ್ದಾರೆ. ಮಹಾಲಕ್ಷ್ಮಿ ಜೊತೆ ಓರ್ವ ಯುವಕ ನಿರಂತರ ಸಂಪರ್ಕದಲ್ಲಿದ್ದು, ಪಿಕಪ್ ಡ್ರಾಪ್ ಕೊಡುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಹೀಗಾಗಿ ಆತನ ಮೇಲೆ ಬಲವಾದ ಶಂಕೆ ವ್ಯಕ್ತವಾಗಿದ್ದು, ಆರೋಪಿಯ ಪತ್ತೆಗಾಗಿ ತನಿಖೆ ಮುಂದುವರಿದಿದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






