ಸಚಿವ ಜಮೀರ್ ಅಹಮದ್ ಖಾನ್ ಪಾಕಿಸ್ತಾನ ಏಜೆಂಟ್ ಆಗಿದ್ದಾರೆ: ಎಸ್ ಮುನಿಸ್ವಾಮಿ

ಕೋಲಾರ: ಸಚಿವ ಜಮೀರ್ ಅಹಮದ್ ಖಾನ್ ಪಾಕಿಸ್ತಾನ ಏಜೆಂಟ್ ಆಗಿದ್ದಾರೆ ಎಂದು ಮಾಜಿ ಸಂಸದ ಎಸ್ ಮುನಿಸ್ವಾಮಿ ಹೇಳಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಹಿಂದೂಸ್ತಾನ - ಪಾಕಿಸ್ತಾನ ಅಂತ ದೇಶ ವಿಭಜನೆ ವೇಳೆ ಎಲ್ಲಾ ಜಾಗವೂ ಹಿಂದೂಸ್ತಾನಕ್ಕೆ ಸೇರಿದ್ದು. ಆದ್ರೆ ಈಗ ಲಕ್ಷಾಂತರ ಕೋಟಿ ರೂ. ಮೌಲ್ಯದ ಜಮೀನುಗಳನ್ನು ಕಾನೂನು ಬಾಹಿರವಾಗಿ ವಕ್ಫ್ ಬೋರ್ಡ್ ಗೆ ಬರೆದಿದ್ದಾರೆ.
ಸಚಿವ ಜಮೀರ್ ಅಹಮದ್ ಖಾನ್ ಪಾಕಿಸ್ತಾನ ಏಜೆಂಟ್ ಆಗಿದ್ದಾರೆ. ಪಾಕಿಸ್ತಾನದವರ ಮೇಲೆ ಹೆಚ್ಚು ಪ್ರೀತಿಯಾಗಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಇಷ್ಟ ಆಗಿರುವ ರೈತರ ಜಮೀನುಗಳನ್ನು ಖಾತೆ ಬದಲಾವಣೆ ಮಾಡಿ ವಕ್ಫ್ ಬೋರ್ಡ್ ಗೆ ಸೇರಿಸಿದ್ದಾರೆ. ದೇಶದಿಂದ ನಿಮ್ಮನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು. ತಪ್ಪು ಮಾಡಿರುವ ನಿಮಗೆ ಶಿಕ್ಷೆ ಆಗುವವರೆಗೂ ನಾವು ಬಿಡುವುದಿಲ್ಲ ಎಂದರು.
ನಿಮ್ಮ ಪ್ರತಿಕ್ರಿಯೆ ಏನು?






